ಬೆಂಗಳೂರು: ಇಂದು 328 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇಂದು 350 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ 9,42,846ಕ್ಕೆ ಏರಿಕೆಯಾಗಿದ್ದು, 12,239 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 5934 ಸಕ್ರಿಯ ಪ್ರಕರಣಗಳಿದ್ದು, 143 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ಶೇ.0.67 ಮತ್ತು ಮರಣ ಪ್ರಮಾಣ ಶೇ.0.91ರಷ್ಟಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 127, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 13, ದಕ್ಷಿಣ ಕನ್ನಡ 40, ದಾವಣಗೆರೆ 0, ಧಾರವಾಡ 0, ಗದಗ 1, ಹಾಸನ 14, ಹಾವೇರಿ 3, ಕಲಬುರಗಿ 13, ಕೊಡಗು 1, ಕೋಲಾರ 11, ಕೊಪ್ಪಳ 1, ಮಂಡ್ಯ 6, ಮೈಸೂರು 48, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 8, ಉಡುಪಿ 8, ಉತ್ತರ ಕನ್ನಡ 2, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ 2ನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಶುರುವಾಗಿದೆ. ಮೊದಲ ದಿನವಾದ ಇಂದು ಕೊರೋನಾ ವಾರಿಯರ್ಸ್ ಕೊರೋನಾ ಲಸಿಕೆ ನೀಡಲಾಯ್ತು. ಡಿಸಿ, ಎಸ್ಪಿ, ಜಿಪಂ ಸಿಇಓ, ಕಂದಾಯ ಇಲಾಖೆ ನೌಕರರಿಗೆ ಇಂದು ವ್ಯಾಕ್ಸಿನ್ ಹಾಕಲಾಯ್ತು. ದಾವಣಗೆರೆ, ಚಾಮರಾಜನಗರ, ಬಳ್ಳಾರಿ ಶಿವಮೊಗ್ಗ, ರಾಯಚೂರಿನ ಹಿರಿಯ ಅಧಿಕಾರಿಗಳು ಲಸಿಕೆ ಪಡೆದು ಉಳಿದವರಿಗೆ ಧೈರ್ಯ ತುಂಬಿದ್ರು. ನಾಳೆಯಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ನೌಕರರು, ಪೊಲೀಸರಿಗೆ ನಾಳೆಯಿಂದ ಲಸಿಕೆ ಹಂಚಿಕೆ ಮಾಡಲಾಗುತ್ತದೆ