Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

1.5 ಕೋಟಿ ಬಂದಿಲ್ಲ, ಸ್ವಾಮಿ ಖಾತೆಯಿಂದ ಬಂದಿರೋದು 15 ಲಕ್ಷ – ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

Public TV
Last updated: January 6, 2021 3:56 pm
Public TV
Share
4 Min Read
radhika kumaraswamy and yuvaraj swamy
SHARE

– ನಾಟ್ಯ ರಾಣಿ ಶಾಂತಲಾ ಸಿನಿಮಾಕ್ಕೆ ಮುಂಗಡ ಹಣ
– ಸ್ವಾಮಿ ಬಾವನ ಖಾತೆಯಿಂದ 60 ಲಕ್ಷ ರೂ. ಜಮೆ
– 17 ವರ್ಷಗಳಿಂದ ಸ್ವಾಮಿಗೂ ನಮ್ಮ ಕುಟುಂಬಕ್ಕೂ ಪರಿಚಯ
– ನನ್ನ ಬಗ್ಗೆ ಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿತ್ತು

ಬೆಂಗಳೂರು: ನನಗೆ ಯುವರಾಜ್‌ ಅವರ ಖಾತೆಯಿಂದ 15 ಲಕ್ಷ ರೂ.ಹಣ ಬಂದಿದೆ ಹೊರತು 1.5 ಕೋಟಿ ರೂ. ಹಣ ಬಂದಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ ಮಾಡಿ ಸದ್ಯ ಸಿಸಿಬಿಯಿಂದ ಬಂಧನಕ್ಕೆ ಒಳಗಾದ ಯುವರಾಜ್‌ ಅಲಿಯಾಸ್‌ ಸ್ವಾಮಿಯಿಂದ 1.5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

radhika kumaraswamy 1

ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?
1. ಸ್ವಾಮಿ ಮತ್ತು ನಮ್ಮ ಕುಟುಂಬಕ್ಕೆ ಸುಮಾರು 17 ವರ್ಷಗಳ ಪರಿಚಯ. ಈ ಹಿಂದೆ ನನ್ನ ತಂದೆಯವರಲ್ಲಿ ಒಂದು ಪೂಜೆ ಮಾಡಬೇಕು ಎಂದು ಹೇಳಿದ್ದರು. ಆ ಪೂಜೆಯನ್ನು ತಂದೆ ಮಾಡಿರಲಿಲ್ಲ. ಇದಾದ ಬಳಿಕ ತಂದೆಯವರು ಮೃತಪಟ್ಟರು. ಮೇ ತಿಂಗಳಿನಲ್ಲಿ ಪೂಜೆ ಮಾಡದ್ದಕ್ಕೆ ತಂದೆ ಮೃತಪಟ್ಟಿರಬಹುದು ಎಂಬ ಕೊರಗು ತಾಯಿಗೆ ಇತ್ತು. ಇದಾದ ನಂತರ ಅವರ ಜೊತೆ ಈ ವಿಚಾರಕ್ಕೆ ಮಾತನಾಡುತ್ತಿದ್ದೆ.

2. ಐತಿಹಾಸಿಕಾ ಸಿನಿಮಾ ಮಾಡುವ ಕನಸು ನನ್ನಲ್ಲಿತ್ತು.  ನಾಟ್ಯ ರಾಣಿ ಶಾಂತಲಾ ಸಿನಿಮಾ ಮಾಡಲು ಸ್ವಾಮಿ ನನ್ನ ಜೊತೆ ಮಾತನಾಡಿದ್ದರು. ಈ ವೇಳೆ ನನ್ನ ಮಗಳ ಹೆಸರಿನಲ್ಲಿ ಬ್ಯಾನರ್‌ ತೆರೆದಿದ್ದೇನೆ. ನಿಮ್ಮ ಬ್ಯಾನರ್‌ ಮತ್ತು ನಮ್ಮ ಬ್ಯಾನರ್‌ ಅಡಿ ಸಿನಿಮಾ ಮಾಡುವ ಎಂದು ಹೇಳಿದ್ದರು. ಇದಕ್ಕೆ ನಾನು ಸಿನಿಮಾ ಮಾಡಿದರೆ ಒಂದೇ ಬ್ಯಾನರ್‌ನಲ್ಲಿ ಮಾಡಬೇಕು. ಎರಡು ಬ್ಯಾನರ್‌ ಜೊತೆಯಾಗಿ ಮಾಡುವುದು ಬೇಡ ಎಂದು ತಿಳಿಸಿದ್ದೆ. ಕೊನೆಗೆ ಅವರ ಮಗಳ ಬ್ಯಾನರ್‌ ಅಡಿ ಅಡಿಯಲ್ಲೇ ಸಿನಿಮಾ ಮಾಡುವ ಎಂದು ಹೇಳಿದ್ದರು. ಈ ಪ್ರಸ್ತಾಪಕ್ಕೆ ನಾನು ಒಪ್ಪಿಕೊಂಡೆ. ಈ ಸಂಬಂಧ ಮಾರ್ಚ್‌,  ಫೆಬ್ರವರಿ  ಮಧ್ಯೆ ನನ್ನ ಖಾತೆಗೆ ಮುಂಗಡವಾಗಿ 15 ಲಕ್ಷ ರೂ. ಹಾಕಿದರು. ಇದಾದ ಬಳಿಕ ಅವರ ಬಾವನ ಖಾತೆಯಿಂದ 60 ಲಕ್ಷ ರೂ. ಹಣ ನನ್ನ ಖಾತೆಗೆ ಬಂದಿದೆ. 1.50 ಕೋಟಿ ರೂ. ಹಣ ನನಗೆ ಬಂದಿಲ್ಲ.

Yuvaraj CCB House bjp 2

3. ನಾನು ಕಪ್ಪು ಹಣ ತೆಗೆದುಕೊಂಡಿಲ್ಲ. ಬ್ಯಾಂಕ್‌ ಖಾತೆಯ ಮೂಲಕ ಹಣ ವರ್ಗಾವಣೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದೆ. ಈ ವೇಳೆ ಅವರು ಈಗ ನಾನು ಬ್ಯುಸಿ ಇದ್ದೇನೆ ಎಂದು ಹೇಳಿದ್ದರು. ನಾನು ಕೊರೊನಾ ಕಾರಣದಿಂದ ಬೆಂಗಳೂರಿನಲ್ಲಿ ಇರಲಿಲ್ಲ. ಮಂಗಳೂರಿನಲ್ಲಿ ಇದ್ದೆ. ಹೀಗಾಗಿ ಭೇಟಿ ಮಾಡಿ ಒಪ್ಪಂದ ಮಾಡಲು ಸಾಧ್ಯವಾಗಿರಲಿಲ್ಲ.

4. ನಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧ ಇದ್ದ ಕಾರಣ ನಾನು ಅವರ ಬ್ಯಾನರ್‌ನಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ. ಸಿನಿಮಾ ಬಿಟ್ಟರೆ ನನಗೂ ಅವರಿಗೂ ಬೇರೆ ಯಾವುದೇ ಸಂಬಂಧ ಇಲ್ಲ. ಯಾವುದೇ ವ್ಯವಹಾರ ನಡೆಸಿಲ್ಲ.

5. ಸಿನಿಮಾದವರ ಜೊತೆ ರಾಜಕಾರಣಿಗಳ ಪರಿಚಯ ಇರುವುದು ಸಾಮಾನ್ಯ. ಸಿನಿಮಾ ರಿಲೀಸ್‌ ಅಥವಾ ಬೇರೆ ಯಾವುದೇ ಕಾರ್ಯಕ್ರಮ ಅವರನ್ನು ಕರೆಸುವ ಸಂಬಂಧ ಮಾತುಕತೆ ಮಾಡಿದ್ದೇನೆಯೇ ಹೊರತು ಬೇರೆ ಯಾವುದೇ ಮಾತುಕತೆ ನಡೆಸಿಲ್ಲ. ಬೇರೆ ಮಾತುಕತೆ ನಡೆಸಿದ್ದರೆ ದಾಖಲೆ ತೋರಿಸಿ.

Yuvaraj CCB House bjp 3

6. ಇಲ್ಲಿಯವರೆಗೆ ನಮಗೆ ಮೋಸ ಆಗಿದೆಯೋ ಹೊರತು ನಾವು ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ನಾನು ಅವರ ಜೊತೆ ಮಾತನಾಡಿ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿಲ್ಲ. ನೀವು ಅವರ ವಾಟ್ಸಪ್‌ ಡಿಪಿ ನೋಡಿದರೆ ಎಷ್ಟು ದೊಡ್ಡ ಜನರ ಜೊತೆ ಅವರ ಸಂಪರ್ಕವಿದೆ ಎಂಬುದನ್ನು ತಿಳಿಯಬಹುದು. ಅಷ್ಟು ದೊಡ್ಡ ದೊಡ್ಡ ವ್ಯಕ್ತಿಗಳೇ ಮೋಸ ಹೋಗಿರುವಾಗ ನಾವು ಮೋಸ ಹೋಗಿರುವುದು ಬಹಳ ಸಣ್ಣ ವಿಚಾರ.

