ಹುಬ್ಬಳ್ಳಿ: ಮಹಾನಗರದ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ತುರ್ತು ಆಮ್ಲಜನಕ ಸಿಲಿಂಡರ್ ಪೂರೈಕೆ ಘಟಕ ಉದ್ಘಾಟನೆ ಸಮಾರಂಭ ಇಂದು ನೇರವೇರಿಸಲಾಯಿತು.
ಕೊರೊನಾ ಮಹಾಮಾರಿ ರೋಗದಿಂದ ಬಳಲುತ್ತಿರುವ ಹಲವು ರೋಗಿಗಳು ಉಸಿರಾಟದ ತೊಂದರೆಯಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ನಟ ಸೋನು ಸೂದ್ ನೇತೃತ್ವದ ಸೂದ್ ಚಾರಿಟಿ ಫೌಂಡೇಶನ್ ವತಿಯಿಂದ ಲೋಕಾರ್ಪಣೆ ಮಾಡಲಾಯಿತು.
ಸೂದ್ ಚಾರಿಟಿ ಫೌಂಡೇಶನ್ ಚೇರ್ಮನ್ ರೈಲ್ವೆ ಪೊಲೀಸ್ ಸಿಬ್ಬಂದಿಗೆ ಆಕ್ಸಿಜನ್ ಹೇಗೆ ಬಳಕೆ ಮಾಡಬೇಕು ಮತ್ತು ಇದರ ಸದ್ಬಳಕೆ ಹೇಗೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
O2 #hubbali
@KaRailwayPolice@deepolice12@HothurGivesBack
@bikesSwag@Ajaypratap777 @iamRJamit@SoodFoundation pic.twitter.com/HWMrJDbjZI
— sonu sood (@SonuSood) May 26, 2021
ಸೂದ್ ಚಾರಿಟಿ ಫೌಂಡೇಶನ್ ಕೊರೊನಾ ಸಂಧರ್ಭದಲ್ಲಿ ತುರ್ತು ಸೇವೆ ಆರಂಭಿಸಿರುವುದು ಅವಳಿನಗರದ ಸುತ್ತಮುತ್ತಲಿನ ಅಂದಾಜು 120ಕಿ.ಮಿ. ಅಕ್ಕ ಪಕ್ಕದ ಜಿಲ್ಲೆಗಳಿಗೂ ತಲುಪಿಸುವ ಗುರಿ ಹೊಂದಿದೆ. ಆಮ್ಲಜನಕದ ಅಭಾವ ಇದ್ದಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬಹುದೆಂದು ರೆಲ್ವೆ ಪೊಲೀಸ್ ಅಧಿಕಾರಿ ಪುಷ್ಪಲತಾ ಹೇಳಿದ್ದಾರೆ.
ರೈಲ್ವೆ ಇಲಾಖೆಯ ಪೊಲೀಸ್ ಸಿಬ್ಬಂದಿ, ಸೂದ್ ಚಾರಿಟಿ ಫೌಂಡೇಶನ್ ಚೆರ್ಮನ್ ಅಮಿತ್ ಪುರೋಹಿತ, ಅಜಯ್ ಪ್ರತಾಪ್ ಸಿಂಗ್, ಡಿಎಸ್ ಪಿ. ಎನ್ ಪುಷ್ಪಲತಾ, ಡಿ ಬಿ ಪಾಟೀಲ್, ಪಿ ಎಸೈ, ಸತ್ಯಪ್ಪ ಮುಕ್ಕಣ್ಣವರ ಉಪಸ್ಥಿತರಿದ್ದರು.