Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ

Public TV
Last updated: May 7, 2024 7:02 pm
Public TV
Share
4 Min Read
Lok Sabha Elections 1989
SHARE

– ಬಿಜೆಪಿಗೆ ‘ರಾಮಜನ್ಮಭೂಮಿ’ ರಾಜಕೀಯ ಅಸ್ತ್ರ
– 2 ರಿಂದ 85 ಸ್ಥಾನಕ್ಕೆ ಬಿಜೆಪಿ ಅಸಾಧಾರಣ ಜಿಗಿತ
– ಎರಡನೇ ಬಾರಿಗೆ ಕಾಂಗ್ರೆಸ್ಸೇತರ ಮೈತ್ರಿ ಅಧಿಕಾರಕ್ಕೆ

ಸ್ವತಂತ್ರ ಭಾರತದಲ್ಲಿ ನಾಲ್ಕು ದಶಕಗಳ ಕಾಲ ರಾಜಕೀಯ, ಚುನಾವಣಾ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ (Congress) ಆಡಳಿತವು 1980 ರ ದಶಕದ ಅಂತ್ಯದಲ್ಲಿ ಹೀನಾಯ ಸೋಲಿನೊಂದಿಗೆ ಕೊನೆಗೊಂಡಿತು. ಇಂದಿರಾ ಗಾಂಧಿ ಹತ್ಯೆಯ ಕಹಿ ನೆರಳಿನಲ್ಲಿ 1984 ಚುನಾವಣೆಯ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ದಾಖಲಿಸಿತ್ತು. ಆದರೆ ಆಡಳಿತ ವೈಫಲ್ಯ, ಹಗರಣಗಳ ಸುಳಿಗೆ ಸಿಲುಕಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನ ಕಂಡಿತು. ಇದು ಮತ್ತೊಮ್ಮೆ ಕಾಂಗ್ರೆಸ್ಸೇತರ ಸಮ್ಮಿಶ್ರ ರಾಜಕೀಯದ ಹೊಸ ಯುಗಕ್ಕೆ ನಾಂದಿ ಹಾಡಿತು.

ಯುವ ಮತ್ತು ರಾಜಕೀಯವಾಗಿ ಅನನುಭವಿ ರಾಜೀವ್ ಗಾಂಧಿಯವರು (Rajiv Gandhi) ತಮ್ಮ ತಾಯಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಭಾರತದ ಪ್ರಧಾನ ಮಂತ್ರಿಯಾಗಿ 1984 ರಲ್ಲಿ ಅಧಿಕಾರ ವಹಿಸಿಕೊಂಡರು. ಆದರೆ ಬೋಫೋರ್ಸ್ ಹಗರಣ (Bofors Scandal), ಪಂಜಾಬ್‌ನಲ್ಲಿನ ಭಯೋತ್ಪಾದನೆ, ಶಾ ಬಾನೋ ಪ್ರಕರಣದಲ್ಲಿ ಮುಸ್ಲಿಮರ ತುಷ್ಟೀಕರಣ ಮತ್ತು ಶ್ರೀಲಂಕಾದಲ್ಲಿ ತಮಿಳು ಬಂಡಾಯವನ್ನು ರಾಜೀವ್ ಗಾಂಧಿ ಸರಿಯಾಗಿ ನಿರ್ವಹಿಸದ ರೀತಿ ಆಡಳಿತ ವಿರೋಧಿ ಅಲೆಗೆ ಕಾರಣವಾಯಿತು. ಇದರಿಂದ ಕಾಂಗ್ರೆಸ್ ಪಕ್ಷದಲ್ಲೇ ಒಡಕುಂಟಾಯಿತು. ಇದನ್ನೂ ಓದಿ: 1984: ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್‌ಗೆ ‘400+ ಪಾರ್’

Rajiv Gandhi

ಏನಿದು ಬೋಫೋರ್ಸ್ ಹಗರಣ?
ಭಾರತ ಹಾಗೂ ಸ್ವೀಡನ್‌ನ ಬೋಫೋರ್ಸ್ ಕಂಪನಿ ನಡುವೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದವಾಗಿತ್ತು. ಸುಮಾರು 1.3 ಬಿಲಿಯನ್ ಯುಎಸ್ ಡಾಲರ್ ಒಪ್ಪಂದ ಇದಾಗಿತ್ತು. ಸ್ವೀಡನ್ ನಡೆಸಿದ ಅತ್ಯಂತ ದೊಡ್ಡ ಡೀಲ್ ಇದಾಗಿದ್ದು, ಭಾರತಕ್ಕೆ ಸುಮಾರು 410ಕ್ಕೂ ಅಧಿಕ ಫಿರಂಗಿಗಳು ರವಾನೆಯಾಗಿತ್ತು. 1980 ರಿಂದ 1990ರ ದಶಕಗಳಲ್ಲಿ ಭಾರತ ಹಾಗೂ ಸ್ವೀಡನ್ ನಡುವೆ ಶಸ್ತ್ರಾಸ್ತ್ರ ಖರೀದಿ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ರಾಜೀವ್ ಗಾಂಧಿ ಸರ್ಕಾರದ ವಿರುದ್ಧ ಕೇಳಿಬಂತು. ಇದೇ ಬೋಫೋರ್ಸ್ ಹಗರಣ. ಆಂದಿನ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಮುಖಂಡರ ಮೇಲೆ ಲಂಚ ಪಡೆದ ಆರೋಪ ಕೇಳಿಬಂತು. ಆಗಿನ ರಕ್ಷಣಾ ಸಚಿವರಾಗಿದ್ದ ವಿ.ಪಿ.ಸಿಂಗ್ (V.P.Singh) ಅವರು ರಾಜೀವ್ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಪಕ್ಷ ಹಾಗೂ ಸಂಸದ ಸ್ಥಾನವನ್ನು ತ್ಯಜಿಸಿದ್ದರು. ಹಗರಣವು 1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.

ಬಿಜೆಪಿಗೆ ಸಿಕ್ತು ‘ರಾಮಜನ್ಮಭೂಮಿ’ ರಾಜಕೀಯ ಅಸ್ತ್ರ
ಕಾಂಗ್ರೆಸ್ ಆಡಳಿತ ವಿರೋಧದ ಅಲೆಯ ಸಂದರ್ಭದಲ್ಲಿ ಹಠಾತ್ತನೆ ಬಿಜೆಪಿಗೆ ರಾಜಕೀಯ ಚಿನ್ನದ ನಿಕ್ಷೇಪವೇ ದೊರೆತಂತಾಯಿತು. 1986 ರ ಜನವರಿ 31 ರಂದು ಬಾಬ್ರಿ ಮಸೀದಿ ಆವರಣದ ಗೇಟುಗಳ ಬೀಗವನ್ನು ತೆರೆಯಲಾಯಿತು. ಶತಮಾನಗಳ ಹಿಂದೆ ಆಕ್ರಮಣಕಾರರ ದಾಳಿಗೆ ತುತ್ತಾದ ಹಿಂದೂ ಪವಿತ್ರ ಸ್ಥಳಗಳನ್ನು ಮರಳಿ ವಶಪಡಿಸಿಕೊಳ್ಳುವ ದಿಸೆಯಲ್ಲಿ ಸಂಘ ಪರಿವಾರದ ಅಂಗವೇ ಆದ ವಿಶ್ವ ಹಿಂದೂ ಪರಿಷತ್ (VHP) ಅದಾಗಲೇ ಅಯೋಧ್ಯೆ ರಾಮಜನ್ಮಭೂಮಿ ಆಂದೋಲನ ಆರಂಭಿಸಿತ್ತು. 1984 ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಮತ್ತೆ ತಲೆಯೆತ್ತಲು ‘ಹಿಂದುತ್ವ’ ಅಸ್ತ್ರವಾಗಿ ಸಿಕ್ಕಿತು. ಬಾಬ್ರಿ ಮಸೀದಿ ನಿಂತಿದ್ದ ಜಾಗದಲ್ಲಿ ರಾಮಮಂದಿರ (Ram Mandir) ನಿರ್ಮಾಣವನ್ನು ಚುನಾವಣಾ ವಿಷಯವಾಗಿ ಆಗಿನ ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ (L.K.Advani) ಘೋಷಿಸಿಯೇ ಬಿಟ್ಟರು. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

ram mandir 1 1

9ನೇ ಸಾರ್ವತ್ರಿಕ ಚುನಾವಣೆ
1989 ರ ಲೋಕಸಭಾ ಚುನಾವಣೆಯು ನವೆಂಬರ್ 22 ರಿಂದ 26 ರ ವರೆಗೆ ಐದು ದಿನಗಳ ಕಾಲ ನಡೆಯಿತು.

113 ಪಕ್ಷಗಳ ಸ್ಪರ್ಧೆ
ರಾಷ್ಟ್ರೀಯ 8, ಪ್ರಾದೇಶಿಕ 20 ಪಕ್ಷಗಳು ಸೇರಿ 113 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

ಮತದಾರರು
ಒಟ್ಟು: 49,89,06,129
ಪುರುಷರು: 26,20,45,142
ಮಹಿಳೆಯರು: 23,68,60,987

ಮತ ಚಲಾಯಿಸಿದವರ ಸಂಖ್ಯೆ: 30,90,50,495
ಮತದಾನ ಪ್ರಮಾಣ: 61.95%

ಒಟ್ಟು ಕ್ಷೇತ್ರಗಳು: 529
ಸ್ಪರ್ಧಿಸಿದ್ದ ಅಭ್ಯರ್ಥಿಗಳು: 6,160
ಮಹಿಳಾ ಅಭ್ಯರ್ಥಿಗಳು: 198
ಗೆದ್ದ ಮಹಿಳೆಯರು: 29

v.p.singh

ಕುಸಿದ ಕಾಂಗ್ರೆಸ್
ನವೆಂಬರ್ 1989 ರ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಸಿಗಲಿಲ್ಲ. ಪಿಎಂ ರಾಜೀವ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಕಳೆದ ಬಾರಿ (1984) ಗೆದ್ದಿದ್ದ ಒಟ್ಟು ಸ್ಥಾನಗಳ ಅರ್ಧಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಿ ಸೋಲನುಭವಿಸಿತು. ಕೇವಲ 197 ಸ್ಥಾನಗಳನ್ನು ಮಾತ್ರ ಗೆದ್ದಿತು. ಕಾಂಗ್ರೆಸ್ ಕೇವಲ ರಾಷ್ಟ್ರೀಯ ಶಕ್ತಿಯನ್ನಷ್ಟೇ ಅಲ್ಲ ರಾಜಕೀಯ ಪ್ರಾಬಲ್ಯವನ್ನೂ ಕಳೆದುಕೊಂಡಿತು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 197
ಬಿಜೆಪಿ – 85
ಜನತಾ ದಳ – 143
ಸಿಪಿಐ – 12
ಸಿಪಿಎಂ – 33
ಇತರೆ – 47
ಪಕ್ಷೇತರ – 12

ವಿ.ಪಿ.ಸಿಂಗ್ ಪಕ್ಷಕ್ಕೆ 143 ಸ್ಥಾನ
ಬೋಫೋರ್ಸ್ ಹಗರಣ ವಿಚಾರವನ್ನು ಮುಂದು ಮಾಡಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಹೊರಬಂದಿದ್ದ ವಿ.ಪಿ.ಸಿಂಗ್ ಗುಂಪು ಜನತಾ ದಳ ಪಕ್ಷದಿಂದ ಸ್ಪರ್ಧೆ ಮಾಡಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿ 143 ಸ್ಥಾನಗಳನ್ನು ಗೆದ್ದಿತು.

lk advani

ಬಿಜೆಪಿ 2 ರಿಂದ 85 ಕ್ಕೆ ಜಿಗಿತ
1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 85 ಸ್ಥಾನಗಳನ್ನು ಗೆದ್ದು ಗಮನ ಸೆಳೆಯಿತು. 2 ರಿಂದ 85 ಸ್ಥಾನಗಳಿಗೆ ಅಸಾಧಾರಣ ನೆಗೆತ ಕಂಡಿತು.

