ವಿಜಯಪುರ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತನ ಶವವಿಂದು ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಬಸವಂತರಾಯ ಅಂಬಾಗೋಳ (55) ಮೃತರಾಗಿದ್ದಾರೆ. ಹಳ್ಳ ದಾಟಿ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ನಾಲ್ಕು ದಿನಗಳಿಂದ ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ – ಮೂವರ ವಿರುದ್ಧ ಎಫ್ಐಆರ್
ಕಳೆದ 4 ದಿನಗಳ ಹಿಂದೆ ಜಮೀನಿನಿಂದ ಮನೆಗೆ ಹಳ್ಳ ದಾಟಿ ಬರುವಾಗ ಹಳ್ಳದ್ದಲ್ಲಿ ರೈತ ಬಸವಂತರಾಯ ಅಂಬಾಗೋಳ ಕೊಚ್ಚಿ ಹೋಗಿದ್ದರು. ನಿರಂತರ 4 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಂದಗಿ ತಾಲೂಕಾಡಳಿತವಿಂದು ರೈತನ ಶವವನ್ನು ಪತ್ತೆ ಹಚ್ಚಿದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್
ಹಳ್ಳದ ಪಕ್ಕದ ಜಮೀನಿನಲ್ಲೆ ಶವ ಪತ್ತೆಯಾಗಿದ್ದು, ಶವ ಪತ್ತೆಗಾಗಿ ಡ್ರೋಣ್, ನಾಡದೋಣಿ ಬಳಸಲಾಗಿತ್ತು. ಜುಲೈ 7ರಂದು ರಾತ್ರಿ ಹಳ್ಳ ದಾಟುವಾಗವ ರೈತ ಬಸವಂತರಾಯ ಕೊಚ್ಚಿ ಹೋಗಿದ್ದ. ಸದ್ಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ – ಮಹಿಳೆಯ ವಿರುದ್ಧ ಯಜಮಾನ ದೂರು