ಸ್ಕ್ರೂ ಡ್ರೈವರಿನಿಂದ ಆಗದೆ ರಾಡ್ ತಂದು ಗ್ರಿಲ್ ಮುರಿದ್ರು – ಮಂಡ್ಯದಲ್ಲಿ ನಿಲ್ಲದ ಹುಂಡಿ ಕಳವು

Public TV
1 Min Read
mnd 4

– ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ಯಾ ಹುಂಡಿ ಕಳ್ಳರ ಗ್ಯಾಂಗ್?

ಮಂಡ್ಯ: ಕಳೆದ ವಾರವಷ್ಟೇ ಜಿಲ್ಲೆಯಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ದೋಚಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಜಿಲ್ಲೆಯ ಮತ್ತೊಂದು ದೇಗುಲದ ಬಾಗಿಲು ಮುರಿದು ಹುಂಡಿಯನ್ನು ದೋಚಿರುವ ಪ್ರಕರಣ ನಡೆದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ – ತಲಾ 5 ಲಕ್ಷ ಪರಿಹಾರ ಘೋಷಣೆ

vlcsnap 2020 09 18 12h40m08s253

ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ರಾತ್ರಿ ದೇವಾಲಯಕ್ಕೆ ನುಗ್ಗಿರುವ 4 ರಿಂದ 5 ಮಂದಿಯ ಕಳ್ಳರ ಗ್ಯಾಂಗ್ ಹುಂಡಿ ದೋಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿ ದೇವಸ್ಥಾನಕ್ಕೆ ಬಂದಿರುವ ಕಳ್ಳರ ಗ್ಯಾಂಗ್ ಮೊದಲು ದೇವಸ್ಥಾನದ ಸುತ್ತ ವೀಕ್ಷಣೆ ಮಾಡಿದೆ. ನಂತರ ದೇವಸ್ಥಾನದ ಬಾಗಿಲನ್ನು ಸ್ಕ್ರೂ ಡ್ರೈವರ್‌ನಿಂದ ಬಿಚ್ಚಲು ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್‍ಔಟ್

vlcsnap 2020 09 18 12h41m08s90 e1600417123575

ಅದು ಸಾಧ್ಯವಾಗದ ಕಾರಣ ಅಲ್ಲಿಂದ ಹಿಂತಿರುಗಿದ್ದಾರೆ. ನಂತರ 10 ನಿಮಿಷ ಬಿಟ್ಟು ಕಬ್ಬಿಣದ ರಾಡ್‍ವೊಂದನ್ನು ತಂದು ಗ್ರಿಲ್ ಮುರಿದಿದ್ದಾರೆ. ಬಳಿಕ ನೇರವಾಗಿ ದೇವಸ್ಥಾನದ ಹುಂಡಿಯ ಬಳಿ ಹೋಗಿ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಈ ಎಲ್ಲಾ ದೃಶ್ಯಗಳು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದು ಮುಂಜಾನೆ ಎಂದಿನಂತೆ ದೇವಸ್ಥಾನದ ಮುಂದೆ ಜನರು ಸಂಚಾರ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

vlcsnap 2020 09 18 12h42m29s114 e1600417158368

ಸ್ಥಳೀಯರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ವೀಕ್ಷಣೆ ಮಾಡಿ, ದೇವಸ್ಥಾನದ ಸಿಸಿಟಿವಿ ವಿಡಿಯೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *