ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣ – ನಾಲ್ವರ ಬಂಧನ

Public TV
1 Min Read
YGR ARREST

ಯಾದಗಿರಿ: ಜನಾರ್ಶೀವಾದ ಯಾತ್ರೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೊಂದಿಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಯರಗೋಳ ಗ್ರಾಮದ ಮೊನಪ್ಪ, ಶರಣಪ್ಪ, ನಿಂಗಪ್ಪ ಹಾಗೂ ದೇವಿಂದ್ರಪ್ಪ ಎಂಬುದಾಗಿ ಗುರುತಿಸಲಾಗಿದೆ. ಇವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

YGR ARREST 3

ಬಂಧನಕ್ಕೊಳಗಾದ ಎಲ್ಲರೂ ಸಹ ಅಮಾಯಕ ರೈತರು, ಬೆಳೆನಾಶ ಮಾಡುವ ಪ್ರಾಣಿಗಳನ್ನು ಓಡಿಸಲು ನಾಡಬಂದೂಕು ಲೈಸೆನ್ಸ್ ಪಡೆದ್ದು, ಇಂದು ಕೇಂದ್ರ ಸಚಿವ ಖೂಬಾ ಬರುವ ಹಿನ್ನೆಲೆ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಂದೂಕಿನಿಂದ ಸ್ವಾಗತಕೋರಲು ತಿಳಿಸಿದ್ದರಂತೆ. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

YGR ARREST 2

ಅವರ ಮಾತು ಕೇಳಿಕೊಂಡು ಈ ನಾಲ್ವರು ಗಾಳಿಯಲ್ಲಿ ಗಂಡು ಹಾರಿಸಿದ್ದಾರೆ. ಸದ್ಯ ಈ ನಾಲ್ವರು ಬಲಿ ಬಾ ಬಕ್ರ ಆಗಿದ್ದು, ಈ ಅಮಾಯಕರನ್ನು ಬಳಸಿಕೊಂಡು ಸ್ಕೆಚ್ ಹಾಕಿದ ಜನಪ್ರತಿನಿಧಿಗಳು ಮಾತ್ರ, ಆರಾಮವಾಗಿ ಓಡಾಡುತ್ತಿದ್ದಾರೆ. ಇವರ ಮಾತು ನಂಬಿ ಕೆಟ್ಟೆವು ಅಂತ ಆರೋಪಿಗಳು ಪಶ್ಚಾತ್ತಾಪ ಪಡುತ್ತಿದ್ದಾರೆ. ಇತ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕೈಯಲ್ಲಿ ಬಂದೂಕು ಹಿಡಿದ ಸಾಕ್ಷಿಯಿದ್ದರೂ ಪೊಲೀಸರು ಮಾತ್ರ ಜಾಣ ನಡೆ ತೋರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *