ಮಂಡ್ಯ: ಹಣದ ವಿಚಾರವಾಗಿ ನಡೆದ ಜಗಳಕ್ಕೆ ಗೆಳೆಯನನ್ನೇ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಬಾರಕ್ ಮತ್ತು ರಘು ಬಂಧಿತ ಆರೋಪಿಗಳು. ಜುಲೈ 23 ರಂದು ಮುಸ್ತಾಫ ಎಂಬವನ ಶವ ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಸಮೀಪ ಕೊಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಸ್ತಾಫನನ್ನು ಕೊಲೆ ಮಾಡಿ, ಕೈ ಕಟ್ಟಿ ಕೊಳದಲ್ಲಿ ಬಿಸಾಕಿ ಹೋಗಿದ್ರು. ಇದೀಗ ಪೊಲೀಸರು ಕೊಲೆ ಆರೋಪಿಗಳಾದ ಮುಬಾರಕ್ ಮತ್ತು ರಘುವನ್ನು ಬಂಧಿಸಿದ್ದಾರೆ.
ಮುಬಾರಕ್ ಬಳಿ ಮುಸ್ತಾಫ ಸಾಲವಾಗಿ ಹಣ ಪಡೆದಿದ್ದ ಎನ್ನಲಾಗಿದೆ. ಗೆಳೆಯ ಎಂಬ ಕಾರಣಕ್ಕೆ ಮುಬಾರಕ್ ಹಣ ನೀಡಿರುತ್ತಾನೆ. ಆದ್ರೆ ಸಾಲದ ಹಣ ವಾಪಸ್ ಕೇಳಿದಾಗ ಮುಬಾರಕ್ನನ್ನು ಮುಸ್ತಾಫ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಇದ್ರಿಂದ ಆಕ್ರೋಶಗೊಂಡ ಮುಬಾರಕ್ ಗೆಳೆಯ ರಘು ಜೊತೆ ಸೇರಿ ಮುಸ್ತಾಫನ ಕೈ ಕಟ್ಟಿ, ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಸದ್ಯ ಆರೋಪಿಗಳನ್ನು ಬಂಧಿಸಿರುವ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.