– ದುಪ್ಪಟ್ಟಾದಿಂದ ಕತ್ತು ಬಿಗಿದು ಕೊಲೆ
– ಮಗಳ ಪ್ರೀತಿಗೆ ಮನನೊಂದು ಈ ಕೃತ್ಯ ಎಸಗಿದ ಪೋಷಕರು
ಲಕ್ನೋ: ತಂದೆ-ತಾಯಿ ಇಬ್ಬರು ಸೇರಿ ಮಗಳನ್ನು ಕೊಂದು ಶವವನ್ನ ಹೊಲದಲ್ಲಿ ಎಸೆದಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಮೃತ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ತಿಳಿದ ತಂದೆ ತಾಯಿ ಮಗಳನ್ನು ಕೊಂದು ಹೊಲದ ಬಳಿ ಎಸದಿದ್ದಾರೆ.
ಅಪ್ರಾಪ್ತ ವಯಸ್ಸಿನ ಮಗಳ ಪ್ರೀತಿಯ ವಿಚಾರವಾಗಿ ಹೆತ್ತರವರ ವಿರೋಧವಿತ್ತು. ಅವಳ ಪ್ರೀತಿಯನ್ನು ಮರೆತು ಬಿಡುವಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಆಕೆ ಹೆತ್ತವರ ಮಾತನ್ನು ಧಿಕ್ಕರಿಸಿ ಆತನೊಂದಿಗೆ ಸುತ್ತಾಟ ಮಾಡುತ್ತಿದ್ದಳು. ಕೆಲವೊಮ್ಮೆ ಪ್ರಿಯತಮನೊಂದಿಗೆ ಇದ್ದ ವೇಳೆ ತಂದೆ ತಾಯಿಗೆ ಸಿಕ್ಕಿಬಿದ್ದಿದ್ದಾಳೆ. ಒಂದು ದಿನ ಪ್ರಿಯತಮನೊಂದಿಗೆ ರಾತ್ರಿ ವೇಳೆ ಮನೆಗೆ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಅವಳ ದುಪ್ಪಟ್ಟದಿಂದಾ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿದ್ದಾರೆ. ಈ ವೇಳೆ ಮಗಳ ಪ್ರಾಣ ಹೋಗಿದೆ. ದೇಹವನ್ನು ಮಿರ್ಜಾಪುರ ಜಮಾಲ್ಪುರ ಪ್ರದೇಶದ ಜಮೀನಿನಲ್ಲಿ ಎಸೆದು ಹೆತ್ತವರು ಪರಾರಿಯಾಗಿದ್ದಾರೆ.
ಕೊಲೆ ವಿಚಾರವನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತಾಗಿ ತನಿಖೆ ಮಾಡುವ ವೇಳೆ ಆಕೆಯ ಹೆತ್ತವರೆ ಕೊಲೆಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪೋಷಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.