ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾದ ಘಟನೆ ಜಿಲ್ಲೆಯ (Chikkamagaluru) ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.
ಮಂಡ್ಯದ (Mandya) ಮದ್ದೂರೂ ಮೂಲದ ಪುನೀತ್ (23) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಪುನೀತ್ ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದ. ಈ ವೇಳೆ ಮತ್ತೋರ್ವ ಯುವಕನ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ. ಆದರೆ ಕೆರೆಯಿಂದ ಓರ್ವ ಯುವಕ ಮಾತ್ರ ಮೇಲೆ ಬಂದಿದ್ದು, ಪುನೀತ್ ನಾಪತ್ತೆಯಾಗಿದ್ದಾನೆ. ಎತ್ತಿನಹೊಳೆ ಯೋಜನೆ ನೀರು ಹಾಗೂ ಮಳೆಯಿಂದ ತುಂಬಿದ್ದ ಕೆರೆ ತುಂಬಿತ್ತು.
ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗ್ರಾಮಾಂತರ ಪೆÇಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾದವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.