Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿನಿಮಾ ತಂತ್ರಜ್ಞರು, ಕಾರ್ಮಿಕರ ಪಾಲಿಗೆ ಆಪತ್ಬಾಂಧವನಾದ ನಟಭಯಂಕರ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸಿನಿಮಾ ತಂತ್ರಜ್ಞರು, ಕಾರ್ಮಿಕರ ಪಾಲಿಗೆ ಆಪತ್ಬಾಂಧವನಾದ ನಟಭಯಂಕರ!

Cinema

ಸಿನಿಮಾ ತಂತ್ರಜ್ಞರು, ಕಾರ್ಮಿಕರ ಪಾಲಿಗೆ ಆಪತ್ಬಾಂಧವನಾದ ನಟಭಯಂಕರ!

Public TV
Last updated: June 16, 2020 5:54 pm
Public TV
Share
2 Min Read
PRATHAM
SHARE

– ಕೊರೊನಾ ಕಾಲದ ಕಷ್ಟಕ್ಕೆ ಮಿಡಿದರು ಪ್ರಥಮ್

ಯಾವುದೇ ಸಂಕಷ್ಟಗಳೆದುರಾದರೂ ತಕ್ಷಣಕ್ಕೆ ಸಹಾಯಕ್ಕೆ ಮುಂದಾಗುವ ಮನಸ್ಥಿತಿಯ ಒಂದಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ. ಈ ತಲೆಮಾರಿನಲ್ಲಿ ಆ ಹಾದಿಯಲ್ಲಿ ಅಗ್ರಸ್ಥಾನ ಗಳಿಸಿಕೊಳ್ಳುವಂತಹ ವ್ಯಕ್ತಿತ್ವ ಹೊಂದಿರುವವರು ಪ್ರಥಮ್. ಕೊರೊನಾ ಮಹಾಮಾರಿಯಿಂದಾದ ಅನಾಹುತಗಳ ಸಂದರ್ಭದಲ್ಲಿಯೂ ಪ್ರಥಮ್ ಅಂತದ್ದೇ ಮನಸ್ಥಿತಿಯಿಂದ ಮತ್ತಷ್ಟು ಜನರ ಮನ ಗೆದ್ದಿದ್ದರು. ಇದೀಗ ಕೊಂಚ ಮುಂದೂಡಲ್ಪಟ್ಟರೂ ನಟಭಯಂಕರ ಚಿತ್ರದ ತಂತ್ರಜ್ಞರಿಗೆ, ಕಾರ್ಮಿಕರಿಗೆ ಅವರು ಆಹಾರ ಕಿಟ್ ಮತ್ತು ತಲಾ ಮೂರು ಸಾವಿರ ರೂಪಾಯಿಗಳನ್ನು ಕೊಡುವ ಮೂಲಕ ನೆರವಾಗಿದ್ದಾರೆ.

nata bhayankara Image

ಕೊರೊನಾ ಮಾರಿ ವಕ್ಕರಿಸದೇ ಹೋಗಿದ್ದರೆ ಈ ಹೊತ್ತಿಗೆಲ್ಲ ನಟಭಯಂಕರ ಚಿತ್ರ ನಿರ್ಣಾಯಕ ಹಂತ ತಲುಪುತ್ತಿತ್ತು. ಅಷ್ಟಕ್ಕೂ ಇದು ಓರ್ವ ನಿರ್ದೇಶಕನಾಗಿ, ನಟನಾಗಿ ಪ್ರಥಮ್ ಪಾಲಿಗೆ ಮಹತ್ವದ ಚಿತ್ರ. ಇದನ್ನು ತಮ್ಮದೇ ಕೂಸೆಂಬಂತೆ ಜತನದಿಂದ ಪೊರೆಯುತ್ತಾ ಬಂದಿದ್ದ ಇಡೀ ಸಿನಿಮಾ ತಂಡ ಕೊರೊನಾ ಸಂಕಷ್ಟಕ್ಕೀಡಾಗಿದೆ. ಲಾಕ್‍ಡೌನ್‍ನಿಂದ ಸಿನಿಮಾ ತಂಡದ ಬಹುತೇಕರು ಕಂಗೆಟ್ಟಿದ್ದಾರೆ. ಇದನ್ನು ಮನಗಂಡಿದ್ದ ಪ್ರಥಮ್ ಈಗಾಗಲೇ ಎರಡು ಸಾವಿರದಷ್ಟು ಸಿನಿಮಾ ವಲಯದ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದ್ದರು.

