ಹೆರಿಗೆ ವೇಳೆ ಸಾವನ್ನಪ್ಪಿದ ಪತ್ನಿಯನ್ನು ನೆನೆದು ವೇದಿಕೆಯಲ್ಲೇ ಅಪರ ಜಿಲ್ಲಾಧಿಕಾರಿ ಕಣ್ಣೀರು

Public TV
1 Min Read
YGR

ಯಾದಗಿರಿ: ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ನೆನಪಿಸಿಕೊಂಡು ಯಾದಗಿರಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

60afeec4 55d5 4f8f a8d1 1bc115442c0c medium

ಯಾದಗಿರಿಯಿಂದ ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಭವನದಲ್ಲಿ ಪ್ರಕಾಶ್ ರಜಪೂತ ಅವರಿಗೆ ಬಿಳ್ಕೋಡಿಗೆ ಸಮಾರಂಭ ಏರ್ಪಡಿಸಲಾಗಿತ್ತು. ವಿವಿಧ ಇಲಾಖೆಯ ಸಿಬ್ಬಂದಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷದಿಂದ ಯಾದಗಿರಿ ಅಪರ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ತಮ್ಮ ನೆಚ್ಚಿನ ಮಡದಿಯನ್ನು ಕಳೆದುಕೊಂಡಿದ್ದರು. ಹೀಗಿದ್ದರೂ ಸಹ ಯಾವುದೇ ರಜೆ ಪಡೆಯದೆ, ಕೊರೊನಾ ಮೊದಲ ಅಲೆ ಮತ್ತು ಕೃಷ್ಣ ಮತ್ತು ಭೀಮಾ ನದಿ ಪ್ರವಾಹ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ ಭಾಷಣದಲ್ಲಿ ಇದನ್ನು ನೆನಪು ಮಾಡಿಕೊಂಡ ಅವರು ತಮ್ಮ ಮಡದಿ ತ್ಯಾಗ ನೆನೆದು ಕಣ್ಣೀರು ಹಾಕಿದರು.

ಯಾದಗಿರಿ ಸಹಾಯಕ ಆಯುಕ್ತರಾಗಿದ್ದ ಶಂಕರಗೌಡ ಸೋಮನಾಳ ಯಾದಗಿರಿ ಅಪರ ಜಿಲ್ಲಾಧಿಕಾರಿ ಭಡ್ತಿ ಹೊಂದಿದ್ದು, ಅವರನ್ನು ಮತ್ತು ಅವರ ಜಾಗಕ್ಕೆ ನೇಮಕವಾದ ಪ್ರಕಾಶ್ ಹನಗಂಡಿ ಸನ್ಮಾನಿಸಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಇಬ್ಬರನ್ನೂ ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *