ಟೆಲ್ ಅವಿವ್: ಇಸ್ರೇಲ್ಗೆ (Israel) ತೆರಳಿದ್ದ ಮೇಘಾಲಯದ (Meghalaya) 27 ಮಂದಿ ಬೆಥ್ಲೆಹೆಮ್ನಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಅವರು ಅಲ್ಲಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತಕ್ಕೆ ಹಿಂದಿರುಗಲು ಈಜಿಪ್ಟ್ ರಾಜಧಾನಿ ಕೈರೋಗೆ ಪ್ರಯಾಣಿಸಲು ತಯಾರಾಗಿದ್ದಾರೆ ಎಂದು ವರದಿಯಾಗಿದೆ.
ಗಾಜಾದಿಂದ ಹಮಾಸ್ ಉಗ್ರರು (Hamas Terrorist) ನಡೆಸಿದ ದಾಳಿಯ ನಂತರ ಇಸ್ರೇಲ್ನ ಒಳಗೂ ಉಗ್ರರು ಪ್ರವೇಶಿಸಿದ್ದಾರೆ. ಅಲ್ಲದೇ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಯುದ್ಧ ಘೋಷಣೆ ಸಹ ಆಗಿದ್ದು, ಸಿಲುಕಿರುವ ಜನರ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್ನಲ್ಲಿ ಹಮಾಸ್ ಉಗ್ರರ ದಾಳಿ – ಅ.14 ರವರೆಗೆ ಏರ್ ಇಂಡಿಯಾ ವಿಮಾನ ರದ್ದು
ಈಗ ಬಂದಿರುವ ಮಾಹಿತಿ ಪ್ರಕಾರ, ಸಿಲುಕಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಆದರೆ ಯುದ್ಧ ಮುಂದುವರೆಯುತ್ತಿದೆ. ಉಗ್ರರು ವಶಪಡಿಸಿಕೊಂಡ ಕೆಲವು ಗ್ರಾಮಗಳನ್ನು ಸೇನೆ ಮರಳಿ ಪಡೆದುಕೊಂಡಿದೆ. ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ಜನರಿಗೆ ಮನೆಯೊಳಗೆ ಇರಲು ಮತ್ತು ಬಾಂಬ್ ಶೆಲ್ಟರ್ಗಳಲ್ಲಿ ಹತ್ತಿರ ಇರಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸಿಲುಕಿರುವವರನ್ನು ಸೈನ್ಯವು ಸೂಯೆಜ್ ಕಾಲುವೆಯವರೆಗೂ ಬೆಂಗಾವಲು ಮಾಡಲಿದೆ. ಇದು ಸುಮಾರು 10 ಗಂಟೆಗಳ ಪ್ರಯಾಣ ಆಗಲಿದೆ. ಮೇಘಾಲಯ ಸರ್ಕಾರ ಜನರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಚರ್ಚಿಸುತ್ತಿದೆ ಎಂದು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್ನಲ್ಲಿ ಲಾಕ್ ಆಗಿದ್ದ ನಟಿ ನುಶ್ರತ್ ಭಾರತದತ್ತ?- ಆಗಿದ್ದೇನು?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]