Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 25 ವರ್ಷ ಗೆದ್ದವರಿದ್ರೂ ಗ್ರಾಮಸ್ಥರೇ ನಿರ್ಮಿಸಿದ್ರು ಸೇತುವೆ – ಇದು ಕೊಡಗಿನ ಕೋಪಟ್ಟಿ ಗ್ರಾಮದ ಜನರ ಕಥೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | 25 ವರ್ಷ ಗೆದ್ದವರಿದ್ರೂ ಗ್ರಾಮಸ್ಥರೇ ನಿರ್ಮಿಸಿದ್ರು ಸೇತುವೆ – ಇದು ಕೊಡಗಿನ ಕೋಪಟ್ಟಿ ಗ್ರಾಮದ ಜನರ ಕಥೆ

Districts

25 ವರ್ಷ ಗೆದ್ದವರಿದ್ರೂ ಗ್ರಾಮಸ್ಥರೇ ನಿರ್ಮಿಸಿದ್ರು ಸೇತುವೆ – ಇದು ಕೊಡಗಿನ ಕೋಪಟ್ಟಿ ಗ್ರಾಮದ ಜನರ ಕಥೆ

Public TV
Last updated: June 25, 2021 10:52 am
Public TV
Share
2 Min Read
MDK 4 1
SHARE

ಮಡಿಕೇರಿ: ಪ್ರಕೃತಿಯ ಕೊಡುಗೆಯಾಗಿರುವ ಕೊಡಗು ಅತ್ಯಂತ ಪುಟ್ಟ ಜಿಲ್ಲೆ. ಇಲ್ಲಿ ಕೇವಲ 6 ಲಕ್ಷ ಜನರಿದ್ದಾರೆ. ಆದರೆ ಸಮಸ್ಯೆಗಳ ಸಂಖ್ಯೆ ಲೆಕ್ಕವಿಲ್ಲದಷ್ಟಿದೆ. ಕಳೆದ 20-25 ವರ್ಷಗಳಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬರುತ್ತಿರುವವರಿದ್ದರೂ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರೂ ಇಲ್ಲ ಎಂಬಂತಾಗಿದೆ. ದೇಶದ ಲಕ್ಷಾಂತರ ಭಕ್ತರ ಗಮನ ಸೆಳೆದಿರುವ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮವಾಗುವ ಭಾಗಮಂಡಲದ ಸಮೀಪದಲ್ಲೇ ಇರುವ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಕೋಪಟ್ಟಿ ಗ್ರಾಮಸ್ಥರ ಕಷ್ಟ ಅಲ್ಲಿರುವ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

MDK 4 medium

ಈ ಗ್ರಾಮದಲ್ಲಿ ವಾಸವಿರುವ ಕುಟುಂಬಗಳು ತಮ್ಮ ಅಗತ್ಯ ಕಾರ್ಯಗಳಿಗೆ ಮತ್ತು ವಸ್ತುಗಳ ಖರೀದಿಗೆ ಮುಖ್ಯ ರಸ್ತೆಗೆ ಬಂದು ತಲುಪಬೇಕೆಂದರೆ ದೊಡ್ಡ ಹೊಳೆ ದಾಟಿಯೇ ಬರಬೇಕು. ಬೇಸಿಗೆಯಲ್ಲಿ ಹೇಗೋ ಬಂದು ಬಿಡಬಹುದು, ಆದರೆ ಮಳೆಗಾಲ ಆರಂಭವಾಯಿತೆಂದರೆ ನಿವಾಸಿಗಳಿಗೆ ಜೀವ ಕೈಗೆ ಬರುವ ಅನುಭವವಾಗುತ್ತದೆ. ತುಂಬಿ ಹರಿಯುವ ಹೊಳೆ ದಾಟುವುದೆಂದರೆ ಜೀವದ ಜೊತೆ ಜೂಟಾಟ ಆಡಿದಂತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

MDK 2 5 medium

ಬೆಟ್ಟದಿಂದ ಬರುವ ಎರಡು ಹೊಳೆಗಳು ಸೇರಿ ಹರಿಯುವ ಈ ನೀರಿನಲ್ಲಿ ದಾಟುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಇದು ಕಲ್ಲಿನಿಂದ ಕೂಡಿದ ಹೊಳೆ, ಸ್ವಲ್ಪ ನಿಯಂತ್ರಣ ತಪ್ಪಿದರೂ ದಾಟುತ್ತಿರುವವರು ನೀರು ಪಾಲಾಗುವುದು ಖಚಿತ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿರುವ ಗ್ರಾಮಸ್ಥರು ಕಳೆದ 15 ವರ್ಷಗಳಿಂದ ಗ್ರಾ.ಪಂ ಗೆ ಮನವಿ ನೀಡುತ್ತಾ ಬರುತ್ತಿದ್ದಾರೆ. ಹೇಗಾದರು ಮಾಡಿ ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಕೋರಿಕೊಂಡರೂ ಇಲ್ಲಿಯವರೆಗೆ ಇವರ ಬೇಡಿಕೆ ಈಡೇರಿಲ್ಲ.

