ನೆಲಮಂಗಲ: ಇಷ್ಟು ದಿನ ಅನರ್ಹ ಶಾಸಕರರ ಸುದ್ದಿ ನೋಡಿದ್ದೀರಿ. ಇದೀಗ ಪಂಚಾಯ್ತಿ ಸದಸ್ಯರನ್ನು ಅನರ್ಹ ಮಾಡಿರುವ ಘಟನೆಯೊಂದು ನಡೆದಿದೆ.
ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯ್ತಿಯ ನಾಲ್ವರ ಸದಸ್ಯತ್ವ ರದ್ದಾಗಿದೆ. ಗ್ರಾಮ ಪಂಚಾಯ್ತಿಯ ನಾಲ್ಕು ಸಭೆಗಳಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ನಾಲ್ವರನ್ನ ಸದಸ್ಯತ್ವದಿಂದ ಅನರ್ಹ ಮಾಡಿ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.
ಎಲ್ಲಾ ವಿಚಾರಣೆಗಳ ಬಳಿಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ಅಧಿನಿಯಮ 1993ರ 43(ಎ)(111)ರಡಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸಾವಿತ್ರಮ್ಮ, ನರಸಮ್ಮ, ಹನುಮಂತರಾಯಪ್ಪ, ಶಾಂತಮ್ಮ ಇವರುಗಳ ಸದಸ್ಯತ್ವ ರದ್ದು ಮಾಡಿದೆ.
ಒಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಸಭೆಗಳ ಬಗ್ಗೆ ನಿರ್ಲಕ್ಷ್ಯವಹಿಸಿ ಬೇಕಾಬಿಟ್ಟಿ ಸಭೆಗಳಿಗೆ ಆಗಮಿಸುತ್ತಿದ್ದ, ಗೈರಾಗುತ್ತಿದ್ದ ಎಲ್ಲಾ ಪಂಚಾಯ್ತಿಯ ಸದಸ್ಯರಿಗೂ ಎಚ್ಚರಿಕೆಯ ಕರೆ ಗಂಟೆಯಾಗಿದೆ.