ಹೈವೇಯಿಂದ ಜಾರಿದ ಕಾರು – ಪ್ರಾಣಾಪಾಯದಿಂದ ರಾಜ್ಯಪಾಲ ಬಂಡಾರು ಪಾರು

Public TV
1 Min Read
car 1

ಹೈದರಾಬಾದ್: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ತೆಲಂಗಾಣದಲ್ಲಿ ಅಪಘಾತಕ್ಕಿಡಾಗಿದೆ. ತೆಲಂಗಾಣದ ಯಾದದ್ರಿ ಭುವನಗಿರಿ ಜಿಲ್ಲೆಯ ಚೌತುಪ್ಪಲ್ ಪಟ್ಟಣದ ಬಳಿ ಈ ಅಪಘಾತ ಸಂಭವಿಸಿದೆ.

hytu 111

ಬಂಡಾರು ದತ್ತಾತ್ರೇಯ ಅವರು ಚೌತುಪ್ಪಲ್ ಬ್ಲಾಕ್‍ನ ಕೈತಪುರಂ ಗ್ರಾಮದಲ್ಲಿ ನಲ್‍ಗೊಂಡ ಜಿಲ್ಲೆಯ ಕಾರ್ಯಕ್ರಮವೊಂದಕ್ಕಾಗಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ನಂತರ ರಾಜ್ಯಪಾಲರು ತಮ್ಮ ವಾಹನವನ್ನು ಬದಲಾಯಿಸಿ ನಲ್ಗೊಂಡ ಜಿಲ್ಲೆಯತ್ತ ಹೊರಟಿದ್ದಾರೆ.

car 2

ಪ್ರಾಥಮಿಕ ವರದಿಗಳ ಪ್ರಕಾರ ಮರ್ಸಿಡಿಸ್ ಬೆಂಜ್ ಕಾರಿನ (ಎಪಿ 9-ಎಎಸ್ -6666) ಸ್ಟೇರಿಂಗ್ ಇದ್ದಕ್ಕಿದ್ದಂತೆ ಲಾಕ್ ಆಗಿದೆ. ಇದರ ಪರಿಣಾಮವಾಗಿ ಚಾಲಕನು ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಂಡು ಅಪಘಾತ ಸಂಭವಿಸಿದೆ. ಬೆಂಗಾವಲಿನಲ್ಲಿ ಇತರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಭದ್ರತಾ ಸಿಬ್ಬಂದಿ ಕಾರಿನತ್ತ ಧಾವಿಸಿ ದತ್ತಾತ್ರೇಯ ಅವರನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ವಾಹನವು ಪಲ್ಟಿಯಾಗಲಿಲ್ಲ ಮತ್ತು ಯಾರಿಗೂ ಗಾಯವಾಗಲಿಲ್ಲ. ಕಾರು ಭಾಗಶಃ ಹಾನಿಗೊಳಗಾಗಿದೆ. ಅಪಘಾತಕ್ಕೆ ಕಾರಣವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಡಿಸಿಪಿ ಭೋಂಗೀರ್ ಕೆ ನಾರಾಯಣ ರೆಡ್ಡಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *