– ಸಹಾಯಕ್ಕೆ ಬಂದ ರಾಜಕೀಯ ನಾಯಕರು
ಭೋಪಾಲ್: 100 ರೂ. ಲಂಚಕ್ಕಾಗಿ ಮೊಟ್ಟೆ ಮಾರುವ ಬಾಲಕನ ಮೊಟ್ಟೆ ಗಾಡಿಯನ್ನು ಪಾಲಿಕೆ ಅಧಿಕಾರಿಗಳು ಪಲ್ಟಿ ಮಾಡಿದ್ದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿತ್ತು. ಈಗ ಈ ಬಾಲಕನಿಗೆ ಇಡೀ ದೇಶದ ಜನರ ಸಹಾಯ ಹಸ್ತ ಚಾಚುತ್ತಿದ್ದಾರೆ.
ವ್ಯಾಪಾರ ಮಾಡಲು ಮೊಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಾಲಕನ ಬಳಿ ಸ್ಥಳೀಯ ಪಾಲಿಕೆ ಅಧಿಕಾರಿ 100 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇಲ್ಲ ಎಂದರೇ ಬಂಡಿಯನ್ನು ಸ್ಥಳದಿಂದ ತೆಗೆಯುವಂತೆ ಎಚ್ಚರಿಕೆ ನೀಡಿದ್ದ. ಆದರೆ ಲಾಕ್ಡೌನ್ ಕಾರಣದಿಂದ ವ್ಯಾಪಾರ ಕಡಿಮೆಯಾಗಿದ್ದರಿಂದ ಬಾಲಕ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ಅಧಿಕಾರಿ ನಡುರಸ್ತೆಯಲ್ಲಿ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಮೊಟ್ಟೆಗಳನ್ನು ನಾಶ ಮಾಡಿದ್ದನು. ಇದನ್ನು ಓದಿ: 100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ
Power without a heart is anti-people, anti-poor & anti-human. This 14-year old egg seller lost all the eggs stocked on his cart, just because he refused to pay Rs. 100 bribe to civic body officials in Indore. ???? pic.twitter.com/Ulkq5jvoYz
— Vibhinna (@Vibhinnaideas) July 25, 2020
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಕಂಡು ಇಡೀ ದೇಶದ್ಯಾಂತ ಜನರು ಬಾಲಕನ ನೆರವಿಗೆ ಬಂದಿದ್ದಾರೆ. ಜೊತೆಗೆ ಆತನಿಗೆ ಇರಲು ಒಂದು ಮನೆ ಮತ್ತು ಉಚಿತ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಬಾಲಕನ ಮನೆಯವರು, ಘಟನೆ ನಡೆದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಬಾಲಕನ ಭವಿಷ್ಯಕ್ಕೆ ನೆರೆವು ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
Indore: Locals & politicians come to rescue of 13-year-old egg seller Paras, whose cart was allegedly overturned by Municipal Corporation workers on 22nd July. His grandfather says, "Digvijaya Singh assured to take care of his education, MLA Mendola assured to provide a house." pic.twitter.com/JFk7bM4haY
— ANI (@ANI) July 25, 2020
ಬಾಲಕ ವಿಡಿಯೋ ವೈರಲ್ ಆದ ನಂತರ ಆತನ ಸಹಾಯಕ್ಕೆ ಸ್ಥಳೀಯರು ಕೂಡ ಆಗಮಿಸಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಬಾಲಕನಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದು, ಆರ್ಥಿಕ ನೆರವು ಮತ್ತು ಸಹಾಯವನ್ನು ನೀಡಿದ್ದಾರೆ. ಇಂದೋರ್ ನ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಪ್ರಧಾನ ಆವಾಸ್ ಯೋಜನೆಯಡಿ ಆತನಿಗೆ ಉಚಿತ ಮನೆಯನ್ನು ನೀಡುವುದಾಗಿ ಹೇಳಿದ್ದಾರೆ. ಇಂದೋರ್ ಪ್ರೆಸ್ ಕ್ಲಬ್ ಕೂಡ ಹುಡುಗನಿಗೆ ಪಡಿತರ ಮತ್ತು ಹಣವನ್ನು ಒದಗಿಸಿದೆ.
ಈ ವಿಚಾರವಾಗಿ ಮಾತನಾಡಿರುವ ಬಾಲಕ ಅಜ್ಜ, ದೇಶಾದ್ಯಂತದ ಜನರ ಬೆಂಬಲ ನಮಗೆ ಸಿಕ್ಕಿದೆ. ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಬಾಲಕನಿಗೆ ಸೈಕಲ್ ಮತ್ತು 2,500 ರೂ. ಧನಸಹಾಯ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಅವರು 10,000 ರೂ ನೀಡಿ ಜೊತೆಗೆ ಇಬ್ಬರು ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಎಲ್ಲರೂ ಕರೆ ಮಾಡಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.