ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ 43 ದಿನಗಳ ಬಳಿಕ ತಂದೆ ಕೆ.ಕೆ.ಸಿಂಗ್ ಪುತ್ರನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಪಾಟ್ನಾದಲ್ಲಿ ದೂರು ದಾಖಲಿಸಿದ್ದಾರೆ. 43 ದಿನಗಳ ಬಳಿಕ ದೂರು ದಾಖಲಿಸಿದ್ದೇಕೆ ಎಂಬುದನ್ನು ಸ್ವತಃ ಕೆ.ಕೆ.ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಆರಂಭದಲ್ಲಿ ನಟಿ ರಿಯಾ ಮೇಲೆ ಯಾವುದೇ ಅನುಮಾನಗಳಿರಲಿಲ್ಲ. ಕೆಲ ದಿನಗಳಲ್ಲಾದ ಬದಲಾವಣೆಗಳಿಂದ ರಿಯಾ ಮೇಲಿನ ಅನುಮಾನ ಬಲವಾಯ್ತು. ಹಾಗಾಗಿ ಪುತ್ರನ ಸಾವಿನಲ್ಲಿ ರಿಯಾ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತವಾಯ್ತು. ಹೀಗಾಗಿ ರಿಯಾ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಕೆ.ಕೆ.ಸಿಂಗ್ ಆಪ್ತರು ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್
ಮುಂಬೈ ಪೊಲೀಸರು ಹೇಳಿಕೆ ದಾಖಲಿಸಿಕೊಂಡಾಗ ಸುಶಾಂತ್ ಕುಟುಂಬಸ್ಥರು ರಿಯಾ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ರಿಯಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇತ್ತ ರಿಯಾ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ರಿಯಾಗೆ ನಾನೆಂದೂ ಸುಶಾಂತ್ನನ್ನು ಬಿಟ್ಟು ಬರೋಕೆ ಹೇಳಿರಲಿಲ್ಲ: ಮಹೇಶ್ ಭಟ್
ಸುಶಾಂತ್ ಗೆ ಬರುತ್ತಿದ್ದ ಸಿನಿಮಾಗಳಿಗೆ ರಿಯಾ ಷರತ್ತು ವಿಧಿಸುತ್ತಿದ್ದಳು. ಸುಶಾಂತ್ ಸಿನಿಮಾದಲ್ಲಿ ತನ್ನನ್ನೇ ನಾಯಕಿಯನ್ನಾಗಿ ಕಾಸ್ಟ್ ಮಾಡಬೇಕು ಎಂದು ನಿರ್ದೇಶಕರ ಮುಂದೆ ಕಂಡೀಷನ್ ಹಾಕುತ್ತಿದ್ದಾರೆ. ಸುಶಾಂತ್ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಲ್ಲ ಆಪ್ತರನ್ನು ರಿಯಾ ಬದಲಿಸಿದ್ದಳು. ತನಗೆ ಬೇಕಾದವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಳು. ಇತ್ತೀಚೆಗೆ ಸುಶಾಂತ್ ಫೋನ್ ನಂಬರ್ ಸಹ ರಿಯಾ ಬದಲಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಸುಶಾಂತ್ ನನಗೆ ಫೋನ್ ಮಾಡಿದ್ದಾಗ ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಗ್ತಿದೆ ಎಂದು ಹೇಳಿಕೊಂಡಿದ್ದನು. ಕೆಲ ದಿನಗಳ ಬಳಿಕ ಸುಶಾಂತ್ ದೆಹಲಿಯಲ್ಲಿರು ಸೋದರಿಯ ಮನೆಗ ಹೋಗಿದ್ದನು. ಮೂರು ದಿನಗಳ ಬಳಿಕ ಪದೇ ಪದೇ ಫೋನ್ ಮಾಡಿದ್ದ ರಿಯಾ ಮಗನನ್ನು ಕರೆಸಿಕೊಂಡಿದ್ದಳು ಎಂದು ಕೆ.ಕೆ.ಸಿಂಗ್ ಹೇಳಿದ್ದಾರೆ.