Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಒಟ್ಟಿಗೆ ಜನಿಸಿದ ಐವರಲ್ಲಿ ನಾಲ್ವರಿಗೆ ಒಂದೇ ದಿನ ಮದ್ವೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಒಟ್ಟಿಗೆ ಜನಿಸಿದ ಐವರಲ್ಲಿ ನಾಲ್ವರಿಗೆ ಒಂದೇ ದಿನ ಮದ್ವೆ!

Latest

ಒಟ್ಟಿಗೆ ಜನಿಸಿದ ಐವರಲ್ಲಿ ನಾಲ್ವರಿಗೆ ಒಂದೇ ದಿನ ಮದ್ವೆ!

Public TV
Last updated: November 8, 2019 4:24 pm
Public TV
Share
3 Min Read
kerala
SHARE

– ದೇಶಾದ್ಯಂತ ಸುದ್ದಿಯಾಗಿತ್ತು 5 ಮಕ್ಕಳ ಜನನ
– ಪತಿ ಆತ್ಮಹತ್ಯೆ ಮಾಡಿದ್ರೂ ಕಷ್ಟದಿಂದ ಮಕ್ಕಳನ್ನು ಬೆಳೆಸಿದ ತಾಯಿ

ತಿರುವನಂತಪುರ: ದೇವರ ನಾಡಿನಲ್ಲಿ 1995ನೇ ಇಸವಿಯಲ್ಲಿ ಅವರ ಹುಟ್ಟು ಭಾರೀ ಸದ್ದು ಮಾಡಿತ್ತು. ಹೌದು. ಒಂದೇ ಬಾರಿಗೆ ಐವರು ಮಕ್ಕಳ ಜನನವಾಗಿತ್ತು. ಆ ಬಳಿಕ ಅವರು ಶಾಲೆ, ಕಾಲೇಜು, ಮತದಾನ ಹೀಗೆ ತಮ್ಮ ಎಲ್ಲ ಮೊದಲುಗಳನ್ನು ಒಟ್ಟಿಗೆ ಮಾಡುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು.

ಹೀಗೆ ತಮ್ಮೆಲ್ಲ ಮೊದಲುಗಳನ್ನು ಒಟ್ಟಿಗೆ ಮುಗಿಸಿ ಈ ಐವರಲ್ಲಿ ನಾಲ್ವರು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇತ್ತ ತಮ್ಮೊಟ್ಟಿಗೆ ಜನಿಸಿದ್ದ ಸಹೋದರ ಮಾತ್ರ ಸಹೋದರಿಯರ ಮದ್ವೆ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ.

KERALA MARRIAGE

1995ರ ನವೆಂಬರ್ 18ರಂದು ನಾಲ್ವರು ಹೆಣ್ಣು ಹಾಗೂ ಓರ್ವ ಮಗನ ಜನನವಾದ ಸಮಯದಲ್ಲಿ ತಂದೆ ಒಂದು ಸಣ್ಣ ವ್ಯಾಪಾರಿಯಾಗಿದ್ದರು. ಆದರೆ ಈ ಐವರು ಒಂದೇ ಬಾರಿ ಜನಿಸಿದ್ದರಿಂದ ಸಹಜವಾಗಿಯೇ ತಂದೆ ಅಚ್ಚರಿಗೊಳಗಾಗಿದ್ದರು. ಅಲ್ಲದೆ ಐವರಿಗೂ ಒಂದೇ ರೀತಿ ಹೆಸರು ಬರುವಂತೆ ಇಡಲಾಯಿತು. ಉತ್ರಜ, ಉತ್ತರ, ಉತ್ತಮ, ಉತ್ರ ಹಾಗೂ ಉತ್ರಜನ್ ಎಂಬುದಾಗಿ ಇವರುಗಳಿಗೆ ನಾಮಕರಣ ಮಾಡಲಾಯಿತು. ಯಾಕಂದ್ರೆ ಇವರೆಲ್ಲರೂ ಮಲಯಾಳಂ ಕ್ಯಾಲೆಂಡರ್ ಪ್ರಕಾರ ಉತ್ರಮ್(ಉತ್ತರ) ನಕ್ಷತ್ರದಲ್ಲಿ ಹುಟ್ಟಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ‘ಉ’ನಿಂದ ಪ್ರಾರಂಭವಾಗುವ ಅಕ್ಷರದಿಂದ ಹೆಸರಿಡಲಾಯಿತು.

