ಹಾಸನ: ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯ ಮೂರ್ತಿಯನ್ನು ಧ್ವಂಸಗೊಳಿಸಿ ದುಷ್ಟತನ ಮೆರೆದಿದ್ದಾರೆ.
ಜಿಲ್ಲೆಯ ಆಲೂರು ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳ್ಳಿಕೊಪ್ಪಲು ಗ್ರಾಮದ ನಿವಾಸಿಗಳಾದ ಹರೀಶ ಮತ್ತು ಸಚಿನ್ ಈ ಕೃತ್ಯವೆಸೆಗಿದ್ದಾರೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಗಣೇಶನನ್ನು ಕೂರಿಸಲಾಗಿದೆ ಎಂಬ ಕಾರಣಕ್ಕೆ ಇಬ್ಬರೂ ಕೋಪಗೊಂಡಿದ್ದರು. ಆದ್ದರಿಂದ ಸೋಮವಾರ ರಾತ್ರಿ ಕುಡಿದು ಬಂದು ಗಣಪನ ಮೂರ್ತಿಯನ್ನು ಒಡೆದು ಹಾಕಿದ್ದಾರೆ.
ಈ ವೇಳೆ ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಅವರಿಗೂ ಯುವಕರು ಅವಾಜ್ ಹಾಕಿದ್ದಾರೆ. ತಮ್ಮ ಮಾತಿಗೆ ಬೆಲೆಕೊಡದ ಗ್ರಾಮಸ್ಥರ ಮಾತು ಏಕೆ ಕೇಳಬೇಕು ಎನ್ನುವ ರೀತಿ ಇಬ್ಬರು ವರ್ತಿಸಿದ್ದಾರೆ. ಎಲ್ಲೆಡೆ ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರೆ, ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾತ್ರ ಯುವಕರ ಕೋಪಕ್ಕೆ ಗಣೇಶ ಮೂರ್ತಿ ಚೂರು ಚೂರಾಗಿದೆ.