ಸುಪಾರಿಕೊಟ್ಟು ತಾಯಿಯ ಕೊಲೆ – ಮಗನ ಕೃತ್ಯಕ್ಕೆ ತಂದೆ ಸಾಥ್

Public TV
1 Min Read
murder 4

– ಅಪ್ಪ, ಮಗ ಸೇರಿ ಐವರು ಅರೆಸ್ಟ್

ಬೆಂಗಳೂರು: ಸುಪಾರಿಕೊಟ್ಟು ತಾಯಿಯನ್ನು ಕೊಲೆ ಮಾಡಿಸಿದ್ದ ಮಗ ಮತ್ತು ಪುತ್ರನ ಕೃತ್ಯಕ್ಕೆ ಸಹಾಯ ಮಾಡಿದ್ದ ತಂದೆಯನ್ನು ಸೇರಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೀತಾ ಕೊಲೆಯಾದ ಮಹಿಳೆ. ವರುಣ್, ನವೀನ್ ಕುಮಾರ್, ನಾಗರಾಜು, ಪ್ರದೀಪ್ ಮತ್ತು ಅಂಜನಿ ಬಂಧಿತ ಆರೋಪಿಗಳು. ಆಸ್ತಿಗಾಗಿ ಪತಿ ಅಂಜನಿ ಮತ್ತು ಮಗ ವರುಣ್ ಸೇರಿ ಗೀತಾಳನ್ನು ಕೊಲೆ ಮಾಡಲು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು.

murder a medium

ಇದೇ ತಿಂಗಳ 16 ರಂದು ಮುಂಜಾನೆ ಮನೆಗೆ ನುಗ್ಗಿ ಗೀತಾಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ ಘಟನೆ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ವರುಣ್ ತಾಯಿ ಗೀತಾಳಿಗೆ ಗೊತ್ತಿಲ್ಲದೇ ಆಸ್ತಿ ಮಾರಾಟ ಮಾಡಿಕೊಂಡಿದ್ದನು. ಅಲ್ಲದೇ ಮಾರಾಟ ಮಾಡಿದ ಆಸ್ತಿಯಲ್ಲಿ ಬಂದಂತಹ ಹಣವನ್ನು ಕೂಡ ತಾಯಿಗೆ ಕೊಡದೆ ವರುಣ್ ಬಳಸಿಕೊಂಡಿದ್ದ. ಹೀಗಾಗಿ ತಾಯಿ ಗೀತಾ ಮಗ ವರುಣ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

MONEY 1

ತಾಯಿ ನಡೆಯಿಂದ ಕೋಪಗೊಂಡಿದ್ದ ಮಗ ವರುಣ್ ತಂದೆ ಅಂಜನಿಯ ಸಹಾಯ ಪಡೆದುಕೊಂಡು ಹೆತ್ತ ತಾಯಿ ಹತ್ಯೆಗೆ ನವೀನ್ ಕುಮಾರ್, ನಾಗರಾಜು, ಪ್ರದೀಪ್ ಮೂವರಿಗೆ ಸುಪಾರಿ ಕೊಟ್ಟಿದ್ದನು. ಅದರಂತೆಯೇ ಮೂವರು ಇದೇ ತಿಂಗಳು 16 ರಂದು ಮುಂಜಾನೆ ಮನೆಗೆ ನುಗ್ಗಿ ಗೀತಾಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

Capture 3 medium

Share This Article
Leave a Comment

Leave a Reply

Your email address will not be published. Required fields are marked *