ಭೋಪಾಲ್: ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಮೋಹನ್ ಯಾದವ್ (CM Mohan Yadav) ಅವರ ಬೆಂಗಾವಲು ಪಡೆಯ 19 ವಾಹನಗಳಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ನೀರು ಮಿಶ್ರಿತ ಡೀಸೆಲ್ (Diesel) ತುಂಬಿದ ಘಟನೆ ಇಂದೋರ್ನಲ್ಲಿ ನಡೆದಿದೆ.
ಇದರಿಂದಾಗಿ ಕೆಲ ಕಾರುಗಳು ಸ್ವಲ್ಪ ದೂರ ಚಲಿಸಿ ಹೆದ್ದಾರಿಯಲ್ಲೇ ನಿಂತಿವೆ. ಇನ್ನೂ ಕೆಲವು ಪೆಟ್ರೋಲ್ ಬಂಕ್ ಬಿಟ್ಟು ಹೊರಗೆ ಬಂದಿಲ್ಲ. ಇದರಿಂದಾಗಿ ಕಾರುಗಳನ್ನು ಸಿಬ್ಬಂದಿ ಬದಿಗೆ ತಳ್ಳಿದ್ದಾರೆ. ಬಳಿಕ ಇಂಧನ ಪರಿಶೀಲನೆ ನಡೆಸಿದಾಗ ಡೀಸೆಲ್ಗೆ ನೀರು ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ – ಸಾವಿನ ಸಂಖ್ಯೆ 7ಕ್ಕೆ ಏರಿಕೆ
ಕೂಡಲೇ ಅಧಿಕಾರಿಗಳು ಸಿಎಂ ಬೆಂಗಾವಲು ಪಡೆಗೆ ಬದಲಿ ವ್ಯವಸ್ಥೆ ಮಾಡಿದ್ದಾರೆ. ಪೆಟ್ರೋಲ್ ಬಂಕ್ನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇನ್ನೂ ಕಲಬೆರಕೆ ಡೀಸೆಲ್ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 2,000 ರೂ.ಗೆ ಸೆಕ್ಸ್ ಲೈವ್ಸ್ಟ್ರೀಮ್ – ಹೆಣ್ಣು ಮಕ್ಕಳಿಬ್ಬರ ಕಾಲೇಜು ಫೀಸ್ ಕಟ್ಟಲಾಗದೇ ಕೃತ್ಯಕ್ಕಿಳಿದಿದ್ದ ದಂಪತಿ