ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಅನೇಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯವನ್ನು ಜನರಿಗೆ ಮಾಡುತ್ತಿದ್ದಾರೆ. ಈ ಮಧ್ಯೆ ಸ್ಯಾಂಡಲ್ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷವಾಗಿ ಹಿರಿಯ ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಕೆಲಸವಿಲ್ಲದೇ ಜೀವನ ನಡೆಸಲು ಪರದಾಡುತ್ತಿರುವ ಸಿನಿಮಾ ಕಾರ್ಮಿಕರಿಗೆ ನೆರವು ನೀಡುತ್ತಿರುವ ಕಿಚ್ಚ ಸುದೀಪ್, ಇದೀಗ ಗಿರಿಜಾ ಲೋಕೇಶ್, ಉಮೇಶ್ ಸೇರಿದಂತೆ ಹಲವಾರು ಹಿರಿಯ ಕಲಾವಿದರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಜೊತೆಗೆ ಅನೇಕ ಹಿರಿಯ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ.
ಸುದೀಪ್ರವರು ವಿಶೇಷ ತಂಡವೊಂದನ್ನು ರಚಿಸುವ ಮೂಲಕ 100ಕ್ಕೂ ಹಿರಿಯ ಕಲಾವಿದರಿಗೆ ಅಗತ್ಯವಿರುವ ವಸ್ತುಗಳನ್ನು ತಲುಪಿಸುವುದರ ಜೊತೆಗೆ ನನ್ನ ಕುಟುಂಬದ ಹಿರಿಯರು ನೀವೆಲ್ಲ ಹೇಗಿದ್ದೀರಾ? ಪ್ರೀತಿಯಿಂದ ಕಿಚ್ಚ ಸುದೀಪ್ ಎಂದು ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದಾರೆ. ಈ ಪತ್ರವನ್ನು ನೋಡಿ ಅನೇಕ ಕಲಾವಿದರು ಭಾವುಕರಾಗಿದ್ದು, ಸುದೀಪ್ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸುದೀಪ್ರವರ ಮೊದಲು ಮಾನವನಾಗು ಎಂಬ ಟ್ರಸ್ಟ್ ಮೂಲಕ ಸೌಮ್ಯ ಎಂಬ ಮಹಿಳೆಯ ಸೋಂಕಿತ ಪತಿಯ ಚಿಕಿತ್ಸೆ ವೆಚ್ಚವನ್ನು ಭರಿಸುವ ಮೂಲಕ ನೆರವು ನೀಡಿದ್ದರು.
ಸದಾ ನಿಮ್ಮೊಂದಿಗೆ ನಾನು ಇರುವೆ ಎಂದು
ತನ್ನ ಕುಟುಂಬದ ಕಷ್ಟಕ್ಕೆ ಸ್ಪಂದಿಸುವ ಮಹಾಸೇವಕ ಬಾದ್ ಷ “ಕಿಚ್ಚ ಸುದೀಪ” ಸರ್#ಮೊದಲು_ಮಾನವನಾಗು@KicchaSudeep @iampriya06 @Kitty_R7 https://t.co/wQFSxoflMG
— ಮೊದಲು ಮಾನವನಾಗು (KSCS) (@KSCS__Official) May 19, 2021