ಹೈದರಾಬಾದ್: ಕೊರೊನಾ ಕರಾಳ ಪರಿಸ್ಥಿತಿಯಲ್ಲಿ ಬಾಲಿವುಡ್ ನಟ ಸೋನು ಸೂದ್ ಸೇರಿದಂತೆ ಹಲವು ಕಲಾವಿದರು ಜನರ ಜೀವ ಉಳಿಸಲು ಮುಂದಾಗಿದ್ದಾರೆ. ಕೆಲವರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಇದೀಗ ಟಾಲಿವುಡ್ ನಟ ಲೆಜೆಂಡ್ ಬಾಲಕೃಷ್ಣ ಕೂಡ ಜನರಿಗೆ ಸಹಾಯ ಮಾಡಿದ್ದಾರೆ.
ತೆಲುಗಿನ ನಟ ನಂದಮೂರಿ ಬಾಲಕೃಷ್ಣ ರಾಜಕಾರಣಿ ಕೂಡ ಹೌದು. ಆಂಧ್ರಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕರಾಗಿರುವ ನಂದಮೂರಿ ಬಾಲಕೃಷ್ಣ ಇದೀಗ ತಮ್ಮ ಕ್ಷೇತ್ರದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಹಿಂದೂಪುರ ಕ್ಷೇತ್ರದ ಜನರಿಗೆ ನಂದಮೂರಿ ಬಾಲಕೃಷ್ಣ 20 ಲಕ್ಷ ರೂಪಾಯಿ ಮೌಲ್ಯದ ಕೋವಿಡ್-19 ಔಷಧಿಗಳನ್ನು ನೀಡಿದ್ದಾರೆ.
- Advertisement 2
హిందూపురం కోవిడ్ బాధితుల కోసం 20లక్షల రూపాయల విలువైన కోవిడ్ మందులను హైదరాబాద్ నుంచి పంపించిన ఎమ్మెల్యే #నందమూరిబాలకృష్ణ … కోవెడ్ కిట్స ను స్థానిక ఎమ్మెల్యే #బాలయ్య నివాసం వద్ద కోవెడ్ బాధితుల బంధువులకు అందజేసిన తెదేపా నాయకులు..#CovidIndia#HindupurMLA#NanandamuriBalakrishna pic.twitter.com/SCpbLKhRfJ
— Nandamuri Balakrishna™ (@NBK_Unofficial) May 13, 2021
- Advertisement 3
ತಮ್ಮ ಕ್ಷೇತ್ರದಲ್ಲಿ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಔಷಧಿ ಕಿಟ್ಗಳನ್ನು ಇಂದು ಬೆಳಗ್ಗೆ ನಂದಮೂರಿ ಬಾಲಕೃಷ್ಣ ಬೆಂಬಲಿಗರು ಹಾಗೂ ತೆಲುಗು ದೇಸಂ ಪಕ್ಷದ ಕಾರ್ಯಕರ್ತರು ವಿತರಿಸಿದ್ದಾರೆ.