ಹುಟ್ಟುಹಬ್ಬಕ್ಕೆ ವಿಶ್ ಮಾಡೋ ನೆಪದಲ್ಲಿ ಗೆಳೆಯನನ್ನೇ ಕೊಂದಿದ್ದ ಸ್ನೇಹಿತ ಅರೆಸ್ಟ್

Public TV
1 Min Read
arrest

ತುಮಕೂರು: ನಗರದ ಕೋತಿತೋಪಿನಲ್ಲಿ ಹುಟ್ಟುಹಬ್ಬದ ದಿನದಂದೇ ಸ್ನೇಹಿತನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಕೊಲೆ – ವಿಶ್ ಮಾಡೋ ನೆಪದಲ್ಲಿ ಚಾಕುವಿನಿಂದ ಇರಿದ್ರು

ಅನುಕುಮಾರ್ ಮೃತ ಯುವಕ. ರಾಜಾ ಹಾಗೂ ಪ್ರತಾಪ್ ಬಂಧಿತ ಆರೋಪಿಗಳು. ಗುರುವಾರ ರಾತ್ರಿ ಸ್ನೇಹಿತ ಅನುಕುಮಾರ್ ಹುಟ್ಟುಹಬ್ಬದ ಪಾರ್ಟಿ ಇತ್ತು. ಎಲ್ಲಾ ಸ್ನೇಹಿತರು ಸೇರಿ ಆಚರಣೆ ಮಾಡುತ್ತಿದ್ದರು. ಈ ವೇಳೆ ಸ್ನೇಹಿತ ರಾಜಾ ವಿಶ್ ಮಾಡಲು ಬಂದು ಕೊಲೆ ಮಾಡಿ ಪರಾರಿಯಾಗಿದ್ದನು.

Capture 9

ಏನಿದು ಪ್ರಕರಣ?
ಕಳೆದ ವರ್ಷ ಮಾರಮ್ಮನ ಜಾತ್ರೆ ವೇಳೆಯಲ್ಲಿ ಆರೋಪಿ ರಾಜಾ ಮತ್ತು ಮೃತ ಅನುಕುಮಾರ್ ಜಗಳ ಮಾಡಿಕೊಂಡು ದೂರವಾಗಿದ್ದರು. ಆದರೂ ಗುರುವಾರ (ಸೆ.10) ರಂದು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವ ನೆಪದಲ್ಲಿ ಇನ್ನೊಬ್ಬ ಸ್ನೇಹಿತ ಪ್ರತಾಪನ ಜೊತೆ ರಾಜಾ ಬಂದಿದ್ದನು.

birthday cake

ಬರ್ತ್ ಡೇ ಪಾರ್ಟಿಯಲ್ಲಿ ಎಲ್ಲರೂ ಕುಡಿದ ಮತ್ತಿನಲ್ಲಿ ಇದ್ದಾಗ ಅನುಕುಮಾರ್ ಜೊತೆ ರಾಜಾ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೆ ಏರಿದಾಗ ಅನುಕುಮಾರ್ ಎದೆಗೆ ಚಾಕುವಿನಿಂದ ಇರಿದು ರಾಜಾ ಮತ್ತು ಪ್ರತಾಪ್ ಪರಾರಿಯಾಗಿದ್ದರು.

ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ARREST 2540291b 2

Share This Article
Leave a Comment

Leave a Reply

Your email address will not be published. Required fields are marked *