3 ತಿಂಗಳಾದ್ರೂ ಬಾರದ 3 ಸಾವಿರ ಪ್ರೋತ್ಸಾಹ ಧನ- ಆಶಾ ಕಾರ್ಯಕರ್ತೆಯರು ಆಕ್ರೋಶ

Public TV
1 Min Read
CORONA

– ಸರ್ವೆ ವೇಳೆ ನೀರು ಕೇಳಿದ್ರೂ ಜನ ಕೊಡಲ್ಲ

ಕಲಬುರಗಿ/ಚಿತ್ರದುರ್ಗ: ಕೊರೊನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವ ಪಣಕಿಟ್ಟು ಸರ್ಕಾರ ನಿರ್ವಹಿಸಿದ ಕೆಲಸ ಮಾಡಿದ್ದಾರೆ. ಹೀಗಿದ್ದರು ಸಹ ರಾಜ್ಯ ಸರ್ಕಾರ ಘೋಷಿಸಿದ್ದ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಹಣ ಮಾತ್ರ ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CORONA 1

ಸುಮಾರು 44-45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದ್ದರೂ ಮನೆ ಮನೆಗೆ ಹೋಗಿ ಸರ್ವೇ ಮಾಡಿದ್ದೆವೆ. ಮನೆಯಲ್ಲಿದವರಿಗೇ ಕ್ವಾರಂಟೈನ್ ಹಾಗೂ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕೆಲಸ ಮಾಡುವಾಗ ಒಂದು ಗ್ಲಾಸ್ ನೀರು ಕೇಳಿದರೂ ಜನ ನಮಗೇ ಕೊರೊನಾ ಬಂದವರಂತೆ ನೋಡಿ ನೀರು ಸಹ ನೀಡುತ್ತಿಲ್ಲ. ಹೊರಗಡೆ ಖರೀದಿಸಬೇಕು ಅಂದ್ರು ಎಲ್ಲಾ ಅಂಗಡಿಗಳು ಬಂದ್ ಮಾಡಿದ ಹಿನ್ನೆಲೆಯಲ್ಲಿ ಸುಡು ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ರು ಸರ್ಕಾರ ಪ್ರೋತ್ಸಾಹ ಹಣ ನೀಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

CORONA 2

ಇತ್ತ ಚಿತ್ರದುರ್ಗದಲ್ಲಿ ಕೂಡ ಆಶಾ ಕಾರ್ಯಕರ್ತೆಯರು ಸರ್ಕಾರದ ನಡೆ ಬಗ್ಗೆ ಕಿಡಿಕಾರಿದ್ದಾರೆ. ಮನೆ ಮನೆಗೆ ಹೋಗಿ ಜೀವಭಯದಿಂದ ಸರ್ವೆ ಮಾಡುತ್ತೇವೆ. ಸರ್ವೆ ಮಾಡಲು ಹೋದಾಗ ಜನರು ನಮ್ಮನ್ನೇ ಕೊರೊನಾ ರೋಗಿಯಂತೆ ನೋಡುತ್ತಾರೆ ಎಂದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ನೀಡುವ ಮಾತನ್ನ ಹೇಳಿತ್ತು. ಆದರೆ ಅದನ್ನ ಇನ್ನೂ ಕೊಟ್ಟಿಲ್ಲ. ತಮ್ಮ ಜೀವದ ಹಂಗನ್ನ ಮರೆತು ಕೊರೊನಾ ಸಂದರ್ಭದಲ್ಲಿ ಕೂಡ ಆಶಾ ಕಾರ್ಯಕರ್ತೆಯರು ಫೀಲ್ಡ್ ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಸರ್ಕಾರ ಅವರಿಗೆ ನೀಡುವ 4 ಸಾವಿರ ಸಂಬಳ ಮಾತ್ರ ನೀಡಿದೆ. ಜನರು ಮನೆಯಲ್ಲಿ ಕುಳಿತಿದ್ದರೆ ನಾವು ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಆಶಾ ಕಾರ್ಯಕರ್ತೆಯರು ಹೇಳುತ್ತಾರೆ.

CORONA 3

Share This Article
Leave a Comment

Leave a Reply

Your email address will not be published. Required fields are marked *