ಒಂದೇ ವಾರದಲ್ಲಿ 3 ನಿಗೂಢ ಸಾವು – ಅನಾರೋಗ್ಯಕ್ಕೊಳಗಾದವ್ರಿಗೆ ಬರೆ ಎಳೆಯುತ್ತಿರೋ ಗ್ರಾಮಸ್ಥರು

Public TV
1 Min Read
KLB BANAMATHI

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಪಸ್ತಾಪುರ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಒಂದೇ ವಾರದಲ್ಲಿ ಮೂವರು ನಿಗೂಢವಾಗಿ ಸಾವನ್ನಪಿರುವ ಘಟನೆ ನಡೆದಿದೆ.

vlcsnap 2017 09 22 10h54m01s220

ಅಲ್ಲದೇ ಗ್ರಾಮದ ಇತರೆ 8 ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಗ್ರಾಮದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ ಸಾವುಗಳಿಗೂ ಗ್ರಾಮದ ಜನರ ಮೇಲೆ ಭಾನಾಮತಿಯ ಪ್ರಯೋಗವಾಗಿರುವುದೇ ಕಾರಣ ಎಂದು ನಂಬಿರುವ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾದವರ ದೇಹದ ಮೇಲೆ `ಕುರುಪಿ’ ಮತ್ತು `ಬೀಡಿ’ಯಿಂದ ಬರೆ ಎಳೆಯುತ್ತಿದ್ದಾರೆ.

vlcsnap 2017 09 22 11h36m48s794

ಈ ವಿಷಯ ತಿಳಿದ ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಗ್ರಾಮಕ್ಕೆ ಭೇಟಿ ನೀಡಿದ್ದು, ಅವರೇ ಖುದ್ದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯಧಿಕಾರಿಗಳಿಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *