Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೂರೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ 2 ಜೀವ ಬಲಿ – ಗ್ರಾಮಸ್ಥರಲ್ಲಿ ಆತಂಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮೂರೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ 2 ಜೀವ ಬಲಿ – ಗ್ರಾಮಸ್ಥರಲ್ಲಿ ಆತಂಕ

Districts

ಮೂರೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ 2 ಜೀವ ಬಲಿ – ಗ್ರಾಮಸ್ಥರಲ್ಲಿ ಆತಂಕ

Public TV
Last updated: April 25, 2025 4:23 pm
Public TV
Share
2 Min Read
Elephant
SHARE

ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ದಿನಕಳೆದಂತೆ ಕಾಡಾನೆ ಮಾನವ ಸಂಘರ್ಷ ಮಿತಿಮೀರುತ್ತಿದೆ. ಕಾಡು ಬಿಟ್ಟು ನಾಡಲ್ಲೇ ವಾಸ್ತವ್ಯ ಹೂಡುತ್ತಿರೋ ಕಾಡಾನೆಗಳು (Wild Elephant) ಹಗಲಲ್ಲೇ ಜನರ ಮೇಲೆ ದಾಳಿ ಮಾಡ್ತಿವೆ. ಇಂದು (ಏ.25) ಮುಂಜಾನೆ ಅಂತಹದ್ದೇ ಘಟನೆ ನಡೆದಿದೆ. ಬೆಳಗ್ಗಿನ ಜಾವ ಮನೆಯಿಂದ ಹೊರಗೆ ಬಂದ ಕಾಫಿ‌ ತೋಟದ ಮಾಲೀಕನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಕಾಡಾನೆ ದಾಳಿಗೆ ಕಳೆದ ಮೂರು ದಿನಗಳಲ್ಲಿ 2 ಜೀವಗಳು ಬಲಿಯಾಗಿವೆ.

Kodagu

ಕೊಡಗು ಜಿಲ್ಲೆ ಇತ್ತೀಚೆಗೆ ಹೆಚ್ಚು ಸುದ್ದಿಯಾಗ್ತಿರೋದು ಕಾಡಾನೆ – ಮಾನವ ಸಂಘರ್ಷ ವಿಚಾರಕ್ಕೆ. ದಿನಬೆಳಗಾದ್ರೆ ಕಾಡಾನೆ ಅಲ್ಲಿ ದಾಳಿ ಮಾಡ್ತು, ಇಲ್ಲಿ ದಾಳಿ (Elephant Attack) ಮಾಡ್ತು ಅನ್ನೋ ಸುದ್ದಿಯೇ ಕೇಳಿಬರುತ್ತಿದೆ. ಕಾಡು ತೊರೆದು ಕಾಫಿ ತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರೋ ಆನೆಗಳು ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಾ, ಜನರ ಮೇಲೆ ದಾಳಿ ಮಾಡುವುದು ಮಾಮೂಲಾಗಿದೆ. ಇದನ್ನೂ ಓದಿ: ಸುರತ್ಕಲ್-ಬಿ.ಸಿ.ರೋಡ್ ಪೋರ್ಟ್ ರಸ್ತೆ ಕಾಮಗಾರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಚಾಲನೆ

Kodagu Forest 2

ಅದೇ ರೀತಿ ಇಂದು ಬೆಳಗ್ಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಸವನಹಳ್ಳಿ ಹಾಡಿ ಸಮೀಪದ ಕಾಫಿ ಬೆಳೆಗಾರ‌ ಸೊಳ್ಳೆಕೋಡಿ ಚಿಣ್ಣಪ್ಪ ಎಂಬುವವರು ತನ್ನ ಮನೆಯ ಮುಂದೆ ಯಾರೋ ಓಡಾಟ ನಡೆಸುತ್ತಿದ್ದಾರೆ ಎಂದು ಮನೆ ಬಾಗಿಲು ತೇಗೆದು ಹೋರ ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಇದರಿಂದಾಗಿ ಚಿಣ್ಣಪ್ಪ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ನಿನ್ನೆಯೂ ಕೂಡ ಸಿದ್ದಾಪುರ ಸಮೀಪದ ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿಯ ಬಳಿ ವಾಯು ವನಡೆದಿದಲ್ಲಿ ಚೆಲ್ಲ ಮೇಸ್ತ್ರಿ (55) ಎಂಬುವವರ ಮೇಲೆ ಕಾಡಾನೆ ದಾಳಿ ಬಲಿ ಪಡೆದಿತ್ತು. ಹೀಗಾಗಿ ಮೂರು ದಿನಗಳ ಅಂತರದಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದಿದೆ. ಇನ್ನೂ ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಇದನ್ನೂ ಓದಿ: ಅನಧಿಕೃತ, ಅಕ್ರಮ ಬಡಾವಣೆ ನಿರ್ಮಾಣ ಮಾಡಿದ್ರೆ ಸರ್ಕಾರದಿಂದಲೇ ಮುಟ್ಟುಗೋಲು – ಕೃಷ್ಣಬೈರೇಗೌಡ

Kodagu Forest

ಇನ್ನೂ ಇತ್ತೀಚಿನ ದಿನಗಳಲ್ಲಿ ವೀರಾಜಪೇಟೆ ಹಾಗೂ ಪೋನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ‌ ಹಾಗೂ ಹುಲಿಗಳ ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಪ್ರಯೋಜನವಾಗ್ತಿಲ್ಲ. ಆದ್ದರಿಂದ ಗ್ರಾಮದ ಜನರು ಭಯದಲ್ಲೇ ಬದುಕು ಸಾಗಿಸುವಂತಾಗಿದೆ.  ಇದನ್ನೂ ಓದಿ: ಒಬ್ಬ ಪಾಕಿಸ್ತಾನಿ ಪ್ರಜೆಯೂ ಭಾರತದಲ್ಲಿ ಉಳಿಯಬಾರದು – ರಾಜ್ಯಗಳಿಗೆ ಅಮಿತ್‌ ಶಾ ನಿರ್ದೇಶನ

ಈ ಬಗ್ಗೆ ವಿರಾಜಪೇಟೆ ‌ಶಾಸಕ ಎ.ಎಸ್ ಪೋನ್ನಣ್ಣ ಅವರನ್ನ ಕೇಳಿದ್ರೆ, ನಾವು ಇರುವಂತಹದೇ ಅರಣ್ಯ ಗಡಿಭಾಗದಲ್ಲಿ ಮೊನ್ನೆ ಹುಲಿಯ ಕಾರ್ಯಚರಣೆಗೆ ಸಚಿವರು ಎರಡು ಹುಲಿಯನ್ನು ಹಿಡಿಯಲು ಆದೇಶ ನೀಡಿದ್ದಾರೆ. ತಾನು ಕೂಡ ಕಾರ್ಯಚರಣೆಯಲ್ಲಿ ಭಾಗಿಯಾಗಿದೆ. ಬ್ರಹ್ಮಗಿರಿ ಅರಣ್ಯ ಪ್ರದೇಶ ಪಕ್ಕದಲ್ಲೇ ಇದೆ. ಅದನ್ನ ಹುಡುಕುವ ಕೆಲಸ ಆಗುತ್ತಿದೆ. ಇನ್ನೂ ಕಾಡಾನೆಗಳ ಹಾವಳಿ ಸಿದ್ದಾಪುರ ಪಾಲಿಬೆಟ್ಟ ಗ್ರಾಮದಲ್ಲಿ ಹೆಚ್ಚಾಗಿ ಆಗುತ್ತಿದೆ. ಕಾಡಾನೆಯನ್ನು ಗುರುತಿಸಿ ಅದನ್ನು ಸೆರೆಹಿಡಿಯುವ ಕೆಲಸ ಮಾಡುತ್ತೇವೆ. ಆದರೆ ಈ ರೀತಿಯಾಗಿ ಮಾನವ ವನ್ಯಜೀವಿ ಸಂಘರ್ಷ ಮಾತ್ರ ಮುಂದುವರೆಯುತ್ತಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿರುವುದರಿಂದ ವನ್ಯಜೀವಿ ಉಪಟಳ ಹೆಚ್ಚಾಗಿದೆ. ಹಂತ ಹಂತವಾಗಿ ಈ ಘರ್ಷಣೆಯನ್ನು ತಡೆಯುವ ಕೆಲಸ ಆಗುತ್ತದೆ. ಅಲ್ಲದೇ ಈಗಾಗಲೇ ಮೃತಪಟ್ಟ ಕುಟುಂಬಗಳಿಗೆ 15 ಲಕ್ಷ ರೂ. (ತಲಾ 7.50 ಲಕ್ಷ ರೂ.) ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ವರದಕ್ಷಿಣೆ ಕಿರುಕುಳ; ನನ್ನ ಗಂಡ ಒಳ್ಳೆಯವನು ಅಂತ ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

TAGGED:elephantElephant AttackKodaguKodagu Forestmadikeri
Share This Article
Facebook Whatsapp Whatsapp Telegram

Cinema news

Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories

You Might Also Like

all party meeting
Latest

ಪಾಕ್‌ನಂತೆ ದಲ್ಲಾಳಿ ಕೆಲಸ ಮಾಡುವ ದೇಶ ನಮ್ಮದಲ್ಲ – ವಿಪಕ್ಷಗಳಿಗೆ ಜೈಶಂಕ‌ರ್ ತಿರುಗೇಟು

Public TV
By Public TV
6 hours ago
Money Zeize
Davanagere

ಉಪ ಚುನಾವಣೆ ಹೊತ್ತಿನಲ್ಲೇ ದಾಖಲೆಗಳಿಲ್ಲದೇ ಸಾಗಿಸ್ತಿದ್ದ 6.17 ಲಕ್ಷ ರೂ. ಜಪ್ತಿ

Public TV
By Public TV
6 hours ago
Ashwini Vaishnaw HD Kumaraswamy
Districts

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಕೇಂದ್ರ ಅಸ್ತು

Public TV
By Public TV
6 hours ago
Car Drifting Case
Bengaluru City

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ

Public TV
By Public TV
7 hours ago
NAMMA METRO 2
Bengaluru City

ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

Public TV
By Public TV
8 hours ago
LPG 1
Bagalkot

ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?