Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೋಂಕಿತರ ಅಂತ್ಯಕ್ರಿಯೆ ಮಾಡುತ್ತಾ ಕೊರೊನಾಗೆ ಪತಿ ಬಲಿ, ಪತ್ನಿ ಕಣ್ಣೀರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಸೋಂಕಿತರ ಅಂತ್ಯಕ್ರಿಯೆ ಮಾಡುತ್ತಾ ಕೊರೊನಾಗೆ ಪತಿ ಬಲಿ, ಪತ್ನಿ ಕಣ್ಣೀರು

Districts

ಸೋಂಕಿತರ ಅಂತ್ಯಕ್ರಿಯೆ ಮಾಡುತ್ತಾ ಕೊರೊನಾಗೆ ಪತಿ ಬಲಿ, ಪತ್ನಿ ಕಣ್ಣೀರು

Public TV
Last updated: October 30, 2020 4:43 pm
Public TV
Share
2 Min Read
smg 4
SHARE

– ಗಂಡ, 2 ಮಕ್ಕಳನ್ನು ಕಳೆದುಕೊಂಡು ಒಬ್ಬಂಟಿಯಾದ ಪತ್ನಿ

ಶಿವಮೊಗ್ಗ: ಅವರು ಕೊರೊನಾ ಸೋಂಕಿನ ಜೊತೆ ಹೋರಾಡಿ ಬದುಕು ಮುಗಿಸಿದವರ ಶವಗಳ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಹೀಗೆ ಅಂತ್ಯಕ್ರಿಯೆ ನಡೆಸುತ್ತಾ ತನಗೂ ಈ ಮಾರಕ ಕಾಯಿಲೆ ಅಂಟಿಕೊಳ್ಳುತ್ತೆ ಎಂದು ಅವರು ಎಂದಿಗೂ ಭಾವಿಸಿರಲಿಲ್ಲ. ಆದರೆ ರೋಗ ಅವರಿಗೂ ವಕ್ಕರಿಸಿಸಿತ್ತು. ಕೊನೆಗೆ ಅವರು ಸೋಂಕಿಗೆ ಒಳಗಾಗಿ ಕೊನೆಯುಸಿರೆಳೆದರು. ಇದೀಗ ಪತಿಯನ್ನು ಕಳೆದುಕೊಂಡ ಪತ್ನಿ ಜೀವನ ನಿರ್ವಹಣೆಗಾಗಿ ಪರಿತಪಿಸುತ್ತಿದ್ದಾರೆ.

ಶಿವಮೊಗ್ಗದ ಹೊಸಮನೆ ತಾಂಡಾದ ನಿವಾಸಿ ಪಾಪನಾಯ್ಕ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದರು. ಪಾಲಿಕೆ ಅವರನ್ನು ಪಾಲಿಕೆಗೆ ಸೇರಿದ ಚಿತಾಗಾರದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವ ಕರ್ತವ್ಯಕ್ಕೆ ನಿಯೋಜಿಸಿತ್ತು. ಪಾಪನಾಯ್ಕ ಸಹ ಕಳೆದ ಒಂದೂವರೆ ವರ್ಷದಿಂದ ಇದೇ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡಾಗಲು ಸಹ ನೂರಾರು ಸೋಂಕಿತರ ಶವಗಳ ಅಂತ್ಯಕ್ರಿಯೆ ನಡೆಸಿದ್ದರು.

smg 3 1

ಸೋಂಕಿತರ ಶವಗಳನ್ನು ದಹಿಸುತ್ತಲೇ ತಾನು ಸಹ ಕೊರೊನಾ ಸೋಂಕಿಗೆ ತುತ್ತಾಗಿ ಕಳೆದ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಒಂದೆಡೆ ಕೈಹಿಡಿದ ಪತಿ ಕೊರೊನಾಗೆ ಬಲಿಯಾದರೆ ಮತ್ತೊಂದೆಡೆ ಈ ಹಿಂದೆಯೇ ಅವರ ಒಂದು ಮಗು ಮೃತಪಟ್ಟಿತ್ತು. ಅಲ್ಲದೇ ಕಳೆದ ಎರಡು ತಿಂಗಳ ಹಿಂದೆ ಇನ್ನೊಂದು ಮಗು ಸಹ ಇಹಲೋಕ ತ್ಯಜಿಸಿತು. ಹೀಗಾಗಿ ಪತಿ ಹಾಗೂ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡು ಪಾಪನಾಯ್ಕನ ಪತ್ನಿ ದಿಕ್ಕು ತೋಚದಂತಹ ಪರಿಸ್ಥಿತಿ ತಲುಪಿದ್ದಾರೆ.

smg 4 1

ಮೃತ ಪಾಪನಾಯ್ಕ ಜೀವನ ನಿರ್ವಹಣೆಗೆ ತುಂಬಾ ಕಷ್ಟಪಡುತ್ತಿದ್ದರು. ಪಾಪನಾಯ್ಕ ಅವರಿಗೆ ಒಂದು ಹೆಣ್ಣು, ಒಂದು ಗಂಡು ಎರಡು ಮಕ್ಕಳಿದ್ದರು. ಎರಡು ಮಕ್ಕಳು ಸಹ ವಿಕಲಚೇತನರಾಗಿ ಜನಿಸಿದ್ದರು. ಈ ವಿಕಲಚೇತನ ಮಕ್ಕಳ ಚಿಕಿತ್ಸೆಗಾಗಿಯೇ ಪಾಪನಾಯ್ಕ ಸಾಕಷ್ಟು ಕಷ್ಟಪಡುತ್ತಿದ್ದರು. ಜೀವನ ನಿರ್ವಹಣೆಗೆ ಯಾವ ಕೆಲಸ ಆದರೂ ಸರಿ ಮಾಡುತ್ತೇನೆ ಎನ್ನುತ್ತಿದ್ದರು. ಹೀಗಾಗಿಯೇ ತಿಂಗಳಿಗೆ 14 ಸಾವಿರ ರೂಪಾಯಿ ವೇತನ ಬರುತ್ತಿದ್ದ ಅಂತ್ಯಕ್ರಿಯೆ ನೆರವೇರಿಸುವ ಕೆಲಸ ನಿರ್ವಹಿಸುತ್ತಿದ್ದರು.

CORONA

ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಪ್ರತಿ ದಿನ ಮೃತಪಡುತ್ತಿದ್ದ ಸೋಂಕಿತರ ಪೈಕಿ ಮೂರ್ನಾಲ್ಕು ಮಂದಿಯನ್ನಾದರೂ ಅನಿಲ ಚಿತಾಗಾರದಲ್ಲಿ ಸುಡಲಾಗುತ್ತಿತ್ತು. ಇದರ ಕ್ರಿಯೆಯನ್ನು ಇವರೇ ಮಾಡುತ್ತಿದ್ದರು. ಹೀಗೆ ಸೋಂಕು ಶುರುವಾದಾಗಿನಿಂದ ಪಾಪನಾಯ್ಕ ಸುಮಾರು 100ಕ್ಕೂ ಹೆಚ್ಚು ಶವಗಳ ದಹನ ಕಾರ್ಯ ಮಾಡಿದ್ದಾರೆ. ಆದರೆ ಅದೇ ಕಾರ್ಯ ಅವರ ಜೀವಕ್ಕೆ ಮುಳುವಾಯಿತು. ಪಾಪನಾಯ್ಕ ಅವರು ಕೊರೊನಾ ಸೋಂಕಿನಿಂದ ಕಣ್ಣು ಮುಚ್ಚಿದರು. ಇವರು ಸಾಯುವುದಕ್ಕಿಂತ ಒಂದು ತಿಂಗಳ ಮುಂಚೆ ಇವರ ಮಕ್ಕಳು ಕೂಡ ಮೃತಪಟ್ಟಿದ್ದಾರೆ.

ಇದೀಗ ಪತ್ನಿ ಒಂಟಿ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಕೆಲ ನಿಯಮಾವಳಿಗಳು ಇವರನ್ನು ಕೊರೊನಾ ವಾರಿಯರ್ ಎಂದು ಘೋಷಿಸುವಲ್ಲಿ ಅಡ್ಡಿಯಾಗುತ್ತಿವೆ. ಆದರೆ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಪತಿಯನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು. ಹೀಗೆ ಪರಿಗಣಿಸಿದ್ದೇ ಆದರೆ ಪಾಪನಾಯ್ಕ ಅವರ ಪತ್ನಿಗೆ ಸೂಕ್ತ ಪರಿಹಾರ ಹಾಗೂ ಸೌಲಭ್ಯಗಳು ದೊರಕುತ್ತವೆ. ಗಂಡ, ಮಕ್ಕಳಿಲ್ಲದ ಒಂಟಿ ಜೀವಕ್ಕೆ ಆಸರೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

smg 2 2

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸವಿತಾಗೆ 3 ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಮಹಾನಗರ ಪಾಲಿಕೆ ಏನೋ ನಿರ್ಣಯ ತೆಗೆದುಕೊಂಡಿದೆ. ಆದರೆ ಇದುವರೆಗೂ ಪರಿಹಾರದ ಹಣವಾಗಲಿ, ಕೆಲಸವಾಗಲಿ ದೊರೆತಿಲ್ಲ. ಸರ್ಕಾರ ಕೂಡ ಅವರನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಿ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ.

TAGGED:CoronaFuneralInfectedmetropolitanPublic TVReliefshivamoggaಅಂತ್ಯಕ್ರಿಯೆಕೊರೊನಾಪಬ್ಲಿಕ್ ಟಿವಿಪರಿಹಾರಮಹಾನಗರ ಪಾಲಿಕೆಶಿವಮೊಗ್ಗಸೋಂಕಿತರು
Share This Article
Facebook Whatsapp Whatsapp Telegram

Cinema news

Renukaswamy mother Ratnaprabha
ಪ್ರಾಸಿಕ್ಯೂಷನ್ ವಿರುದ್ಧವೇ ರೇಣುಕಾಸ್ವಾಮಿ ತಾಯಿ ಹೇಳಿಕೆ
Bengaluru City Chitradurga Court Karnataka Latest Main Post Sandalwood
mohanlal mother
ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ತಾಯಿ ನಿಧನ
Cinema Latest South cinema Top Stories
rakshitha spandana
ಬಿಗ್‌ ಬಾಸ್‌ ಮನೆಯಲ್ಲಿ ಕಿತ್ತಾಡಿಕೊಂಡ ರಕ್ಷಿತಾ-ಸ್ಪಂದನಾ; ಮಾಳು ಹೊರಹೋಗೋದಕ್ಕೆ ಕಾರಣ ಯಾರು?
Cinema Latest Top Stories TV Shows
CM Nandini
ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು
Bengaluru City Cinema Crime Latest Main Post TV Shows

You Might Also Like

New Year 1 1
Bengaluru City

ನ್ಯೂ ಇಯರ್‌ಗೆ ಒಂದೇ ದಿನ ಬಾಕಿ – ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜು

Public TV
By Public TV
10 minutes ago
Evacuation of houses built on park land in Davangere
Davanagere

ಪಾರ್ಕ್‌ ಜಾಗದಲ್ಲಿ ನಿರ್ಮಿಸಿದ್ದ 3 ಮನೆ ತೆರವು – 13 ಮನೆಗಳಿಗೆ ಎರಡು ದಿನ ಗಡುವು

Public TV
By Public TV
14 minutes ago
Black Panther
Chikkamagaluru

ಎರಡು ದಶಕಗಳ ಬಳಿಕ ಭದ್ರಾ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಪ್ಯಾಂಥರ್

Public TV
By Public TV
34 minutes ago
Saudi Arabia bombs Yemen port Mukalla City amid rift with UAE
Latest

ಯೆಮೆನ್‌ ಮೇಲೆ ಬಾಂಬ್‌ ದಾಳಿ ನಡೆಸಿ ಯುಎಇಗೆ ಸೌದಿ ಎಚ್ಚರಿಕೆ

Public TV
By Public TV
56 minutes ago
Ellyse Perry
Cricket

ಈ ಬಾರಿ ಆರ್‌ಸಿಬಿ ಪರ ಆಡಲ್ಲ ಎಲ್ಲಿಸ್ ಪೆರ‍್ರಿ

Public TV
By Public TV
1 hour ago
PAVITHRA GOWDA 2
Bengaluru City

ರೇಣುಕಾಸ್ವಾಮಿ ಕೇಸ್ – ಆರೋಪಿ ಪವಿತ್ರಾ ಗೌಡ ಸೇರಿ ಮೂವರಿಗೆ ಮನೆಯೂಟಕ್ಕೆ ಅವಕಾಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?