MDK 2 5 medium

ಕಳೆದ ವರ್ಷ ತಲಕಾವೇರಿ ಭಾಗದಲ್ಲಿ ಮಹಾಮಳೆಯ ಅನಾಹುತ ಸಂಭವಿಸಿದಾಗ ಕೋಪಟ್ಟಿ ಭಾಗದಲ್ಲಿ ಪ್ರವಾಹದ ರೂಪದಲ್ಲಿ ನೀರು ಹರಿದು ಬಂದಿತ್ತು. ಜೀವ ಉಳಿಸಿಕೊಳ್ಳಬೇಕೆಂದರೆ ಅಥವಾ ತುರ್ತು ಚಿಕಿತ್ಸೆಗೆ ತೆರಳಬೇಕೆಂದರೆ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲಿಲ್ಲ. ಎಲ್ಲಾ ಸಂದರ್ಭದಲ್ಲೂ ಹೊಳೆ ದಾಟುವುದು ಅನಿವಾರ್ಯವಾಗಿದ್ದು, ವಯೋವೃದ್ಧರು ಹಾಗೂ ಮಕ್ಕಳ ಸ್ಥಿತಿಯಂತು ಉಳಿದವರ ಸಹನೆಯನ್ನು ಪರೀಕ್ಷಿಸುತ್ತದೆ. ಇದನ್ನೂ ಓದಿ: ತಂದೆಯಾಗ್ತಿರೋ ಖುಷಿ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದ್ರು ನಿಖಿಲ್

MDK 1 8 medium

ಹೊಳೆ ಮಾರ್ಗ ಹೊರತು ಪಡಿಸಿದಂತೆ ಇರುವ ಪರ್ಯಾಯ ರಸ್ತೆಯಲ್ಲಿ 8 ಕಿ.ಮೀ ದೂರ ಸಾಗಿದರೆ ಮುಖ್ಯ ರಸ್ತೆ ಸಿಗುತ್ತದೆ. ಗ್ರಾ.ಪಂಗೆ ಕೋಟಿ, ಕೋಟಿ ಅನುದಾನ ಬಂದರೂ ಕೋಪಟ್ಟಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸೇತುವೆಯೊಂದನ್ನು ನಿರ್ಮಿಸಿಕೊಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅತಿವೃಷ್ಟಿ ಹಾನಿ ಸಂದರ್ಭ ದೊಡ್ಡವರು ಬರುತ್ತಾರೆ, ಸೇತುವೆ ನಿರ್ಮಾಣದ ಕುರಿತು ಭರವಸೆ ನೀಡುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದರಿಂದ ಬೇಸತ್ತ ಕೋಪಟ್ಟಿಯ ಸೋಮೆಟ್ಟಿ ಹಾಗೂ ಪೊಡನೋಲನ ಕುಟುಂಬಸ್ಥರು ಈ ಬಾರಿಯೂ ಮಹಾಮಳೆಗೆ ತೊಂದರೆಯಾಗಹುದೆನ್ನುವ ಆತಂಕದಲ್ಲಿ ಸುರಿಯುವ ಗಾಳಿಮಳೆಯ ನಡುವೆಯೇ ಕಾಲು ಸೇತುವೆಯೊಂದನ್ನು ನಿರ್ಮಿಸಿದರು.

ಗ್ರಾಮಸ್ಥರ ಸಹಕಾರದೊಂದಿಗೆ ಬಿದಿರು ಮತ್ತು ಮರದ ತುಂಡುಗಳನ್ನು ಬಳಸಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೋಪಟ್ಟಿ ಗ್ರಾಮದ ಸಂಕಷ್ಟವನ್ನು ಅರಿತು ಶಾಶ್ವತ ಸೇತುವೆ ಮತ್ತು ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

TAGGED:bridgemadikeriPublic TVvillagersಗ್ರಾಮಸ್ಥರುಪಬ್ಲಿಕ್ ಟಿವಿಮಡಿಕೇರಿ ಸೇತುವೆ
Share This Article
Facebook Whatsapp Whatsapp Telegram

Cinema news

honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories
samhita vinya
ಲಕ್ಕಿ ಹೀರೋಯಿನ್ ಸಂಹಿತಾ ವಿನ್ಯಾ ಮಿಂಚಿಂಗು
Cinema Latest Sandalwood Top Stories

You Might Also Like

DK Shivakumar 9
Bengaluru City

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಡಿಕೆಶಿ

Public TV
By Public TV
3 minutes ago
pete hegseth
Latest

ಮುಂದಿನ 24-48 ಗಂಟೆಗಳಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಭೀಕರವಾಗಿರಲಿದೆ – US ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ 

Public TV
By Public TV
32 minutes ago
trump maga
Latest

ಇರಾನ್‌ ವಿರುದ್ಧ ಕಾರ್ಯಾಚರಣೆಗೆ ವಾಯುನೆಲೆ ಕೊಡಲ್ಲ ಎಂದ ಸ್ಪೇನ್‌ ಜೊತೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದ ಟ್ರಂಪ್‌

Public TV
By Public TV
43 minutes ago
Bhatkal people petrol bunk
Latest

ಇಸ್ರೇಲ್‌-ಇರಾನ್‌ ಯದ್ಧ; ಭಟ್ಕಳದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ಜನ

Public TV
By Public TV
1 hour ago
basava kalyana police station protest
Bidar

ಮೌಲ್ವಿಗಳನ್ನ ಚುಡಾಯಿಸಿದ್ದಕ್ಕೆ ಕೆರಳಿ ಪ್ರೊಟೆಸ್ಟ್ – ಪೊಲೀಸ್ ಠಾಣೆ ಎದುರು ಭಾರಿ ಹೈಡ್ರಾಮಾ

Public TV
By Public TV
2 hours ago
Pakistan and Saudi Arabia agreement
Latest

ಇರಾನ್-ಇಸ್ರೇಲ್ ಯುದ್ಧಕ್ಕೆ ಪಾಕಿಸ್ತಾನ ಎಂಟ್ರಿ ಕೊಡುತ್ತಾ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?