ಹೂವನ್ನು 2ರೂಪಾಯಿಗೂ ಕೇಳುವವರಿಲ್ಲ – ರಸ್ತೆಗೆ ಎಸೆಯುತ್ತಿರುವ ರೈತರು

Public TV
1 Min Read
Dharwad Flower

ಧಾರವಾಡ: ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆನೇ ಇಲ್ಲದಂತೆಯಾಗಿದೆ. ಹೂವನ್ನು 2ರೂಪಾಯಿಗೂ ಕೇಳೋರಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿರುವುದು ಧಾರವಾಡದ ಮಾರುಕಟ್ಟೆಯಲ್ಲಿ ಕಂಡುಬಂದಿದೆ.ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

Dharwad Flower3 medium

ಲಾಕ್‍ಡೌನ್ ಇರುವುದರಿಂದ ಇದ್ದ ಮದುವೆ ಕಾರ್ಯಗಳನ್ನು ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೇವಂತಿಗೆ ಹೂವು ಬೆಳೆದ ರೈತರು ಕಂಗಾಲಾಗಿದ್ದು, ಸದ್ಯ 2 ರಿಂದ 4 ರೂಪಾಯಿಗೆ ಹೂವನ್ನ ತೆಗೆದುಕೊಳ್ಳುವವರಿಲ್ಲ. ಧಾರವಾಡ ಮಾರುಕಟ್ಟೆಗೆ ಹೂವು ತೆಗೆದುಕೊಂಡು ಹೋಗಿ ಮಾರಾಟವಾಗದೇ ರಸ್ತೆ ಬದಿಗೆ ಎಸೆದು ಬರುವಂತೆ ಆಗಿದೆ ಎಂದು ರೈತರು ತಮ್ಮ ಅಳಲನ್ನ ತೊಡಿಕೊಳ್ಳುತಿದ್ದಾರೆ. ಇದನ್ನೂ ಓದಿ:ಜ್ವರ ಕಡಿಮೆಯಾಗಿದ್ದು, ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ವಿಶ್ರಾಂತಿDharwad Flower7 medium

ಸದ್ಯ ಹೂವು ಹೊಲದಲ್ಲೇ ಹಾಳಾಗಿ ಹೋಗುವುದನ್ನ ಬಿಡದೇ ಕೂಲಿ ಮಾಡುವವರಿಗೆ ಕಟಾವ್ ಮಾಡಲು ಹಚ್ಚಿದ್ದಾರೆ. ಆದರೆ ಕೂಲಿ ಹಾಗೂ ವಾಹನದ ಬಾಡಿಗೆ  ಮೈಮೇಲೆ ಬರುತ್ತಿದೆ ಎಂದು ಹೂವು ಬೆಳೆದ ರೈತರು ಹೇಳಿದ್ದಾರೆ. ಜಿಲ್ಲೆಯ ಕುರುಬಗಟ್ಟಿ, ಮಂಗಳಗಟ್ಟಿ, ಹುಬ್ಬಳ್ಳಿ ರಸ್ತೆ ಸೇರಿ ಹಲವು ಕಡೆ ರೈತರು ಹೂವನ್ನ ಬೆಳೆದಿದ್ದಾರೆ. ಕಳೆದ ವರ್ಷ ಇದೇ ರೀತಿ ಲಾಕ್‍ಡೌನ್ ಇರುವುದರಿಂದ  ಕಷ್ಟವಾಗಿತ್ತು. ಈ ಬಾರಿಯೂ   ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳುತ್ತಾ ರೈತರು ಕಣ್ಣೀರು ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *