ಶಿಮ್ಲಾ: ಪ್ರಪಾತಕ್ಕೆ ಕಾರು ಉರುಳಿ ಬಿದ್ದ ಪರಿಣಾಮ 11 ಜನರು ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ರಾಣಿ ನಲ್ಲಾ ಪ್ರದೇಶದಲ್ಲಿ ನಡೆದಿದೆ.
ಎತ್ತರ ರಸ್ತೆಯಿಂದ ಬಿದ್ದ ಕಾರು ಪಲ್ಟಿಹೊಡೆಯುತ್ತ ಕಲ್ಲಿನ ಬಂಡೆಯ ಮೇಲೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಮೃತ ದೇಹ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
#SpotVisual: Nine people killed after a car rolled down a hill near Rohtang at Raninallah, in Kullu district, today #HimachalPradesh pic.twitter.com/zyF1gCT6RZ
— ANI (@ANI) August 23, 2018
ಇದಕ್ಕೂ ಮುನ್ನ ಮುಂಬೈನ ಪೋಳಾದ್ಪುರ್ ನಲ್ಲಿ ನಡೆದ ಘಟನೆಯೊಂದರಲ್ಲಿ ವಿಶ್ವವಿದ್ಯಾಲಯದ 33 ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಪ್ರಕಾಶ್ ಸಾವಂತ್ ಎಂಬವರು ಮಾತ್ರ ಬದುಕುಳಿದಿದ್ದರು.
34 ಮಂದಿ ಪ್ರವಾಸ ಕೈಗೊಂಡಿದ್ದೇವು. ಈ ವೇಳೆ ಪೋಳಾದ್ಪುರ್ ಸಮೀಪದಲ್ಲಿ ಬಸ್ಸು ರಾಡಿಯಲ್ಲಿ ಜಾರಿ ಪ್ರಪಾತಕ್ಕೆ ಬಿದ್ದಿತ್ತು. ಇದರಿಂದಾಗಿ ಮರಗಳನ್ನು ತಾಕಿ, ಪಲ್ಟಿ ಹೊಡೆಯುತ್ತಿತ್ತು. ನಾನು ಹಾರಿ ಪ್ರಾಣ ಉಳಿಸಿಕೊಂಡೆ ಎಂದು ಪ್ರಕಾಶ್, ಮಾಧ್ಯಮಗಳ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv