ತುಮಕೂರು: ಮೇಯುತ್ತಿದ್ದಾಗ 25 ಅಡಿ ಆಳದ ಕೊಳಕ್ಕೆ ಉರುಳಿಬಿದ್ದು ಒದ್ದಾಡುತ್ತಿದ್ದ ಹಸುವನ್ನು, ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿ ಪಾರು ಮಾಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕು ಅರೆಕ್ಯಾತನಹಳ್ಳಿಯಲ್ಲಿ ನಡೆದಿದೆ.
ರಂಗಧಾಮಯ್ಯ ಅವರು ಹಸು ಮೇಯಿಸಲು ತೋಟಕ್ಕೆ ಕರೆದುಕೊಂಡು ಬಂದಿದ್ದರು. ಈ ಹಸು ವೇಳೆ ಆಯತಪ್ಪಿ ಪಾಳು ಕೊಳ ಕ್ಕೆ ಬಿದ್ದಿದೆ. ನಂತರ ಎದ್ದು ಹೊರಬರಲಾಗದೆ ನರಳಾಡುತ್ತಿತ್ತು. ಹಸುವಿನ ಮಾಲೀಕನಿಗೂ ದಿಕ್ಕೆ ತೋಚದಂತಾಗಿತ್ತು. ಇದೀಗ ಹಸುವನ್ನು ಮೇಲಕ್ಕೆ ಎತ್ತಲಾಗಿದೆ. ಇದನ್ನೂ ಓದಿ:ಯಗಚಿ ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಹಸು ಪಳು ಕೊಳ್ಳಕ್ಕೆ ಬಿದ್ದಿರುವ ವಿಷಯ ತಿಳಿದು ಬಂದ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಸದಸ್ಯರು ಹಸುವನ್ನು ಬಾವಿಯಿಂದ ಮೇಲೆತ್ತಲು ಯೋಜನೆ ರೂಪಿಸಿದರು. ನಂತರ ಬೃಹತ್ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿ ಅದರ ಸಹಾಯದಿಂದ ಹಸುವಿನ ಜೀವ ರಕ್ಷಿಸಿದ್ದಾರೆ. ಕೊಳಕ್ಕೆ ಬಿದ್ದ ರಭಸಕ್ಕೆ ಹಸುವಿನ ಕಾಲು ಮುರಿದುಹೋಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.