ದಾವಣಗೆರೆ: ಸಾಕು ನಾಯಿ ಮತ್ತು ಬೀದಿ ನಾಯಿ (Dog) ಕಚ್ಚಾಟದಿಂದ 2 ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ದಾವಣಗೆರೆ (Davanagere) ತಾಲೂಕಿನ ಮಹಾದೇವಪುರ (Mahadevpur) ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಬಸವರಾಜ್ ಎಂಬ ಯುವಕ 10 ಸಾವಿರ ರೂ. ಕೊಟ್ಟು ರೊಟ್ವೀಲರ್ ನಾಯಿಯನ್ನು ತಂದು ಸಾಕಿದ್ದ. ಅದೇ ಬೀದಿಯ ಹನುಮಂತಪ್ಪ ಎಂಬುವವರು ಬೀದಿ ನಾಯಿಗಳನ್ನು ಸಾಕುತ್ತಿದ್ದರು. ಬೀದಿ ಶ್ವಾನಗಳು ರೊಟ್ವೀಲರ್ ನಾಯಿ ಮೇಲೆ ದಾಳಿ ನಡೆಸಿ ಕೊಂದಿದ್ದವು.
ಇದರಿಂದ ರೊಚ್ಚಿಗೆದ್ದ ಬಸವರಾಜ್ ಮತ್ತು ಸಂಬಂಧಿ ಯುವಕರು ಹನುಮಂತಪ್ಪ ಮನೆಗೆ ನುಗ್ಗಿ ಬೀದಿ ನಾಯಿಗಳಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ ವೃದ್ಧ ಹನುಮಂತಪ್ಪನ ಮೇಲೂ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ 14 ವಿದ್ಯಾರ್ಥಿನಿಯರು- ಕಾರಣ ನಿಗೂಢ
ಬೀದಿ ನಾಯಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, 8 ಜನರ ವಿರುದ್ಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಂದರ್ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!
Web Stories