ನವದೆಹಲಿ: ನಾಲ್ವರು ಕಳ್ಳರು ಅಂಗಡಿಯವರನ್ನೇ ಕಟ್ಟಿ ಹಾಕಿ ತಿಜೋರಿಯಲ್ಲಿದ್ದ 26 ಲಕ್ಷ ರೂ. ಅನ್ನು ದೋಚಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.
ಶುಕ್ರವಾರ ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಜ್ಯೋತಿ ಮೆಟಲ್ ಸ್ಟೋರ್, ನವಾಬ್ ರಸ್ತೆ, ಸದರ್ ಬಜಾರ್ ನಲ್ಲಿ 12:45ಗೆ ನಾಲ್ವರು ಅಪರಿಚಿತ ವ್ಯಕ್ತಿಗಳು ಅಂಗಡಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಒಬ್ಬನ ಬಳಿ ಪಿಸ್ತೂಲ್ ಇದ್ದು, ಎಲ್ಲರನ್ನು ಬೆದರಿಸಿದ್ದಾನೆ. ಅದು ಅಲ್ಲದೇ ಅಂಗಡಿಯಲ್ಲಿದ್ದ ಕೆಲಸಗಾರ ಮತ್ತು ಇತರ ಇಬ್ಬರನ್ನು ಅಲ್ಲಿಯೇ ಕಟ್ಟಿ ಹಾಕಿ ತಿಜೋರಿಯಲ್ಲಿದ್ದ 26 ಲಕ್ಷವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರೇಪ್ ಎಂಜಾಯ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ – ರಮೇಶ್ ಪ್ರತಿಕೃತಿಗೆ ಪೊರಕೆ ಸೇವೆ
ಪೊಲೀಸ್ ಉಪ ಆಯುಕ್ತ(ಉತ್ತರ) ಸಾಗರ್ ಸಿಂಗ್ ಕಲ್ಸಿ ಈ ಕುರಿತು ಮಾಹಿತಿಯನ್ನು ನೀಡಿದ್ದು, ಈ ದರೋಡೆಯ ಬಗ್ಗೆ ಕೆಲಸಗಾರ ಪವನ್ ಪಚೌರಿ(54) ಮಧ್ಯಾಹ್ನ 1:15ಕ್ಕೆ ದೂರನ್ನು ನೀಡಿದರು. ತಕ್ಷಣ ನಮ್ಮ ತಂಡ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ಪರಿಶೀಲನೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು
ಅಂಗಡಿಯಲ್ಲಿದ್ದ ಪಚೌರಿ ಹಾಗೂ ಇತರ ಇಬ್ಬರನ್ನು ಕಟ್ಟಿಹಾಕಿ ತಿಜೋರಿಯಲ್ಲಿದ್ದ 26,01,450 ರೂ. ಅನ್ನು ಆರೋಪಿಗಳು ದರೋಡೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಈ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