– ಡಿಕೆಶಿ ವಿರುದ್ಧ ಯುವತಿ ಸಹೋದರ ಆರೋಪ
– ಮನೆಗೆ ಬರುವಂತೆ ಕಣ್ಣೀರಿಟ್ಟ ತಂದೆ
ವಿಜಯಪುರ: ಸಿಡಿ ಪ್ರಕರಣದ ಸಂತ್ರಸ್ತೆಯ ಕುಟುಂಬ ಇಂದು ಬೆಳಗಾವಿಯಿಂದ ವಿಜಯಪುರದ ನಿಡಗುಂದಿಯ ಅಜ್ಜಿ ಮನೆಗೆ ಶಿಫ್ಟ್ ಆಗಿದೆ. ಅಜ್ಜಿಗೆ ಹುಷಾರಿಲ್ಲದ ಕಾರಣ ಇಲ್ಲಿಗೆ ಬಂದಿದ್ದೇವೆ. ಅಜ್ಜಿ ಹುಷಾರ್ ಆದ ನಂತರ ಮರಳಿ ಬೆಳಗಾವಿಗೆ ತೆರಳುತ್ತೆವೆ ಎಂದು ಸಂತ್ರಸ್ತೆಯ ಸಹೋದರ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದರು.
ನಾವು ಸುಭದ್ರವಾಗಿದ್ದೇವೆ. ನಮಗೆ ಪೊಲೀಸ್ ಭದ್ರತೆ ನೀಡಿದ್ದಾರೆ. ಡಿಕೆಶಿ ನಮ್ಮ ಸಹೋದರಿಯನ್ನ ಹಿಡಿದಿಟ್ಟು ಕೊಂಡಿದ್ದಾರೆ. ಕುಟುಂಬಕ್ಕು ಭೇಟಿ ಆಗಲು ನೀಡುತ್ತಿಲ್ಲ. ಅವಳು ತುಂಬಾ ಭಯದಲ್ಲಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆಲ್ಲ ಡಿಕೆಶಿನೇ ಕಾರಣ ಅಂತಾ ಮತ್ತೆ ದೂರಿದರು. ಅಲ್ಲದೆ ಉಳಿದ ಆಡಿಯೋ ದಾಖಲಾತಿಗಳನ್ನ ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದರು.
ಇದೇ ವೇಳೆ ಸಂತ್ರಸ್ತೆ ತಂದೆ ಮಾತನಾಡಿ, ತಪ್ಪೋ-ಒಪ್ಪೋ ಆಗ್ಹೋಗಿದೆ. ನಾನು ತಂದೆ ಆಗಿ ವಿನಂತಿಸುತ್ತೇನೆ. ಬಾ ಅಮ್ಮ ಬೇಗ ಬಾ ಮನೆಗೆ ಎಂದು ಕಣ್ಣಿರಿಟ್ಟು ಪಬ್ಲಿಕ್ ಟಿವಿ ಮುಖಾಂತರ ಸಂತ್ರಸ್ತೆಗೆ ಮನೆಗೆ ಕರೆದರು. ಅಲ್ಲದೆ ನನ್ನ ಮಗಳ ರಕ್ಷಣೆ ಮಾಡೋದೋ ನ್ಯಾಯಕೊಡಿಸೋ ತಾಕತ್ತು ನನಗಿದೆ. ಮಗಳೆ ನೀನು ಮನೆಗೆ ಬಾ ಎಂದರು.
ನಮ್ಮ ಅತ್ತೆಗೆ ಹುಷಾರಿಲ್ಲದ ಕಾರಣ ಬೆಳಗಾವಿಯಿಂದ ನಿಡಗುಂದಿಗೆ ಬಂದಿದ್ದೇವೆ. ಸದ್ಯಕ್ಕೆ ಬೆಂಗಳೂರಿಗೆ ಹೋಗುತ್ತಿಲ್ಲ. ಎಸ್ ಐಟಿ ಅಧಿಕಾರಿಗಳು ಕರೆದರೆ ಬೆಂಗಳೂರಿಗೆ ಹೋಗುತ್ತೇವೆ ಎಂದರು.