– ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಆಟೋದಲ್ಲಿ ಹಾಕಿದ್ದ ಹಾಡಿನ ಸೌಂಡ್ ಕಡಿಮೆ ಮಾಡು ಎಂದಿದಕ್ಕೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯ ನಾಗರಬಾವಿಯಲ್ಲಿ ನಡೆದಿದೆ.
ಹಾಡಿನ ಸೌಂಡ್ ಕಮ್ಮಿ ಮಾಡಿ ಎಂದಿದಕ್ಕೆ ಸಂತೋಷ್ಗೌಡ ಅವರಿಗೆ 40 ಜನರ ಗುಂಪೊಂದು ಹಲ್ಲೆ ಮಾಡಿದೆ. ಆಟೋದಲ್ಲಿ ಜೋರಾಗಿ ಕೇಳುವಂತೆ ತಮಿಳು ಸಾಂಗ್ ಹಾಕಿಕೊಂಡು ಆಟೋ ಚಾಲಕ ಹೋಗುತ್ತಿದ್ದ. ಇದನ್ನು ಸಂತೋಷ್ಗೌಡ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕ ಹಲ್ಲೆ ಮಾಡಿಸಿದ್ದಾನೆ.
ಆಟೋದಲ್ಲಿ ಜಾಸ್ತಿ ಸೌಂಡ್ ಕೊಟ್ಟು ಹಾಡು ಹಾಕಿದ ಕಾರಣಕ್ಕೆ ಸಂತೋಷ್ ಮತ್ತು ಆಟೋ ಚಾಲಕ ನಡುವೆ ಜಗಳವಾಗಿದೆ. ಆ ನಂತರ ಆಟೋ ಚಾಲಕ ಕರೆ ಮಾಡಿ ಹುಡುಗರನ್ನು ಕರೆಸಿಕೊಂಡಿದ್ದಾನೆ. ಈ ವೇಳೆ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿ ಹಲ್ಲೆ ಮಾಡಿದ್ದಾರೆ ಎಂದು ಸಂತೋಷ್ ಆರೋಪ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ದೂರು ದಾಖಲಿಸಿದ್ದಾರೆ.