ಕಾರವಾರ: ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಜಿಲ್ಲೆಯ ಅಮದಳ್ಳಿಯಲ್ಲಿ ಗ್ರಾಮದಲ್ಲಿ ಪತ್ತೆಯಾಗಿದೆ.
ಗ್ರಾಮದ ಗಾಂವಕರವಾಡದ ಪ್ರಮೋದ ಗಾಂವಕರ ಮನೆಯ ಹಿತ್ತಲಿನಲ್ಲಿ ಈ ಹಾವು ಕಾಣಿಸಿಕೊಂಡಿದೆ. ಮನೆಯವರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮನೆಯವರು ಮಾತ್ರವಲ್ಲದೆ ಸ್ಥಳೀಯ ನಾಗರಿಕರನ್ನೂ ಕೂಡ ಈ ಹಾವು ಭಯಪಡುವಂತೆ ಮಾಡಿತ್ತು.
ಸ್ಥಳೀಯರು ಉರಗಪ್ರೇಮಿ ಮಹೇಶ ನಾಯ್ಕ ಹಾಗೂ ನಾಗರಾಜ್ ಶೇಟ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಉರಗ ಪ್ರೇಮಿಗಳು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಕಾಳಿಂಗವನ್ನು ರಕ್ಷಣೆ ಮಾಡಿದ್ದಾರೆ. ಕಾಳಿಂಗ ಸರ್ಪವನ್ನು ಹಿಡಿದು ಬಯಲು ಪ್ರದೇಶದಲ್ಲಿ ಎಲ್ಲರಿಗೂ ಪ್ರದರ್ಶಿಸಿದ್ದಾರೆ. ಹೆಡೆಯನ್ನು ಎತ್ತಿ ಬುಸುಗುಡುತ್ತಾ ನಾಲಿಗೆಯನ್ನು ಹೊರ ತೆಗೆದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಮಕ್ಕಳು ಕೂಡ ಅದನ್ನು ಹಿಡಿದು ತಮ್ಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ.
ಸದ್ಯಕ್ಕೆ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.