7. 60 ಲಕ್ಷ ಹಣವನ್ನು ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಬ್ಯಾಂಕ್‌ ದಾಖಲೆಗಳಲ್ಲಿಇದೆ ಮತ್ತು ಇದು ವೈಟ್‌ ಮನಿ. ಅಷ್ಟೇ ಅಲ್ಲದೇ ಅವರು ಕುಟುಂಬ ಪರಿಚಯದ ವ್ಯಕ್ತಿ ಆಗಿದ್ದರು. ಒಂದು ಎರಡು ಬಾರಿ ಅವರ ಕುಟುಂಬ ಸದಸ್ಯರನ್ನು ಪರಿಚಯ ಮಾಡಿಸಿದ್ದರು. ಸ್ವಾಮಿಯವರು ನನ್ನ ಬಾವ ದುಡ್ಡನ್ನು ಜಮೆ ಮಾಡಿದ್ದಾರೆ ಎಂದು ನನಗೆ ತಿಳಿಸಿದ್ದರು. ಈ ಕಾರಣದಿಂದ ನಾನು ಹಣ ಹಾಕಿದ್ದು ಯಾರು? ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ

8. ನಾನು ಯಾವುದೇ ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡು ಹಣ ಪಡೆಯುವುದಿಲ್ಲ. ಬಾಯಿ ಮಾತಿನಲ್ಲೇ ಒಪ್ಪಿ ಡೇಟ್ಸ್‌ ಕೊಡುತ್ತೇನೆ. ಈ ಕಾರಣಕ್ಕೆ ಸಿನಿಮಾ ಮಾಡುವ ಮೊದಲೇ ಒಪ್ಪಂದ ಮಾಡಿಕೊಂಡಿರಲಿಲ್ಲ.

Yuvaraj CCB House bjp 1

9. 16 ವರ್ಷದ ಹಿಂದೆಯೇ ನನಗೆ ಹೆಣ್ಣು ಮಗು ಆಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಅವರು ಹೇಳಿದ್ದ ಭವಿಷ್ಯ ನಿಜವಾಗಿತ್ತು. ಇದಾದ ಬಳಿಕ ಮನೆಯಲ್ಲಿ ಅವರು ಹೇಳಿದ ಪೂಜೆಗಳನ್ನು ಮಾಡುತ್ತಿದ್ದರು. ನನ್ನ ತಂದೆಯವರು ಸ್ವಾಮಿ ಅವರಿಗೆ ಈ ಹಿಂದೆ ಸಹಾಯ ಮಾಡಿದ್ದರು. ಹೀಗಾಗಿ ನಾನು ಅವರ ಜೊತೆ ನಂಬಿಕೆಯನ್ನು ಇಟ್ಟುಕೊಂಡಿದ್ದೆ. ಈಗ ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಒಮ್ಮೆ ಶಾಕ್‌ ಆಗಿದೆ. ಸ್ವಾಮಿ ಜೊತೆ ಸಿನಿಮ ಬಿಟ್ಟರೆ ಬೇರೆ ಯಾವುದೇ ವ್ಯವಹಾರಿಕಾ ಸಂಬಂಧ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಡೀಲಿಂಗ್‌ ಮಾಡಿಲ್ಲ. ನನ್ನ ಮೇಲೆ ಬಂದಿರುವ ಆರೋಪಕ್ಕೆ ಉತ್ತರ ನೀಡಲೆಂದೇ ಈ ಸುದ್ದಿಗೋಷ್ಠಿಗೆ ನಿಮ್ಮನ್ನು ಕರೆದಿದ್ದೇನೆ. ಮುಂದೆಯೂ ಯಾವುದೇ ಆರೋಪ ಬಂದರೆ ನನ್ನನ್ನು ಸಂಪರ್ಕಿಸಿ. ಎಲ್ಲದ್ದಕ್ಕೂ ನಾನು ಉತ್ತರ ನೀಡುತ್ತೇನೆ.

TAGGED:kannada newsRadhika KumaraswamysandalwoodYuvrajಕನ್ನಡನಾಟ್ಯ ರಾಣಿ ಶಾಂತಲಾಯುವರಾಜ್ರಾಧಿಕಾ ಕುಮಾರಸ್ವಾಮಿಸಿನಿಮಾ
Share This Article
Facebook Whatsapp Whatsapp Telegram

You Might Also Like

The Rise of Ashoka Satish Ninasam Sapthami Gowda
Cinema

ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

Public TV
By Public TV
24 minutes ago
N chaluvarayaswamy
Bengaluru City

ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ

Public TV
By Public TV
42 minutes ago
Isrel Iran War
Latest

ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ

Public TV
By Public TV
1 hour ago
Vijayapura bhimatheera
Court

ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

Public TV
By Public TV
1 hour ago
Laxman Savadi 1 1
Bengaluru City

2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಲಕ್ಷ್ಮಣ್ ಸವದಿ

Public TV
By Public TV
2 hours ago
Allu Arjun Atlee
Cinema

ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?