ಮೊಬೈಲ್ ಫೋನಿಗಾಗಿ ಗಲಾಟೆ: ಪ್ರಿನ್ಸಿಪಾಲ್ ಮಗಳು ಆತ್ಮಹತ್ಯೆ

Public TV
1 Min Read
SUICIDE 2

ಹೈದರಾಬಾದ್: ಮೊಬೈಲ್ ಫೋನ್ ವಿಚಾರಕ್ಕೆ ನಡೆದ ಗಲಾಟೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ.

ಸುಚಿತ್ರಾ(19) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಂಭಾಂ ದಾಮೋದರ್ ರೆಡ್ಡಿಯ ಹಿರಿಯ ಪುತ್ರಿಯಾಗಿದ್ದು, ಇವರು ಖಾಸಗಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

phone

ಶನಿವಾರ ರಾತ್ರಿ ಸುಚಿತ್ರಾ ಮತ್ತು ಆಕೆಯ ಸಹೋದರಿ ಹಾಸಿನಿ ಮೊಬೈಲ್ ಫೋನ್ ಗಾಗಿ ಜಗಳವಾಡುತ್ತಿದ್ದರು. ಬಳಿಕ ಅವರ ತಂದೆಯ ಇಬ್ಬರ ಜಗಳದಲ್ಲಿ ಮಧ್ಯಪ್ರವೇಶಿಸಿ, ಮೊಬೈಲ್ ಬಿಟ್ಟು ಪರೀಕ್ಷೆಗಳಿಗೆ ಓದಿಕೊಳ್ಳಿ ಎಂದು ಬೈದಿದ್ದಾರೆ. ಇದರಿಂದ ಸುಚಿತ್ರಾ ಬೇಸರಗೊಂಡಿದ್ದಳು.

ಸುಚಿತ್ರಾ ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಟಿದ್ದು, ಭಾನುವಾರ ಬೆಳಿಗ್ಗೆ ಆಕೆಯ ಮೃತ ದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *