ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

Public TV
1 Min Read
sumalatha hd kumaraswamy

ಬೆಂಗಳೂರು: ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾದ ಮಂಡ್ಯದ ಮೈ ಶುಗರ್ ವಿಚಾರದಲ್ಲಿ ವಿವಾದ ಎದ್ದಿದೆ. ಇದನ್ನು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ ಎಂಬ ಕೂಗೆದ್ದಿದೆ.

1933ರಲ್ಲಿ ಮಂಡ್ಯದಲ್ಲಿ ಮೈ ಶುಗರ್ ಕಾರ್ಖಾನೆ ಆರಂಭಗೊಂಡಿದ್ದು ಮಂಡ್ಯ ಭಾಗದ ಜೀವನಾಡಿಯಾಗಿತ್ತು. ಮೊದಲ 50 ವರ್ಷ ಲಾಭದಾಯಕವಾಗಿದ್ದರೆ ನಂತರ ಕೆಟ್ಟ ಆಡಳಿತದಿಂದ ನಷ್ಟ. ಪುನಶ್ಚೇತನಕ್ಕಾಗಿ 2004ರಿಂದ ಈವರೆಗೆ 504 ಕೋಟಿ ಅನುದಾನ ನೀಡಲಾಗಿದೆ. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ

 

ಸರ್ಕಾರದಿಂದ ಕೋಟಿ ಕೋಟಿ ಸುರಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಸಂಪೂರ್ಣ ಬಂದ್ ಆಗಿದೆ, ಈಗ ಖಾಸಗಿಯವರಿಗೆ 40 ವರ್ಷ ಗುತ್ತಿಗೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ. 2021-22ರ ಸಾಲಿನ ಹಂಗಾಮಿನಿಂದ ಗುತ್ತಿಗೆ ನೀಡಲು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.

ಸರ್ಕಾರದ ನಿಲುವಿಗೆ ರೈತರು, ಹೋರಾಟಗಾರರ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗೀಕರಣಕ್ಕೆ ಕುಮಾರಸ್ವಾಮಿ ವಿರೋಧ, ಸಿಎಂಗೆ ಮನವಿ ಮಾಡಿದ್ದರೆ ಸರ್ಕಾರವೇ ಆಗಲಿ, ಖಾಸಗಿಯೇ ಆಗಲಿ ಒಟ್ಟಿನಲ್ಲಿ ಕಾರ್ಖಾನೆ ಆರಂಭವಾಗಬೇಕು ಎನ್ನುವುದು ಸುಮಲತಾ ಅವರ ಮನವಿ.

Share This Article
Leave a Comment

Leave a Reply

Your email address will not be published. Required fields are marked *