ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

Public TV
1 Min Read
anjanayya 2

ಬೆಂಗಳೂರು: ಅನ್‍ಲಾಕ್ 3.ಓ ನಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಓಪನ್ ಮಾಡುವ ಪ್ಲಾನ್ ನಲ್ಲಿ ರಾಜ್ಯ ಸರ್ಕಾರವಿದೆ. ಇಂದು ನಡೆಯುವ ಮಹತ್ವದ ಸಭೆಯ ಬಳಿಕ ಸೋಮವಾರದಿಂದ ಅನ್‍ಲಾಕ್ ಮೂರನೇ ಹಂತ ಜಾರಿಗೆ ಬರಲಿದೆ. ಮೂರನೇ ಹಂತದ ಅನ್‍ಲಾಕ್ ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

anjanayya 3 medium

ದೇವಾಲಯಳಿಗೆ ಕೊರೊನಾ ಲಾಕ್‍ಡೌನ್‍ನಿಂದ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೂರನೇ ಹಂತದಲ್ಲಿ ದೇವಾಲಯಕ್ಕೆ ಭಕ್ತರಿಗೆ ಮುಕ್ತಗೊಳಿಸುವ ಚಿಂತನೆ ನಡೆದಿದೆ. ಈ ಹಿನ್ನೆಲೆ ಸೋಮವಾರದಿಂದ ಭಕ್ತರು ದೇವಾಲಯಕ್ಕೆ ಬರುವ ಸಾಧ್ಯತೆ ಹಚ್ಚಾಗಿದೆ. ಹಾಗಾಗಿ ದೇವಾಲಯವನ್ನು ಶುದ್ಧಗೊಳಿಸಿಕೊಳ್ಳುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ.

anjanayya 5 medium

ಬೆಂಗಳೂರಿನ ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಒಳ ಆವರಣವನ್ನು ನೀರಿನ ಮೂಲಕ ತೊಳೆದು ಸ್ಯಾನಿಟೈಸರ್ ಮಾಡುವ ಕಾರ್ಯದಲ್ಲಿ ದೇವಾಲಯದ ಸಿಬ್ಬಂದಿ ನಿರತರಾಗಿದ್ದಾರೆ.

anjanayya 4 medium

ಸರ್ಕಾರ ನೀಡುವ ಮಾರ್ಗಸೂಚಿಯ ಅನುಸಾರ ದೇವಾಲಯಕ್ಕೆ ಭಕ್ತರು ಬರಬೇಕಾಗುತ್ತದೆ. ಸರ್ಕಾರ ಸೋಮವಾರದಿಂದ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡುವ ನಿರೀಕ್ಷೆಯಿಂದ ನಾವೂ ಇಂದೇ ಶುದ್ಧತೆಯ ಕಾರ್ಯವನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆರ್ಚಕರು ಹೇಳಿದ್ದಾರೆ. ಇದನ್ನೂ ಓದಿ : ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

Share This Article
Leave a Comment

Leave a Reply

Your email address will not be published. Required fields are marked *