PRATHAM 1

ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸದಾ ಶ್ರಮಿಸಿದ್ದ ನಟಭಯಂಕರ ಚಿತ್ರತಂಡದ ಮೇಲಂತೂ ಪ್ರಥಮ್‍ಗೆ ಅಗಾಧವಾದ ಕಕ್ಕುಲಾತಿಯಿತ್ತು. ಆದ್ದರಿಂದಲೇ ಹಂತ ಹಂತವಾಗಿ ನೆರವು ನೀಡುತ್ತಾ ಬಂದು ಮೂರನೇ ಬಾರಿ ಸಹಾಯಹಸ್ತ ಚಾಚಲು ಸಂಪೂರ್ಣವಾಗಿ ತಯಾರಾಗಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇದೇ ಜೂನ್ 7ರ ಸಂಜೆ 6 ಗಂಟೆಗೆ ನಟಭಯಂಕರ ಚಿತ್ರತಂಡದ ಎಲ್ಲ ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಆಹಾರ ಕಿಟ್ ಮತ್ತು ಮೂರು ಸಾವಿರ ರೂ. ವಿತರಿಸಲಾಗುತ್ತಿತ್ತು. ಆದರೆ ಆ ದಿನ ಸಂಜೆಯ ವೇಳೆಗೆ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದರು. ಇದರಿಂದ ಇಡೀ ಚಿತ್ರರಂಗವೇ ಆಘಾತಗೊಂಡಿದ್ದರಿಂದ, ವೈಯಕ್ತಿಕವಾಗಿ ಪ್ರಥಮ್ ಕೂಡ ಡಿಸ್ಟರ್ಬ್ ಆಗಿದ್ದರು. ಪರಿಣಾಮ ಆ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.

Nata Bhayankara a

ಅದನ್ನವರು ಕಡೆಗೂ ಇಂದು ಪೂರೈಸಿದ್ದಾರೆ. ಇನ್ನೂ ಒಂದಷ್ಟು ದಿನ ಮುಂದೆ ತಳ್ಳಿದರೆ ತಮ್ಮ ಸಿನಿಮಾ ತಂಡ ಮತ್ತಷ್ಟು ಕಷ್ಟ ಅನುಭವಿಸುತ್ತದೆ ಎಂದರಿತ ಅವರು ಇಂದು ಆಹಾರ ಕಿಟ್ ಮತ್ತು ತಲಾ 3 ಸಾವಿರ ರೂ. ವಿತರಿಸಿದ್ದಾರೆ. ನಟಭಯಂಕರ ಚಿತ್ರತಂಡದ ತಂತ್ರಜ್ಞರು ಮತ್ತು ಕಾರ್ಮಿಕರು ಇದನ್ನು ಪಡೆದುಕೊಂಡು ಖುಷಿಯಾಗಿದ್ದಾರೆ. ತಮ್ಮ ಕಷ್ಟ ಪರಿಹರಿಸಿದ ಪ್ರಥಮ್‍ರನ್ನು ಹರಸಿ ಹಾರೈಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಲಾಗದವರ ಅಕೌಂಟಿಗೆ ಮೂರು ಸಾವಿರ ಸಂದಾಯ ಮಾಡಿ ಆಹಾರ ಕಿಟ್ ತಲುಪಿಸಲು ಪ್ರಥಮ್ ಯೋಜಿಸಿದ್ದಾರಂತೆ.

WhatsApp Image 2020 06 16 at 3.02.18 PM1

ಪ್ರಥಮ್ ಕೈಗೊಂಡಿರುವ ಈ ಸಾರ್ಥಕ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಇದು ಯಾರೇ ಆದರೂ ಮೆಚ್ಚಿಕೊಳ್ಳುವ, ಅನುಕರಿಸುವಂತಹ ವಿಚಾರ. ಎಂತಹ ಕಷ್ಟಕಾಲದಲ್ಲಿಯೂ ತಮ್ಮ ತಂಡವನ್ನು ಕೈ ಬಿಡದೆ ಪೊರೆದ ಪ್ರಥಮ್ ಈ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಿಗ್‍ಬಾಸ್ ಶೋ ಗೆದ್ದ ಕಾಲದಿಂದಲೂ ಸಾಮಾಜಿಕ ಕಳಕಳಿಯಿಂದ ಮುನ್ನಡೆಯುತ್ತಾ ಬಂದಿರುವ ಪ್ರಥಮ್ ಕೂಡ ಈ ಸಹಾಯ ಮಾಡಿದ ತೃಪ್ತಭಾವ ಹೊಂದಿದ್ದಾರೆ. ಅದರ ಜೊತೆಜೊತೆಗೇ ನಟಭಯಂಕರ ಚಿತ್ರದ ಉಳಿದ ಕೆಲಸ ಕಾರ್ಯಗಳಿಗಾಗಿ ತಯಾರಾಗಲಾರಂಭಿಸಿದ್ದಾರೆ.

Nata Bhayankara b 1

TAGGED:Corona VirusLockdownPrathamPublic TVsandalwoodಕೊರೊನಾ ವೈರಸ್ನಟಭಯಂಕರಪಬ್ಲಿಕ್ ಟಿವಿಪ್ರಥಮ್ಲಾಕ್ ಡೌನ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Sudeep
ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌
Cinema Karnataka Latest Main Post National Sandalwood South cinema
Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories

You Might Also Like

MGNREGA VB G RAM G
Latest

ಮನರೇಗಾ ರದ್ದು ಮೂಲಕ SC/ST, ಹಿಂದುಳಿದ ಭೂಹೀನರ ಅನ್ನ ಕಸಿಯುವ ಕುತಂತ್ರ – ಎಐಸಿಸಿ ಪರಿಶಿಷ್ಟ ಜಾತಿ ಘಟಕ ಆಕ್ರೋಶ

Public TV
By Public TV
3 hours ago
Bengaluru PG fined Rs 50000 for not maintaining cleanliness
Bengaluru City

ಸ್ವಚ್ಛತೆ ಕಾಪಾಡದ್ದಕ್ಕೆ ಬೆಂಗಳೂರು ಪಿಜಿಗೆ ಬಿತ್ತು 50 ಸಾವಿರ ದಂಡ

Public TV
By Public TV
3 hours ago
Pakistan Army Asim Munir
Latest

ಆಪರೇಷನ್‌ ಸಿಂಧೂರ ವೇಳೆ ದೇವರ ದಯೆಯಿಂದ ಬದುಕುಳಿದಿದ್ದೇವೆ: ಮುನೀರ್‌

Public TV
By Public TV
4 hours ago
Mandya Youth Drowned In Cauvery River
Districts

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

Public TV
By Public TV
4 hours ago
ಡಿಕೆ ಆದಿಕೇಶವುಲು ಪುತ್ರಿ ಕಲ್ಪಜಾ, ಪುತ್ರ ಶ್ರೀನಿವಾಸ್‌
Bengaluru City

ಉದ್ಯಮಿ ರಘುನಾಥ್‌ ಹತ್ಯೆ ಕೇಸ್‌ – ಸಿಬಿಐನಿಂದ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು ಅರೆಸ್ಟ್‌

Public TV
By Public TV
4 hours ago
DK Shivakumar 9
Bengaluru City

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ: ಡಿಕೆಶಿ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?