ಮತ್ತೆ ಕಾಂಗ್ರೆಸ್ಸೇತರ ಸರ್ಕಾರ
ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ (ಎಸ್) ವಿಲೀನಗೊಂಡು ಜನತಾ ದಳ ಉದಯವಾಯಿತು. ಚುನಾವಣೆಯಲ್ಲಿ ಪಕ್ಷ 143 ಸ್ಥಾನಗಳನ್ನು ಗೆದ್ದಿತು. ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಎಡಪಕ್ಷಗಳು ಮತ್ತು ಬಿಜೆಪಿ ಸೇರಿ ವಿ.ಪಿ.ಸಿಂಗ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದವು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

ಕರ್ನಾಟಕದಲ್ಲಿ ಏನಾಗಿತ್ತು?
ಕಾಂಗ್ರೆಸ್: 27
ಜನತಾ ದಳ: 1

2ನೇ ಬಾರಿಗೆ ಗೆದ್ದ ಒಡೆಯರ್
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಎರಡನೇ ಬಾರಿಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.

Share This Article
Facebook Whatsapp Whatsapp Telegram
Previous Article DEVARAJE GOWDA 3 ಪೂರ್ತಿ ಆಡಿಯೋ ಬಿಡುಗಡೆ ಮಾಡಿದ್ರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತೆ: ದೇವರಾಜೇಗೌಡ
Next Article HD Kumaraswamy ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್‌ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್‌

Latest Cinema News

02 5
ನಟ ಪ್ರಥಮ್ ಮೇಲೆ ಹಲ್ಲೆ ಆರೋಪ ಪ್ರಕರಣ – ಹೈಕೋರ್ಟ್‌ನಲ್ಲಿ ಇತ್ಯರ್ಥ
Bengaluru City Chikkaballapur Cinema Districts Karnataka Latest Top Stories
Shivarajkumar Dad Movie
ನಂದಿಬೆಟ್ಟದಲ್ಲಿ ಶಿವರಾಜ್ ಕುಮಾರ್ ನಟನೆಯ ‘ಡ್ಯಾಡ್’ ಶೂಟಿಂಗ್
Cinema Latest Sandalwood Top Stories
Vishnuvardhan 3
ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಇಂದು – ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ
Cinema Latest Sandalwood Top Stories
disha patani
ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
Bollywood Cinema Crime Latest Main Post National
Vedika
ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ
Cinema Latest Sandalwood Top Stories

You Might Also Like

Car Accident
Districts

ಗೋವಾದ ಬಸ್, ಕಾರ್‌ ನಡ್ವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

4 hours ago
Caste Cencus
Bengaluru City

ಸೆ.22ರಿಂದ ನಡೆಯಬೇಕಿದ್ದ ಜಾತಿ ಜನಗಣತಿ ಮರುಸಮೀಕ್ಷೆ ಮುಂದೂಡಿಕೆ?

5 hours ago
Sabarimala Temple
Court

ಶಬರಿಮಲೆ ವಿಗ್ರಹದಿಂದ ಚಿನ್ನ ನಾಪತ್ತೆ – ತನಿಖೆಗೆ ಆದೇಶಿಸಿದ ಹೈಕೋರ್ಟ್

5 hours ago
Wolf Attacks
Crime

20 ದಿನಗಳಲ್ಲಿ 11 ದಾಳಿ, ಇಬ್ಬರು ಬಾಲಕಿಯರು ಸಾವು – ಬಹ್ರೈಚ್‌ನಲ್ಲಿ ಮತ್ತೆ ನರಭಕ್ಷಕ ತೋಳಗಳ ಹಾವಳಿ

5 hours ago
Banglegudde
Dakshina Kannada

ಬಂಗ್ಲೆಗುಡ್ಡ ರಹಸ್ಯ | 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕೊಡಗಿನ ವ್ಯಕ್ತಿಯ ಐಡಿ ಕಾರ್ಡ್‌, ವಾಕಿಂಗ್‌ ಸ್ಟಿಕ್‌ ಪತ್ತೆ

5 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?