ಹೆದ್ದಾರಿಗೆ ಹಾಕಿದ್ದ ಮೊಳೆಗಳನ್ನ ತೆಗೆದಿಲ್ಲ: ದೆಹಲಿ ಪೊಲೀಸರು

Public TV
1 Min Read
Farmers Protest Ghazipur Border Police 3

ನವದೆಹಲಿ: ರೈತರು ದೆಹಲಿ ಪ್ರವೇಶಿಸದಂತೆ ಮಹಾಗೋಡೆ ನಿರ್ಮಿಸಿಕೊಂಡಿದ್ದ ಸರ್ಕಾರ ಹೆದ್ದಾರಿಯಲ್ಲಿ ದೊಡ್ಡ ಮೊಳೆಗಳನ್ನ ಹಾಕಿತ್ತು. ಇಂದು ಬೆಳಗ್ಗೆ ಮೊಳೆಗಳನ್ನ ತೆಗೆಯುತ್ತಿರುವ ಕೆಲ ವೀಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ಇದೀಗ ದೆಹಲಿ ಪೊಲೀಸರು ಮೊಳೆಗಳನ್ನ ತೆಗೆದಿಲ್ಲ, ಬದಲಾಗಿ ಮತ್ತೊಂದು ಕಡೆ ಶಿಫ್ಟ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Farmers Protest Ghazipur Border Police 4

ಗಣರಾಜ್ಯೋತ್ಸವ ದಿನದಂದು ನಡೆದ ಅನಾಹುತ ಮತ್ತೊಮ್ಮೆ ಸಂಭವಿಸಿದಂತೆ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜೀಪುರ್ ಗಡಿಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಿದೆ. ಗಡಿಯಲ್ಲಿರುವ ಟ್ರ್ಯಾಕ್ಟರ್ ದಿಲ್ಲಿ ಪ್ರವೇಶ ಮಾಡದಂತೆ ಆರೇಳು ಸುತ್ತಿನಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

Farmers Protest Ghazipur Border Police 2

ಬೃಹತ್ ಸಿಮೆಂಟ್ ಬ್ರಿಕ್ಸ್ ಗಳನ್ನು ಇಟ್ಟು ನಡುವೆ ಕಾಂಕ್ರೀಟ್ ತುಂಬಿದೆ. ಸಾಲದು ಅಂತಾ ಗಡಿಯುದ್ದಕ್ಕೂ ಮುಳ್ಳು ತಂತಿನ ಬೇಲಿ ಹಾಕಲಾಗಿದ್ದು, ರಸ್ತೆಗಳನ್ನು ಅಗೆದು ಮೊಳೆಗಳನ್ನು ನಡೆಲಾಗಿತ್ತು.

ಈ ನಡುವೆ ಪ್ರತಿಭಟನಾ ನಿರತ ರೈತರ ಭೇಟಿಗೆ ತೆರಳಿದ್ದ ವಿಪಕ್ಷ ಸಂಸದರು ಸಂಸದರನ್ನ ಪೊಲೀಸರು ತಡೆದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿಭಟನೆ ವೇಳೆ ಮೃತ ರೈತ ನಿವಾಸಕ್ಕೆ ಭೇಟಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *