ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ತೆರೆ- ವೈವಿಧ್ಯತೆ ಮೆರೆದ 180 ದೇಶಗಳ ಜನ

Public TV
4 Min Read
Performers From Bolivia 1

ಬೆಂಗಳೂರು: ಮೂರು ದಿವಸಗಳ ವಿಶ್ವ ಸಾಂಸ್ಕೃತಿಕ ಉತ್ಸವವು (World Culture Festival) ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳ ವೈಭವಯುತವಾದ ಪ್ರದರ್ಶನಗಳೊಡನೆ ಭವ್ಯವಾಗಿ ಮುಕ್ತಾಯಗೊಂಡಿತು. ಇದರೊಡನೆ ಸರ್ವಧರ್ಮ ನಾಯಕರು ತಮ್ಮದೇ ಆದ ಶೈಲಿಯಲ್ಲಿ ವೇದಿಕೆಯ ಮೇಲೆ ಬಂದು ವಿಶ್ವ ಶಾಂತಿಗಾಗಿ, ದ್ವೇಷ ಮತ್ತು ಧರ್ಮಾಂಧತೆಯ ಮೇಲೆ ಎಲ್ಲರೂ ಏಳಲೆಂದು ಪ್ರಾರ್ಥಿಸಿದರು.

Panchabootam Symphony of 5 Indian classical dances at the World Culture Festival 2

ಕಳೆದ ಮೂರು ದಿನಗಳಲ್ಲಿ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಜನರು 180 ದೇಶಗಳಿಂದ ಬಂದು ವಾಷಿಂಗ್ಟನ್ ಡಿಸಿಯ (Washington DC) ನ್ಯಾಷನಲ್ ಮಾಲ್‍ನಲ್ಲಿ ಸೇರಿ ಭ್ರಾತೃತ್ವದ, ಸ್ವಕೀಯತೆಯ ಭಾವದ ಏಕೈಕ ಸಂದೇಶವನ್ನು ಜಗತ್ತಿಗೆ ಕಳುಹಿಸಿ ನೃತ್ಯ, ಸಂಗೀತ, ಧ್ಯಾನ ಮತ್ತು ಸಂಸ್ಕೃತಿಯೊಡನೆ ಮಾನವತ್ವದ ವೈವಿಧ್ಯತೆಯನ್ನು ಆಚರಿಸಿದರು. ಇದನ್ನೂ ಓದಿ: ವಿಶ್ವ ಸಾಂಸ್ಕೃತಿಕ ಉತ್ಸವ; ಉಕ್ರೇನ್‌ ಶಾಂತಿಗಾಗಿ ಪ್ರಾರ್ಥಿಸಿದ 180 ದೇಶಗಳ ಜನ

Vibe At The 2nd Day Of 4th Edition Of World Culture Festival 1

ಉತ್ಸವವು ಮಾನವ ಸಂಬಂಧಗಳ, ಐಕತೆಯ, ಮಾನವ ಚೇತನದ ಉತ್ಥಾಪನೆಯ ಭಾವದಿಂದ ಪೂರ್ಣವಾಗಿ ತುಂಬಿತ್ತು. ಉತ್ಸವದ ಅತೀ ಅವಿಸ್ಮರಣೀಯವಾದ ಕ್ಷಣಗಳೆಂದರೆ ಉಕ್ರೇನ್ ತಂಡದಿಂದ ಹೃದಯಸ್ಪರ್ಶಿಯಾದ ಪ್ರದರ್ಶನದ ನಂತರ ಗುರುದೇವರ ನೇತೃತ್ವದಲ್ಲಿ ಉಕ್ರೇನ್‍ಗಾಗಿ ನಡೆದ ಹೃದಯಾಂತರಾಳದ ಪ್ರಾರ್ಥನೆಯಾಗಿತ್ತು. ಇನ್ನೊಂದು ಅವಿಸ್ಮರಣೀಯವಾದ ವಿಷಯವೆಂದರೆ, ಗುರುದೇವರೊಡನೆ ಲಿಂಕನ್ ಸ್ಮಾರಕದೆದುರು ಯೋಗದ, ಯೋಗದ ಜ್ಞಾನದ ಹರಿತ. ಬಾಬ್ ಮಾರ್ಲೆಯ ಮೊಮ್ಮಗನಾದ ಸ್ಕಿಪ್ ಮಾರ್ಲೆ ಖ್ಯಾತ ಒನ್ ಲವ್ ಹಾಡಿದಾಗ ಎಲ್ಲರೂ ಬಾವುಟಗಳೊಡನೆ ತೂಗಿದರು. ಗೋ-ಗೋ ಬ್ಯಾಂಡ್ ನ ಕಂಪನಯುತವಾದ ಪ್ರದರ್ಶನಕ್ಕೆ ಗಣ್ಯರು ಹಾಗೂ ಪ್ರೇಕ್ಷಕರು ಸಂತೋಷದಿಂದ, ಸಂಭ್ರಮದಿಂದ, ಅವರ ಲಯದೊಡನೆ ನರ್ತಿಸಿದರು. ಮತ್ತೊಂದು ಐತಿಹಾಸಿಕ ಕ್ಷಣವೆಂದರೆ ವಿವಿಧ ಧರ್ಮಗಳ ನಾಯಕರು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ, ನೆರೆದಿದ್ದ ಎಲ್ಲರ ಹೃದಯಗಳನ್ನು ಗೆದ್ದರು.

Traditional Korean Dance

ಕೊಲಂಬಿಯಾದ ಸಂಸದರಾದ ಜುಆನ್ ಕಾರ್ಲೋಸ್ ಟೆರೆಸ್ ರವರು, ಗುರುದೇವರ ಈ ಜಗತ್ತಿನ ಒಂದು ದೇಶ ನಿಮಗೆ ಪೂರ್ಣ ಕೃತಜ್ಞತೆಯಿಂದ ಇದೆ. ಅದೇ ನನ್ನ ದೇಶ. ಬಗೋಟಾಗೆ ಬಂದು ನಮ್ಮ ಅಧ್ಯಕ್ಷರನ್ನು ಭೇಟಿ ಮಾಡಲು ನಿರ್ಧರಿಸಿ, ಹವಾನಾಗೆ ತೆರಳಿದಿರಿ. ಅಲ್ಲಿ ಎಫ್ ಎ ಆರ್ಸಿಯ ದಂಗೆಕೋರರೊಡನೆ ಮಾತುಕತೆ ನಡೆಸಿ, ಅವರು ಅಹಿಂಸೆಯ ಮಾರ್ಗದಲ್ಲಿ ನಡೆಯುವಂತೆ ಅವರನ್ನು ಒಪ್ಪಿಸಿದಿರಿ ಎಂದಾಗ ಚಪ್ಪಾಳೆಯು ಭೋರ್ಗರೆಯಿತು. ಈ ಉತ್ಸವದಲ್ಲಿ 17,000 ಕಲಾವಿದರು ಭಾಗವಹಿಸಿದರು. ಇದನ್ನೂ ಓದಿ: ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ಶ್ರೀ ಶ್ರೀ ರವಿಶಂಕರ್‌ ಗುರೂಜಿ

Timeless Echoes Artists from WFAC

ಜಗತ್ತಿನ ವಿವಿಧ ಪರಂಪರೆಗಳನ್ನು, ಸಂಸ್ಕøತಿಗಳನ್ನು ಪ್ರದರ್ಶಿಸಿದ 57 ಪ್ರದರ್ಶನಗಳು ನಡೆದವು. ಜಗತ್ತಿನ ವಾಣಿಜ್ಯ, ರಾಜಕೀಯ, ಧಾರ್ಮಿಕ ನಾಯಕರು ಉತ್ಸವದಲ್ಲಿ ಸೇರಿ, ಹೆಚ್ಚು ಸಹಕರಿಸುವ, ಪರಸ್ಪರ ಅವಲಂಬಿತವಾದ ಜಾಗತಿಕ ಸಮುದಾಯಕ್ಕಾಗಿ ಕರೆ ನೀಡಿದರು. ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರವರು ಉತ್ಸವದಲ್ಲಿ ಮಾತನಾಡಿ, ನಮ್ಮೆಲ್ಲರಲ್ಲೂ ಒಳ್ಳೆಯತನ ಅಡಗಿದೆ. ಅದು ಮೇಲೆದ್ದು ಬರಬೇಕಾಗಿದೆ. ನಾವೆಲ್ಲರೂ ಒಂದೇ ವಿಶ್ವದ ಕುಟುಂಬದವರು ಎಂದು ಅರಿತಾಗ ಇದು ಸಾಧ್ಯವಾಗುತ್ತದೆ ಎಂದರು.

Sounds of the Swiss Alps 1

ಭಾರತದ ಸಾಂಸ್ಕೃತಿಕ ವೈಭವವನ್ನು ಉತ್ಸವದಲ್ಲಿ ಪ್ರದರ್ಶಿಸಲಾಯಿತು. ‘ಪಂಚಭೂತಂ’ ಭಾರತದ ಐದು ಪಾರಂಪರಿಕ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಕಥಕ್, ಒಡಿಸ್ಸಿ, ಕೂಚುಪುಡಿ ಮತ್ತು ಮೋಹಿನಿಆಟ್ಟಂನ ಸಮ್ಮೇಳನವಾಗಿತ್ತು ಮತ್ತು ಇವರಿಗೆ 250 ಸಿತಾರ್ ವಾದಕರು, ವೀಣವಾದಕರು, ತಬಲ, ಮೃದಂಗಂ, ಕೊಳಲು, ಘಟಂ ಹಾಗೂ ಪಿಟೀಲುವಾದಕರು ಸಂಗೀತವನ್ನು ನೀಡಿದರು.

Sounds Of Pakistan 1

10,000 ಗರ್ಭ ನರ್ತಕರು ಗರ್ಭ ನೃತ್ಯವನ್ನು ಮಾಡಿದರು. 200 ಕಲಾವಿದರು ಭಾಂಗ್ರ ನೃತ್ಯವನ್ನು ಮಾಡಿದರು. ಕಾಶ್ಮೀರಿ ಜಾನಪದ ನೃತ್ಯ ಹಾಗೂ 200 ಚೆಂಡಮೇಳ ವಾದಕರು ಪ್ರದರ್ಶನವನ್ನು ನೀಡಿದರು. ಜಗತ್ತಿನ ಇತರ ಭಾಗಗಳಿಂದ ನಡೆದ ಪ್ರದರ್ಶನಗಳೆಂದರೆ ಮನ್ಸೆಳಯುವಂತಹ ಆಫ್ರಿಕಾ, ಜಪಾನ್, ಮಧ್ಯಕೊಲ್ಲಿಯ, ಕೆರಿಬಿಯನ್ ದ್ವೀಪದ, ಆಜೆರ್ಂಟಿನ, ನೇಪಾಳದ, ಸ್ಲಾವಿಕ್ ದೇಶಗಳ,ಮಂಗೋಲಿಯಾದ ನೃತ್ಯಗಳು. 1000 ಚೀನಿ-ಅಮೆರಿಕನ್ನರ ಹಾಡುಗಾರರು ಮತ್ತು ನರ್ತಕರು, ಪಾಕಿಸ್ತಾನದಿಂದ ನೃತ್ಯ ಪ್ರದರ್ಶನವೂ ನಡೆಯಿತು.

Skip Marley performing the Iconic One Love at the Art of Living s 4th WCF 1

ಮೋಹಿನಿಯಾಟ್ಟಂನ ನೃತ್ಯ ನಿರ್ದೇಶಕರಾದಷಬೀನ ಮೋಹನ್ರವರು, ಇದು ಬಹಳ ಅದ್ಭುತವಾದ, ಸುಂದರವಾದ ಪ್ರದರ್ಶನವಾಗಿದೆ. ಇದರೊಂದಿಗೆ ನಾವೂ ಬೆಳೆದೆವು ಎಂದರು. ಭಾರತದ ಮಾಜಿ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ರವರು (RamNathKovind), ಲಿಗುರುದೇವ್, ನೀವು ಇಲ್ಲಿ ಜಾಗತಿಕ ಕುಟುಂಬದ ಒಂದು ಪುಟ್ಟ ಪ್ರಪಂಚವನ್ನೇ ಸೃಷ್ಟಿಸಿರುವಿರಿ ಎಂದರು.

Gurudev says May there be peace love and prosperity all over the world at the Art of Living s 4th WCF

Mystical Afghan Performance

ಡಾ. ಎಸ್. ಜಯಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು, ಸಂಯುಕ್ತ ರಾಷ್ಟ್ರಗಳ 8ನೆಯ ಸೆಕ್ರೆಟರಿ ಜೆನರಲ್ ಆದ ಹೆಚ್.ಇ. ಬನ್ ಕೀ ಮೂನ್, ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಯುಎಸ್ ನ ಸರ್ಜನ್ ಜನರಲ್ ಆದ ಡಾ. ವಿವೇಕ್ ಮೂರ್ತಿ, ಡಿಸಿಯ ಮಹಾಪೌರರಾದಷಮುರಿಯಲ್ ಬೌಸರ್, ಜಪಾನಿನ ಸಂಸದ ಹಕುಬುನ್ ಶಿಮೋಮುರ, ಮಾಜಿ ಯುಎನ್ ನ ಡೆಪ್ಯೂಟಿ ಸೆಕ್ರೆಟರಿ ಜನರಲ್ ಹಾಗೂ ಯುಎನ್ ಈಪಿಯ ಎಕ್ಸ್ ಕ್ಯೂಟಿವ್ ನಿರ್ದೇಶಕ ಎರಿಕ್ ಸೋಲ್ಹೀಮ್ ಮತ್ತಿತರು ಉತ್ಸವದಲ್ಲಿ ಭಾಗವಹಿಸಿದ್ದರು.

Hundreds Of Thousands Of Meditating Under Gurudev s Guidance At The 4th WCF 1

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜಯಶಂಕರ್ ಅವರು, ಎಲ್ಲಾ ವಿಭಜನೆಗಳಿಗಿಂತಲೂ ಮಾನವತೆಯೇ ಮೇಲಿನದ್ದು ಎಂದು ಇಲ್ಲಿ ನೆರೆದಿರುವವರೆಲ್ಲರೂ ಶಕ್ತಿಶಾಲಿಯಾದ ಸಂದೇಶವನ್ನು ನೀಡುತ್ತಿದ್ದಾರೆ. ಶಾಂತಿ ಮತ್ತು ಸಾಮರಸ್ಯವು ಪ್ರಧಾನವಾಗಿರುವಂತಹ ಜಗತ್ತಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.

Celebrating 50 Years Of Hip Hop At The Art of Living s WCF

Honorable S. Jaishankar Minister of external affairs of India at the 4th Edition of The Art of Living s World Culture Festival 2023 1

ಸಂಯುಕ್ತ ರಾಷ್ಟ್ರಗಳ 8ನೆಯ ಸೆಕ್ರೆಟರಿ ಜನರಲ್ ಆದ ಹೆಚ್. ಇ. ಬನ್ ಕೀ ಮೂನ್ ರವರು, ಏಕತೆಯು ಒಂದು ಆಯ್ಕೆಯಲ್ಲ. ಅದು ನಮ್ಮೆಲ್ಲರ ಅವಶ್ಯಕತೆ. 2023ಯ ವಿಶ್ವ ಸಾಂಸ್ಕೃತಿಕ ಉತ್ಸವವು ನಾವೆಲ್ಲರೂ ಒಂದು ಸಾಮಾನ್ಯವಾದ ವಿಧಿಯನ್ನು ಹೊಂದಿದ್ದೇವೆ ಎಂದು ನಮಗೆಲ್ಲರಿಗೂ ನೆನಪಿಸುತ್ತಿದೆ ಎಂದರು.

A miilion people gather for the Art of Living s 4th World Culture Festival

Gurudev Sri Sri Ravishankar at WCF 2023 Day 1 1

ವಿವಿಧ ಹಿನ್ನೆಲೆಗಳಿಂದ ಬಂದಿದ್ದ ವಿವಿಧ ಧಾರ್ಮಿಕ ನಾಯಕರು ಏಕತೆ, ಕರುಣೆ ಮತ್ತು ಸಾಮೂಹಿಕ ಜವಾಬ್ದಾರಿಯು ಜಾಗತಿಕ ಶಾಂತಿಯ ಯತ್ನಕ್ಕಾಗಿ ಅತ್ಯವಶ್ಯಕ ಎಂದರು. ಯುಎಸ್‍ಎಯ ಸಿಖ್ ಧರ್ಮದ ದೂತರಾದ, ಪಶ್ಚಿಮ ಭಾಗದ ಸಿಖ್ ಧರ್ಮದ ಆಧ್ಯಾತ್ಮಿಕ ಅಧಿಕಾರಿಯಾದ, ಪ್ರಮುಖ ಧರ್ಮಾಧಿಕಾರಿಯಾದ, ಭಾಯಿ ಸಾಹಿಬ್ ಸತ್ಪಾಲ್ ಸಿಂಗ್ ಖಾಲ್ಸಾ, ಹೆಬ್ರೂ ಕಾಲೇಜಿನ ಅಧ್ಯಕ್ಷ ರಬ್ಬಿ ಶರೋನ್ ಅನಿಸ್ ಫೀಲ್ಡ್, ಝೊರಾಷ್ಟ್ರಿಯನ್ ಧರ್ಮದ ಸೌಸನ್ ಅಬಾಡಿಯನ್ ಇನ್ನಿತರ ಧಾರ್ಮಿಕ ನಾಯಕರು ಕೂಡ ಉಪಸ್ಥಿತರಿದ್ದರು.

Pershings Own The U.S. Army Blues 1

ತಮ್ಮ ಜ್ಞಾನವನ್ನು ಹಂಚಿಕೊಂಡ ಪೂಜ್ಯ ಭಾಯಿ ಸಾಹಿಬ್ ಸತ್ಪಾಲ್ ಸಿಂಗ್ ಖಾಲ್ಸಾರವರು, ನಮ್ಮೆಲ್ಲರನ್ನೂ ಬಂಧಿಸುವ ಒಂದು ಸಾಮಾನ್ಯ ಎಳೆಯನ್ನು ನಾವೆಲ್ಲರೂ ಗುರುತಿಸಬೇಕಾಗಿದೆ. ಇದು ಎಲ್ಲಾ ಗಡಿಗಳನ್ನೂ, ನಂಬಿಕೆಗಳನ್ನೂ ಮೀರಿರುವಂತಹ ಬಾಂಧವ್ಯ. ಚಿರಶಾಂತಿಗಾಗಿ ಇರುವ ಪಥವೆಂದರೆ ಏಕತೆ ಮತ್ತು ಕರುಣೆ ಎಂದರು.

Web Stories

Share This Article