ಬೆಂಗಳೂರು: ಕಲ್ಮಶ ನೀರಿನ ಸಂಸ್ಕರಣ ಘಟಕದ ಸಂಪ್ನಲ್ಲಿ ಕ್ಲೀನ್ ಮಾಡಲು ಇಳಿದಿದ್ದ ಇಬ್ಬರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.
ಹಾರಿಜನ್ ಪ್ಯಾಕ್ಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಮಿಕರಾದ ಉಮೇಶ್ ಹಾಗೂ ದಿಲೀಪ್ ಮೃತ ದುರ್ದೈವಿಗಳು.
ಮಳೆಯ ನೀರು ಹಾಗೂ ಕಾರ್ಖಾನೆಯ ಕಲ್ಮಶ ನೀರಿನಿಂದ ಸಂಸ್ಕರಣ ಘಟಕದ ಸಂಪ್ ಬ್ಲಾಕ್ ಆಗಿತ್ತು. ಬ್ಲಾಕ್ ಆಗಿದ್ದ ಸಂಪ್ ಕ್ಲೀನ್ ಮಾಡಲು ಮೊದಲು ಉಮೇಶ್ ಒಳಗೆ ಇಳಿದಾಗ ಉಸಿರುಗಟ್ಟದೆ. ನಂತರ ಉಮೇಶ್ನನ್ನು ಕಾಪಾಡಲು ಸಂಪ್ಗೆ ಇಳಿದ ದಿಲೀಪ್ ಕೂಡಾ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಸಂಪಿನ ಏರ್ ಔಟ್ ಮಾಡದೇ ಒಳಗೆ ಇಳಿದಿದ್ದೆ ದುರ್ಘಟನೆಗೆ ಕಾರಣವಾಗಿದೆ. ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.