ಬೆಂಗಳೂರು: ರಾಜ್ಯದಲ್ಲಿಂದು 414 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಗುಣಮುಖರಾಗಿ 486 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,45,270ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಮಹಾಮಾರಿಗೆ 12,265 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 5,836 ಸಕ್ರಿಯ ಪ್ರಕರಣಗಳ ಪೈಕಿ 132 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.68 ಮತ್ತು ಮರಣ ಪ್ರಮಾಣ ಶೇ.0.48ರಷ್ಟಿದೆ. ಇಂದು 60,876 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 86,767 ಜನರು ಕೊರೊನಾ ಲಸಿಕೆಯನ್ನು ಪಡದುಕೊಂಡಿದ್ದಾರೆ.
ಕೊರೊನಾ ಲಸಿಕೆ ವಿವರ: ಬಾಗಲಕೋಟೆ 1,239, ಬಳ್ಳಾರಿ 4,234, ಬೆಳಗಾವಿ 5,196, ಬೆಂಗಳೂರು ಗ್ರಾಮಾಂತರ 1,076, ಬೆಂಗಳೂರು ನಗರ 11,683, ಬೀದರ್ 1,822, ಚಾಮರಾಜನಗರ 762, ಚಿಕ್ಕಬಳ್ಳಾಪುರ 2,343, ಚಿಕ್ಕಮಗಳೂರು 2,583, ಚಿತ್ರದುರ್ಗ 2,478, ದಕ್ಷಿಣ ಕನ್ನಡ 2,799, ದಾವಣಗೆರೆ 1,377, ಧಾರವಾಡ 2,366, ಗದಗ 3,272, ಹಾಸನ 2,896, ಹಾವೇರಿ 1,454, ಕಲಬುರಗಿ 2,210, ಕೊಡಗು 1,017, ಕೋಲಾರ 2,923, ಕೊಪ್ಪಳ 2,498, ಮಂಡ್ಯ 1,584, ಮೈಸೂರು 3,867, ರಾಯಚೂರು 2278, ರಾಮನಗರ 1,053, ಶಿವಮೊಗ್ಗ 1,975, ತುಮಕೂರು 7,925, ಉಡುಪಿ 2,318, ಉತ್ತರ ಕನ್ನಡ 3,225, ವಿಜಯಪುರ 5,066 ಮತ್ತು ಯಾದಗಿರಿಯಲ್ಲಿ 1,251
ಕೊರೊನಾ ಪ್ರಕರಣಗಳು: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 241, ಬೀದರ್ 1, ಚಾಮರಾಜನಗರ 1, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 3, ಚಿತ್ರದುರ್ಗ 6, ದಕ್ಷಿಣ ಕನ್ನಡ 24, ದಾವಣಗೆರೆ 8, ಧಾರವಾಡ 14, ಗದಗ 2, ಹಾಸನ 7, ಹಾವೇರಿ 0, ಕಲಬುರಗಿ 12, ಕೊಡಗು 2, ಕೋಲಾರ 9, ಕೊಪ್ಪಳ 1, ಮಂಡ್ಯ 10, ಮೈಸೂರು 21, ರಾಯಚೂರು 3, ರಾಮನಗರ 0, ಶಿವಮೊಗ್ಗ 0, ತುಮಕೂರು 15, ಉಡುಪಿ 13, ಉತ್ತರ ಕನ್ನಡ 1, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.