Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸ್ವಂತ ಜಮೀನಿಲ್ಲ, ಪಾಳುಬಿದ್ದ ಭೂಮಿ ಗೇಣಿ ಪಡೆದು ಉಳುಮೆಗೆ ಹೊರಟ ಶಾಸಕಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಸ್ವಂತ ಜಮೀನಿಲ್ಲ, ಪಾಳುಬಿದ್ದ ಭೂಮಿ ಗೇಣಿ ಪಡೆದು ಉಳುಮೆಗೆ ಹೊರಟ ಶಾಸಕಿ!

Karnataka

ಸ್ವಂತ ಜಮೀನಿಲ್ಲ, ಪಾಳುಬಿದ್ದ ಭೂಮಿ ಗೇಣಿ ಪಡೆದು ಉಳುಮೆಗೆ ಹೊರಟ ಶಾಸಕಿ!

Public TV
Last updated: July 6, 2021 8:52 pm
Public TV
Share
2 Min Read
kwr mla roopali naik agri
SHARE

ಕಾರವಾರ: ಜನಪ್ರತಿನಿಧಿಗಳು ಬಹುತೇಕ ಭಾಷಣಕ್ಕೆ ಸೀಮಿತವಾಗಿರುತ್ತಾರೆ. ಆದರೆ ಇಲ್ಲೊಬ್ಬ ಶಾಸಕಿ ತಮ್ಮ ಬಳಿ ಜಮೀನು ಇಲ್ಲದಿದ್ದರೂ, ಬೇರೊಬ್ಬರ ಜಮೀನನ್ನು ಗೇಣಿಗೆ ಪಡೆದು ಗದ್ದೆಯಲ್ಲಿ ಕೃಷಿ ಮಾಡಲು ಹೊರಟಿದ್ದಾರೆ.

ಶಾಸಕರು ಎಂದರೆ ಸದಾ ಭಾಷಣ ಬಿಗಿದು, ಆಶ್ವಾಸನೆ ಕೊಟ್ಟು, ಎಸಿ ಕಾರಿನಲ್ಲಿ ಕುಳಿತು ಕ್ಷೇತ್ರ ಸುತ್ತುವುದಕ್ಕಷ್ಟೇ ಸೀಮಿತವಾಗಿರುವಾಗ ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಇದೀಗ ತಮ್ಮ ಕ್ಷೇತ್ರದಲ್ಲಿ ಹಲವು ವರ್ಷದಿಂದ ಪಾಳುಬಿದ್ದ ಕೃಷಿ ಜಮೀನಿನಲ್ಲಿ ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ. ತಮ್ಮ ಬಳಿ ಕೃಷಿ ಜಮೀನು ಇಲ್ಲದಿದ್ದಕ್ಕೆ ಕ್ಷೇತ್ರದಲ್ಲಿ ಬಿತ್ತನೆ ಮಾಡದೇ ಪಾಳು ಬಿಟ್ಟ 50 ಎಕರೆ ಕೃಷಿ ಜಮೀನನ್ನು ರೈತರಿಂದ ಗೇಣಿ ರೂಪದಲ್ಲಿ ಪಡೆದು, ಸ್ವತಃ ತಾವೇ ಕೃಷಿ ಮಾಡಲು ಹೊರಟಿದ್ದಾರೆ.

kwr roopali naik agri 2 4 medium

ಕೃಷಿ ಬಗ್ಗೆ ಇವರಿಗೆ ಆಸಕ್ತಿ ಬರಲು ಕಾರಣ ಸಹ ಇದೆ. ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಪ್ರದೇಶ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಕೃಷಿಯಲ್ಲಿ ಲಾಭ ಸಿಗದ ಕಾರಣ ಹಾಗೂ ಚಿಕ್ಕ ತುಂಡು ಜಮೀನುಗಳೇ ಕ್ಷೇತ್ರದಲ್ಲಿ ಹೆಚ್ಚಿದ್ದರಿಂದ ರೈತರು ಕೃಷಿಯಿಂದ ವಿಮುಖರಾಗಿ, ಕೂಲಿ ಕೆಲಸ ಸೇರಿದಂತೆ ಇತರೆ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಪ ಮಟ್ಟಿಗೆ ಓದಿದ ಕೃಷಿಕರು ಗೋವಾದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತಿದ್ದಾರೆ. ಇದನ್ನು ಮನಗಂಡ ಶಾಸಕಿ, ತಾವೇ ಖುದ್ದು ಕೃಷಿಗೆ ಮುಂದಾಗಿದ್ದಾರೆ.

kwr roopali naik agri 2 5 medium

ಇದಕ್ಕಾಗಿ ರೈತರ ಬಳಿ ಜಮೀನನ್ನು ಗೇಣಿಗೆ ಪಡೆದು ವೈಜ್ಞಾನಿಕ ಪದ್ಧತಿಯಂತೆ ಕೃಷಿ ಪ್ರಾರಂಭಿಸಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಉಪಕರಣವನ್ನು ಖರೀದಿಸಿದ್ದಾರೆ. ಕಳೆದ ಎರಡು ದಿನದ ಹಿಂದೆ ಅಂಕೋಲದ ವಂದಿಗೆ ಗ್ರಾಮದಲ್ಲಿ 25 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಭೂಮಿ ಉಳುಮೆ ಮಾಡಿದ್ದಾರೆ. ಇದೀಗ ಮತ್ತೆ ಕಾರವಾರದ ಅರಗಾ ಬಳಿಯ ದೋಲ್ ಗ್ರಾಮದಲ್ಲಿ 15 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಇಂದು ತಾವೇ ಟ್ರಾಕ್ಟರ್ ಚಲಾಯಿಸಿ, ಭೂಮಿ ಹದಗೊಳಿಸಿದರು.

ಮಾತ್ರವಲ್ಲದೆ ಗ್ರಾಮದಲ್ಲಿ ಕೃಷಿ ತ್ಯಜಿಸಿದ ಜನರನ್ನು ಒಟ್ಟುಗೂಡಿಸಿ, ತಮ್ಮ ಕಾರ್ಯಕ್ಕೆ ಅವರನ್ನೂ ಸಹಭಾಗಿಯನ್ನಾಗಿಸಿಕೊಂಡಿದ್ದಾರೆ. ಸದ್ಯ ಮಳೆಗಾಲ ಪ್ರಾರಂಭವಾಗಿರುವುದರಿಂದ ಮೊದಲು ಭತ್ತ ಬೆಳೆಯಲು ಶಾಸಕರು ಮುಂದಾಗಿದ್ದಾರೆ. ನಂತರ ತರಕಾರಿ ಹೀಗೆ ಒಂದು ವರ್ಷದಲ್ಲಿ ಮೂರು ಬೆಳೆ ಬೆಳೆಯುವ ಗುರಿ ಇಟ್ಟುಕೊಂಡು ಅದಕ್ಕಾಗಿ ಸಮಯ ವಿನಿಯೋಗಿಸುತ್ತಿದ್ದಾರೆ.

kwr roopali naik agri 2 3 medium

ಕಾರ್ಮಿಕರ ಕೊರತೆ ಹಿನ್ನೆಲೆ ಕೃಷಿಗಾಗಿ ತಂದ ಯಂತ್ರೋಪಕರಣವನ್ನು ಸಹ ಕೃಷಿ ಮಾಡಲು ಆಸಕ್ತರಿರುವವರಿಗೆ ಬಳಸಲು ಅವಕಾಶ ನೀಡಿದ್ದಾರೆ. ಇವರ ಕಾರ್ಯದಿಂದ ಉತ್ತೇಜನಗೊಂಡ ಹಲವು ರೈತರು, ಕೃಷಿ ಮಾಡಲು ಗೇಣಿ ರೂಪದಲ್ಲಿ ಇವರಿಗೆ ಭೂಮಿ ನೀಡಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರ ಹಸಿರಿನಿಂದ ಕಂಗೊಳಿಸಬೇಕು, ಕಾರವಾರದಲ್ಲಿ ಕಾರ್ಯವೇ ಇಲ್ಲದೇ ಮುಚ್ಚುವ ಹಂತದಲ್ಲಿರುವ ಎಪಿಎನ್ ಸಿ ಯಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯಬೇಕು ಎಂಬ ಉದ್ದೇಶ ಶಾಸಕರದ್ದಾಗಿದೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಕಬ್ಬು, ಜೋಳ ಹೀಗೆ ಕೃಷಿ ಚಟುವಟಿಕೆಯನ್ನು ವೃದ್ಧಿಸುವ ಗುರಿ ಹೊಂದಿದ್ದಾರೆ.

kwr mla roopali naik agri medium

ಸದಾ ರಾಜಕೀಯದಲ್ಲೇ ಕಾಲ ಕಳೆಯುವ ರಾಜಕಾರಣಿಗಳ ನಡುವೆ ಕೃಷಿ ಮಾಡಲು ಹೊರಟ ಕಾರವಾರದ ಶಾಸಕಿ ಪ್ರತ್ತೇಜಕವಾಗಿ ನಿಲ್ಲುತ್ತಾರೆ. ತಮ್ಮ ಕ್ಷೇತ್ರದಲ್ಲಿ ಇಳಿಮುಖವಾಗುತ್ತಿರುವ ಕೃಷಿ ಚಟುವಟಿಕೆಯನ್ನು ಚಿಗುರಿಸಲು ಪಣತೊಟ್ಟಿರುವ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

TAGGED:agricultureMLA Roopali NaikPublic TVUttara Kannadaಉತ್ತರ ಕನ್ನಡಕೃಷಿಪಬ್ಲಿಕ್ ಟಿವಿಶಾಸಕಿ ರೂಪಾಲಿ ನಾಯ್ಕ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Bandipura Vulture
Chamarajanagar

ಬಂಡೀಪುರದಲ್ಲಿ ಸಫಾರಿ ಹೋಗಿದ್ದ ಪ್ರವಾಸಿಗರಿಗೆ ರಣಹದ್ದುಗಳ ದರ್ಶನ – ಸಂತತಿ ಹೆಚ್ಚಳ

Public TV
By Public TV
42 seconds ago
JD Vance
Latest

ಇರಾನ್‌ ಮೇಲೆ ಪರಮಾಣು ದಾಳಿಯಾಗುತ್ತಾ?- ವ್ಯಾನ್ಸ್‌ ಹೇಳಿಕೆಯಿಂದ ಬಿಸಿ ಬಿಸಿ ಚರ್ಚೆ

Public TV
By Public TV
1 minute ago
Mallikarjun kharge
Latest

RSS, BJP ಕಾರ್ಯಕರ್ತರನ್ನು ಕೊಲ್ಲಲು ಮುಸ್ಲಿಮರಿಗೆ ಮಲ್ಲಿಕಾರ್ಜುನ ಖರ್ಗೆ ಕರೆ ಆರೋಪ – ಬೆಂಗ್ಳೂರಲ್ಲಿ ದೂರು ದಾಖಲು

Public TV
By Public TV
60 minutes ago
IPL match Rain
Cricket

IPL 2026 | ರಾಜಸ್ಥಾನ ರಾಯಲ್ಸ್‌ Vs ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ

Public TV
By Public TV
1 hour ago
Supreme Court 1
Latest

ಶಬರಿಮಲೆ ಕೇಸ್‌ | 7 ಪ್ರಮುಖ ಪ್ರಶ್ನೆ ಎತ್ತಿ ವಿಚಾರಣೆ ಆರಂಭಿಸಿದ ಸುಪ್ರೀಂ

Public TV
By Public TV
2 hours ago
Capsule in private part gold worth Rs 5 crores was found five arrested Bengaluru Airport
Bengaluru City

ಖಾಸಗಿ ಭಾಗದಲ್ಲಿ ಕ್ಯಾಪ್ಸುಲ್ – ತೆರೆದಾಗ ಇತ್ತು 5 ಕೋಟಿ ಮೌಲ್ಯದ ಚಿನ್ನ, ಐವರು ಅರೆಸ್ಟ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?