ಐವರು ಮಕ್ಕಳ ಆಗಮನವಾಗುತ್ತಿದ್ದಂತೆಯೇ ತಮ್ಮ ಮನೆಯ ಹೆಸರು ಬದಲಾಯಿಸಿ `ಪಂಚರತ್ನಮ್'(ಐದು ರತ್ನ) ಎಂದು ಮರು ಹೆಸರಿಡಲಾಯಿತು. ಬೆಳೆಯುತ್ತಾ ಮಕ್ಕಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದರು. ಆದರೆ ಇದು ಅವರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಈ ಐವರಿಗೂ ಒಂದೇ ತರನಾದ ಬಟ್ಟೆ, ಬ್ಯಾಗ್, ಕೊಡೆಗಳನ್ನು ನೀಡಲು ತಂದೆ ತುಂಬಾನೇ ಕಷ್ಟ ಪಡುತ್ತಿದ್ದರು. ಮಕ್ಕಳು ಕೂಡ ತಮಗೆ ಒಂದೇ ರೀತಿಯ ವಸ್ತುಗಳ ಆಗಬೇಕು ಎಂದು ತಂದೆಯನ್ನು ಒತ್ತಾಯಿಸುತ್ತಿದ್ದರು. ಹೀಗಾಗಿ ಬಡ ವ್ಯಾಪಾರಿಯಾಗಿದ್ದ ತಂದೆಗೆ ಮತ್ತಷ್ಟು ಕಷ್ಟವಾಗುತ್ತಿತ್ತು. ಆದರೂ ಧೃತಿಗೆಡದ ತಂದೆ ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸಿ ಅವರನ್ನು ಸಂತೈಸುತ್ತಿದ್ದರು.

KARALA 1

ಇತ್ತ ತಾಯಿಗೆ ಹೃದಯ ಸಮಸ್ಯೆ ಉಂಟಾಯಿತು. ಇದರ ಜೊತೆ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಕೂಡ ಎದುರಾಯಿತು. ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾದವು. ದುರಂತವೆಂದರೆ ಐವರು ಹುಟ್ಟಿದ 9 ವರ್ಷಗಳ ಬಳಿಕ ಅಂದರೆ 2004 ನೇ ಇಸ್ವಿಯಲ್ಲಿ ತಂದೆ ಆತ್ಮಹತ್ಯೆಗೆ ಶರಣಾದರು. ಈ ಮೂಲಕ ಪತ್ನಿ ಹಾಗೂ ತನ್ನ ಐವರು ಮಕ್ಕಳನ್ನು ಅಗಲಿದರು.

ತಂದೆಯ ಮರಣದ ಸುದ್ದಿ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿತ್ತು. ಅಲ್ಲದೆ ಕುಟುಂಬದ ಸಹಾಯಕ್ಕೆ ಎಲ್ಲರೂ ಕೈಜೋಡಿಸಿದರು. ಪರಿಣಾಮ ತಾಯಿಗೆ ಸರ್ಕಾರಿ ಉದ್ಯೋಗ ಸಿಕ್ಕಿತು. ಇತ್ತ ಮಾಧ್ಯಮ ಮಂದಿಯೂ ಕುಟುಂಬದ ಜೀವನ ನಿರ್ವಹಣೆಗೆ ಸಹಾಯ ಮಾಡಿತು. ಅಂತೆಯೇ ತಾಯಿ ತನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸಿ ಒಳ್ಳೆಯ ಶಿಕ್ಷಣವನ್ನೂ ನೀಡಿದ್ದು, ಇದೇ ತಿಂಗಳು ಈ ಐವರೂ 24ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

1 16a07f8f1fa

ಈ ಐವರಲ್ಲಿ ಒಬ್ಬಳು ಫ್ಯಾಶನ್ ಡಿಸೈನರ್, ಇನ್ನಿಬ್ಬರು ಅರಿವಳಿಕೆ ತಂತ್ರಜ್ಞರು(ಅನಸ್ತೇಶಿಯಾ ಟೆಕ್ನಿಶಿಯನ್ಸ್), ಮತ್ತೊಬ್ಬಳು ಆನ್ ಲೈನ್ ಬರಹಗಾರ್ತಿಯಾಗಿದ್ದಾರೆ. ಸಹೋದರ ಉತ್ರಜನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಪತಿಯ ಹಠಾತ್ ಮರಣದ ಬಳಿಕ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ದಿನಕಳೆದಂತೆ ನಾನು ನನ್ನ ಮಕ್ಕಳನ್ನು ಸಾಕಬೇಕು. ಅದಕ್ಕೋಸ್ಕರ ಎಷ್ಟು ಕಷ್ಟವಾದರೂ ಪರವಾಗಿಲ್ಲ ಎದುರಿಸುತ್ತೇನೆ ಎಂದ ಛಲ ಬಂತು. ಮನಸ್ಸಿದ್ದರೆ ಮಾರ್ಗ ಎಂಬಂತೆ ನಾನು ಐವರು ಮಕ್ಕಳೊಂದಿಗೆ ಬದುಕಿ ತೋರಿಸಿದೆ ಎಂದು ಗಂಡನ ಮರಣದ ಬಳಿಕ ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಂಡು ಪತ್ನಿ ಕಣ್ಣೀರು ಹಾಕಿದ್ದಾರೆ.

love marriage pune

ಪತಿ ಜೀವಂತವಾಗಿದ್ದಾಗ ತನ್ನ ಐವರೂ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಅವರ ಕನಸನ್ನು ನನಸು ಮಾಡುವ ಸಲುವಾಗಿ ಒಂದೇ ದಿನ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ. ಆದರೆ ನನ್ನ ಮಗ ಇನ್ನಷ್ಟೂ ಎತ್ತರಕ್ಕೆ ಬೆಳೆಯಬೇಕೆಂಬ ಛಲ ಹೊಂದಿದ್ದು, ಹೀಗಾಗಿ ಆತನ ಮದುವೆ ಸ್ವಲ್ಪ ತಡವಾಗಬಹುದು ಎಂದು ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿಯಾಗಿರುವ ತಾಯಿ ತಿಳಿಸಿದ್ದಾರೆ.

TAGGED:husbandkeralamarriagePublic TVquintupletsWifeಐವರು ಮಕ್ಕಳುಕೇರಳಪತಿಪತ್ನಿಪಬ್ಲಿಕ್ ಟಿವಿಮದುವೆ
Share This Article
Facebook Whatsapp Whatsapp Telegram

Cinema news

Singer Mangli
ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? – ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ; FIR ದಾಖಲು
Bengaluru City Cinema Crime Latest Top Stories
Duniya Vijay 1
ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಬಾಗಲೂರು ಪೊಲೀಸರಿಂದ ನೋಟಿಸ್‌?
Cinema Latest Main Post Sandalwood
high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema

You Might Also Like

ಸಾಂದರ್ಭಿಕ ಚಿತ್ರ
Bengaluru City

ಸಹಜ ಸ್ಥಿತಿಗೆ ಮರಳುತ್ತಿದೆ ಆಟೋ ಚಾಲಕರ ಗ್ಯಾಸ್ ಪರದಾಟ

Public TV
By Public TV
18 minutes ago
Shobha Karandlaje 1
Bagalkot

ಮೀಸಲು ಕಾನೂನು – ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸ್ತ್ರೀ ಸಮಾವೇಶ: ಶೋಭಾ ಕರಂದ್ಲಾಜೆ

Public TV
By Public TV
28 minutes ago
Islamabad Talks
Latest

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ ಆರಂಭ – ಇರಾನಿನ ಕೆಲ ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ

Public TV
By Public TV
50 minutes ago
BMW Car Accident
Crime

ಕಾಂಕ್ರೀಟ್‌ ಮಿಕ್ಸ್‌ ಸಾಗಿಸ್ತಿದ್ದ ಟ್ರಕ್‌ ಉರುಳಿಬಿದ್ದು BMW ಕಾರು ಅಪ್ಪಚ್ಚಿ – ಹೈಕೋರ್ಟ್‌ನ ಹಿರಿಯ ವಕೀಲ ಸಾವು

Public TV
By Public TV
1 hour ago
zameer ahmed s.s.mallikarjun
Bengaluru City

ದಾವಣಗೆರೆ ದಕ್ಷಿಣ ದಂಗಲ್ ಎಫೆಕ್ಟ್ – ಸ್ವಪಕ್ಷದಲ್ಲೇ ಸಚಿವ ಜಮೀರ್‌ಗೆ ಟ್ರಬಲ್, ತಿರುಗಿಬಿದ್ದ ಮತ್ತೊಂದು ಮುಸ್ಲಿಂ ಬಣ

Public TV
By Public TV
2 hours ago
Shreyas Iyer 3
Cricket

ಶ್ರೇಯಸ್‌ ಪರಾಕ್ರಮ, ಚಂಡೀಗಢದಲ್ಲಿ ಹೈದರಾಬಾದ್‌ ಚೆಂಡಾಡಿದ ಪಂಜಾಬ್‌ – 6 ವಿಕೆಟ್‌ಗಳ ಅಮೋಘ ಜಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?