ಹೆಂಡ್ತಿ ಕೊಲೆಗೈದ- ದೆವ್ವ ಆಗ್ತಾಳೆಂದು ದೇಹ ತುಂಡರಿಸಿ ನಾಲೆಗೆ ಎಸೆದ

Public TV
2 Min Read
MND Murder 7

– ಐದು ತಿಂಗಳ ಬಳಿಕ ಬೆಳಕಿಗೆ ಬಂತು ಮರ್ಡರ್ ಮಿಸ್ಟರಿ
– ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿತ್ತು ಮಹಿಳೆ ಶವ
– ಪ್ರಕರಣದ ಸುಳಿವು ನೀಡಿತ್ತು ಟ್ಯಾಟೂ

ಮಂಡ್ಯ: ಹೆಂಡತಿಯನ್ನು ಕೊಲೆ ಮಾಡಿದ್ದಲ್ಲದೇ ಆಕೆ ದೆವ್ವವಾಗಿ ಬಂದು ನನ್ನ ಕಾಡುತ್ತಾಳೆ ಎಂದು ಶವವನ್ನು ಕ್ರೂರವಾಗಿ ತುಂಡರಿಸಿ ನದಿಗೆ ಎಸೆದಿದ್ದ ಗಂಡ ಹಾಗೂ ಬಾವ ಐದು ತಿಂಗಳ ಬಳಿಕ ಪೊಲೀಸರಿಗೆ ಅಂದರ್ ಆಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಜರುಗಿದೆ.

MND Murder 8

ಕಳೆದ ನವಂಬರ್ 17 ರಂದು ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ಹೇಮಾವತಿ ನಾಲೆಯಲ್ಲಿ ಮಹಿಳೆಯೊಬ್ಬಳ ತುಂಡರಿಸಿದ ದೇಹ ಸಿಕ್ಕಿತ್ತು. ಇದನ್ನು ಕಂಡ ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಈ ವೇಳೆ ಮಂಡ್ಯ ಪೊಲೀಸರಿಗೆ ಈ ಪ್ರಕರಣ ನಿದ್ದೆ ಗೆಡುವಂತೆ ಮಾಡಿತ್ತು. ಈ ಶವ ನೀರಿನಲ್ಲಿ ಇದ್ದ ಕಾರಣ ಗುರುತಿಸಲು ಸ್ಪಷ್ಟವಾಗಿ ಆಗುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ತಲೆ ನೋವು ಉಂಟಾಗಿತ್ತು. ಇದಾದ ಬಳಿಕ ಮಂಡ್ಯ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿತ್ತು. ಈ ಪ್ರಕರಣ ಜರುಗಿ ತಿಂಗಳುಗಳು ಉರುಳುತ್ತಿದ್ದರು ಸಹ ಪ್ರಕರಣದ ಬಗ್ಗೆ ಸ್ವಲ್ಪವು ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಕೆಆರ್‍ಪೇಟೆ ಗ್ರಾಮಾಂತ ಪೊಲೀಸರಿಗೆ ಮತ್ತಷ್ಟು ಒತ್ತಡ ಹೆಚ್ಚಾಗುತ್ತಾ ಹೋಯಿತು.

MND Murder 1

ದೇಹದ ಗುರುತು ಪತ್ತೆ ಆಗಿದ್ದು ಹೇಗೆ?
ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತಲೆ ಕೆಡಿಸಿಕೊಳ್ಳುವ ಸಮಯದಲ್ಲಿ ಕಳೆದ ತಿಂಗಳು ಪಾಂಡವಪುರ ಪೊಲೀಸ್ ಠಾಣೆಗೆ ದೇಶವಳ್ಳಿ ಗ್ರಾಮದ ವ್ಯಕ್ತಿ ತನ್ನ ಮಗಳು ಆಶಾ ನಾಲ್ಕು ತಿಂಗಳಿನಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಈ ವೇಳೆ ಪಾಂಡವಪುರ ಪೊಲೀಸರು ಕೆಆರ್‍ಪೇಟೆ ಪೊಲೀಸ್ ಠಾಣೆಗೆ ಈ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಪೊಲೀಸರು ದೂರು ನೀಡಿದ ವ್ಯಕ್ತಿಯನ್ನು ವಿಚಾರಣೆ ಮಾಡುವ ವೇಳೆ ಹೇಮಾವತಿ ನಾಲೆಯಲ್ಲಿ ದೊರೆತ ತುಂಡರಿಸಿದ ದೇಹಗಳ ಫೋಟೋಗಳನ್ನು ತೋರಿಸುತ್ತಾರೆ. ಫೋಟೋದಲ್ಲಿನ ಮುಖ ದೂರುದಾರನ ಮುಖ ಹೋಲುತ್ತದೆ. ಬಳಿಕ ಒಂದು ಕೈ ಮೇಲೆ ಇದ್ದ ಮೀನಿನ ಟ್ಯಾಟು ಇರುವ ಫೋಟೋವನ್ನು ನೋಡಿದಾಗ ಆತ ಇದು ನನ್ನ ಮಗಳೇ ಎಂದು ಕಿರುಚಿಕೊಳ್ಳುತ್ತಾನೆ.

MND Murder 3

ಆರೋಪಿಗಳ ಸೆರೆಗೆ ಬಲೆ ಬೀಸಿದ ಪೊಲೀಸರು
ಇಲ್ಲಿಯವರೆ ತಲೆ ಕೆಡಿಸಿಕೊಂಡು ಕುಳಿತಿದ್ದ ಕೆಆರ್ ಪೇಟೆ ಪೊಲೀಸರು ಈ ವ್ಯಕ್ತಿಯ ಹೇಳಿಕೆಯ ಮೇಲೆ ಹಂತಕರ ಸೆರೆಗೆ ಬಲೆ ಬೀಸುತ್ತಾರೆ. ತೀವ್ರವಾದ ತನಿಖೆಯ ನಂತರ ಮೃತ ಆಶಾಳ ಗಂಡ ರಂಗಪ್ಪ ಹಾಗೂ ಬಾವ ರಾಮಚಂದ್ರ ಕೊಲೆ ಮಾಡಿರುವುದು ಪೊಲೀಸರಿಗೆ ತಿಳಿಯುತ್ತದೆ. ಈ ವೇಳೆ ಇಬ್ಬರನ್ನು ವಿಚಾರಣೆ ಮಾಡಿದಾಗ, ಆಶಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಅದಕ್ಕೆ ನಾವು ದೇಶಹಳ್ಳಿಯ ಹೊರಗಡೆ ಕರೆದುಕೊಂಡು ಹೋಗಿ ಕಬ್ಬು ಕಡಿಯುವ ಮಚ್ಚಿನಿಂದ ಕೊಲೆ ಮಾಡಿದೆ. ಆಕೆ ದೆವ್ವವಾಗಿ ನಮ್ಮನ್ನ ಕಾಡಬಹುದು ಎಂದು ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ನಾಲೆಗೆ ಎಸೆದೆವು ಎಂದು ಬಾಯಿ ಬಿಟ್ಟಿದ್ದಾರೆ. ಆದರೆ ಆಶಾಳ ಸಂಬಂಧಿಕರು ರಂಗಪ್ಪ ರಾಮಚಂದ್ರನ ಮಗಳನ್ನು ಮದುವೆಯಾಗಬೇಕು ಎಂದುಕೊಂಡಿದ್ದ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳವಾಗುತ್ತಿತ್ತು, ಈ ವೇಳೆ ನಿನ್ನ ಕತ್ತರಿಸಿಯಾದರು ಮದುವೆಯಾಗುತ್ತೇನೆ ಎಂದು ಆಶಾಳಿಗೆ ಬೆದರಿಕೆ ಹಾಕುತ್ತಿದ್ದ, ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.

MND Murder 6

ಹೆಂತಿಯ ಮೇಲಿನ ದ್ವೇಷಕ್ಕೋ ಇಲ್ಲ ಇನ್ನೊಬ್ಬಳ ವ್ಯಾಮೋಹಕ್ಕೋ ಕಟ್ಟಿಕೊಂಡ ಹೆಂಡತಿಯನ್ನು ಬಾವನ ಜೊತೆ ಗೂಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಕ್ರೂರತೆಯಿಂದ ಮೂವರು ಮಕ್ಕಳು ಅನಾಥವಾಗಿ ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಇದೀಗ ಕೊಲೆ ಮಾಡಿದ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *