ಸಿಎಂ ವಿರುದ್ಧ ಗುಡುಗು- ಮಾರ್ಚ್ 25ರ ಸಭೆಯ ರಹಸ್ಯ ಬಿಚ್ಚಿಟ್ಟ ಯತ್ನಾಳ್

Public TV
4 Min Read
Basanagowda Patil Yatnal 2

– ಬಿಜೆಪಿಯ 40 ಶಾಸಕರಿಗೆ ಮಾತ್ರ ಅನುದಾನ
– ಶಾಸಕರಲ್ಲಿ ಸಿಎಂ ಬಗ್ಗೆ ಅಸಮಾಧಾನ

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ಹೊರ ಹಾಕಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾರ್ಚ್ 25ರ ಸಭೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.

25-03-2021 ರಂದು ನಡೆದ ಸುಮಾರು 25 ಮಾನ್ಯ ಶಾಸಕರ ಹಾಗೂ ಸಚಿವರ ಸಭೆ ಮಾನ್ಯ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆಯಿತು. ಇದರ ಉದ್ದೇಶ ಮಾನ್ಯ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗದೆ ಇರುವುದು, ಸಮಾನವಾಗಿ ಹಂಚಿಕೆ ಮಾನ್ಯ ಯಡಿಯೂರಪ್ಪನವರು ಮಾಡದೆ ಇರುವುದು ಮತ್ತು ಸಚಿವರು ಮಾನ್ಯ ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು, ಅದರ ಜೊತೆಗೆ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಶ್ರೀ ಈಶ್ವರಪ್ಪನವರ ಗಮನಕ್ಕೆ ತರದೆ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ನೇರವಾಗಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸುಮಾರು 1000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

Basanagowda Patil Yatnal

ಅದರಲ್ಲೂ ಭಾರತೀಯ ಜನತಾ ಪಕ್ಷದ ಎಲ್ಲಾ ಗ್ರಾಮೀಣ ಪ್ರದೇಶದ ಶಾಸಕರಿಗೆ ಸರಿ ಸಮಾನವಾಗಿ ಅಭಿವೃದ್ಧಿ ಹಣವನ್ನು ನೀಡದೆ ಇರುವ ಬಗ್ಗೆ ಮಾನ್ಯ ಯಡಿಯೂರಪ್ಪನವರ ಬಗ್ಗೆ ಶಾಸಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.

ಮೇಲಿನ ಕಾರಣಕ್ಕೆ ಸಭೆ ನಡೆದಿದ್ದು ನನ್ನ ಬಗ್ಗೆ ಸುಮಾರು 65 ಶಾಸಕರು ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹಿ ಸಂಗ್ರಹ ಅಭಿಯಾನ ಮಾಡಿದ್ದಾರೆ ಎಂಬುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ನಾನು ಭಾಗವಹಿಸಿದ ಅನೇಕ ಮಾನ್ಯ ಶಾಸಕರುಗಳಿಗೆ ವಿಚಾರಿಸಿದಾಗ ಒಬ್ಬರೂ ಸಹ ಸಹಿ ಮಾಡಿಲ್ಲ ಎಂದು ತಿಳಿಸಿದರು. ಒಂದು ವೇಳೆ ಅಭಿವೃದ್ಧಿ ಹಣ ಬಿಡುಗಡೆ ಮತ್ತು ಶಾಸಕರ ಕ್ಷೇತ್ರಗಳಿಗೆ ಅನುದಾನ ಪತ್ರದಲ್ಲಿ ನನ್ನ ಬಗ್ಗೆ ಉಲ್ಲೇಖ ಮಾಡಿದ್ದರೆ ಅದು ಮಾನ್ಯ ಶಾಸಕರ ಗಮನಕ್ಕೆ ತರದೆ ತಿರುಚಿದ್ದರೆ ಅದು ಮೋಸ ಮಾಡಿದಂತೆ.

Basanagowda Patil Yatnal

ಮಾನ್ಯ ಯಡಿಯೂರಪ್ಪನವರು ತಮ್ಮ ಹತ್ತಿರದ ಸಂಬಂಧಿ ಮರಿಸ್ವಾಮಿ ಅಧ್ಯಕ್ಷ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅವರಿಗೆ 82 ಕೋಟಿ ಹಣವನ್ನು ನೇರವಾಗಿ ಬಿಡುಗಡೆ ಮಾಡಿದ್ದು ಅಲ್ಲದೆ ತುಂಡು ಗುತ್ತಿಗೆ ನೀಡಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಆದರೆ ಮಾನ್ಯ ಶಾಸಕರಿಗೆ ಸಮಾನವಾಗಿ ಅನುದಾನ ನೀಡಿಲ್ಲ ಉದಾಹರಣೆಗೆ ಒಬ್ಬ ಬಿಜೆಪಿ ಶಾಸಕರಿಗೆ ಒಂದು ಕೋಟಿ ಇನ್ನೊಬ್ಬ ಬಿಜೆಪಿ ಶಾಸಕರಿಗೆ 25 ಕೋಟಿ. 120 ಶಾಸಕರ ಬಿಜೆಪಿ ಶಾಸಕರಲ್ಲಿ ಕೇವಲ 40 ಶಾಸಕರಿಗೆ ಮಾತ್ರ ಅನುದಾನ ನೀಡಲಾಗಿದೆ.

BSY 1 3 medium

ಕೆಲವು ಸುದ್ದಿಮಾಧ್ಯಮಗಳಲ್ಲಿ “ಯತ್ನಾಳ ವಿರುದ್ಧ ಶಾಸಕರ ಅಕ್ರೋಶ” ಎಂದು ಕಪೋಲ ಕಲ್ಪಿತ ಸುದ್ದಿ ಮಾಡಿಸಿದ ಯುವರಾಜ್ ಮತ್ತು ಕಂಪನಿ ತಮ್ಮ ವ್ಯಾಪಕ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಪಕ್ಷ ಹಾಗೂ ಶಾಸಕರು ಸಂಪೂರ್ಣ ಬೇಸತ್ತು ಹೋಗಿದ್ದಾರೆ ಅಲ್ಲದೆ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಹೊಗಳು ಭಟ್ಟರು ದಲ್ಲಾಳಿಗಳು ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಮಾನ್ಯ ಯಡಿಯೂರಪ್ಪನವರು ಇತ್ತೀಚಿನ ದಿನಗಳಲ್ಲಿ ತಮ್ಮ ಕುಹಕತನ ಮತ್ತು ಯುವರಾಜನ ಅಧಿಕಾರ ಹಣದಾಹಕ್ಕಾಗಿ ತಮ್ಮ ಅತ್ಯಂತ ಆತ್ಮೀಯ ಕು. ಶೋಭಾ. ಕರಂದ್ಲಾಜೆ, ಶ್ರೀ ರಮೇಶ್. ಜಾರಕಿಹೊಳಿ ಶ್ರೀ ಈಶ್ವರಪ್ಪನವರು. ಪ್ರಾಮಾಣಿಕ ಪತ್ರಕರ್ತರುಗಳಾದ ಎಂ.ಬಿ.ಮರಮ್ಕಲ್ ಹಾಗೂ ಮಹಾದೇವ ಪ್ರಕಾಶ್ ಮತ್ತು ಅನೇಕ ಪ್ರಾಮಾಣಿಕ ದಕ್ಷ ಅಧಿಕಾರಿಗಳು ಬಲಿಪಶುಗಳಾಗಿದ್ದು ಅವರ ಅಧಿಕಾರ ದಾಹ ಕುಟುಂಬದ ಹಣದದಾಹ ಅತ್ಯಂತ ಅಸಹ್ಯ. ಸಾರ್ವಜನಿಕ ಸಭೆಗಳಲ್ಲಿ ಮತ್ತು ಗ್ರಹ ಕಚೇರಿಗಳಿಗೆ ಬರುವ ಮಹಿಳೆಯರ ಜೊತೆ ಅವರ ವರ್ತನೆ ಅವರ ವ್ಯಕ್ತಿತ್ವಕ್ಕೆ ಮತ್ತು ವಯಸ್ಸಿಗೆ ಅತ್ಯಂತ ಅವಮಾನ.

BSY Budget 2

ಕಳೆದ ವರ್ಷದ ಅವಧಿಯಲ್ಲಿ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಶಾಸಕರ ಭಾವನೆ ಮತ್ತು ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇಲ್ಲದೆ ಇರುವುದು ಶಾಸಕರಲ್ಲಿ ತೀವ್ರ ಅಸಮಾಧಾನ ಇದೆ. ಶಾಸಕಾಂಗ ಸಭೆ ಕರೆದರೆ ಭಿನ್ನಮತ ಸ್ಪೊಟ ಆಗುವ ಭಯದಿಂದ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಈ ಅಧೀವೇಶನ ಮುಕ್ತಾಯ ಗೊಳಿಸಿದ್ದು ದುರದೃಷ್ಟಕರ.

YATNAL BSY 1

ಆಶ್ಚರ್ಯಕರ ಏನೆಂದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕಾಂಗ ಸಭೆ ಕರೆಯಲು ಒಬ್ಬ ಶಾಸಕರು ನನ್ನನ್ನು ಏಕವಚನದಲ್ಲಿ ನಿಂದಿಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ಆದರೆ ಆ ಸಭೆ ಕರೆಯುವ ಧೈರ್ಯ ಮಾನ್ಯ ಶ್ರೀ ಯಡಿಯೂರಪ್ಪನವರು ಮಾಡಲಿಲ್ಲ ಏಕೆ ಎಂದು ನನ್ನ ಪ್ರಶ್ನೆ? ತಮ್ಮ ಶಕ್ತಿ ಪ್ರದರ್ಶನ ಮಾಡಲಿಕ್ಕೆ ಕೇಂದ್ರಿಯ ಪಕ್ಷ ಅಂಜಿಸಲಿಕ್ಕೆ ತಮ್ಮ ಜೊತೆ 65 ಶಾಸಕರ ಇದ್ದಾರೆ ಎಂದು ತೋರಿಸಲು ಈ ಸಭೆ ಹೊರತು ಶಾಸಕರ ಸಮಸ್ಯೆಗಳನ್ನು ಪರಿಹರಿಸಲು ಕರೆದ ಸಭೆ ಅಲ್ಲ. ಇಂತಹ ಎಷ್ಟೋ ಸಭೆಗಳು ಕರೆದಿದ್ದಾರೆ ಅದರ ಫಲಶ್ರುತಿ ಶೂನ್ಯ.

cm bsy yatnal 1

ನಮ್ಮ ಪಕ್ಷದ ಮೂಲ ಸಿದ್ಧಾಂತ ರಾಷ್ಟ್ರೀಯತೆ, ಹಿಂದೂತ್ವ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡಿರುವ ಪಕ್ಷ ನಮ್ಮ ರಾಷ್ಟೀಯ ಉನ್ನತ ನಾಯಕರಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಲಾಲ್ ಕೃಷ್ಣ ಅಡ್ವಾಣಿ ಮತ್ತು ನಮ್ಮ ಹೆಮ್ಮೆಯ ವಿಶ್ವ ನಾಯಕರಾದ ಕಳಂಕ ರಹಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ನಮ್ಮ ಆದರ್ಶ ಇವರೆಲ್ಲ ಭ್ರಷ್ಟಾಚಾರ. ಕುಟುಂಬ ರಾಜಕಾರಣ ಮಾಡಲೇ ಇಲ್ಲ. ಅವರೆಲ್ಲರ ಕನಸುಗಳಿಗೆ ಕಳಂಕ ತರುವ ಕೆಲಸ ಯಡಿಯೂರಪ್ಪನವರು ಮತ್ತು ಅವರ ಕುಟುಂಬ ಮಾಡುತ್ತಿದೆ.

BSY Budget 3 copy

ಇಂದು ವಿಶ್ವದ ನಮ್ಮ ಹೆಮ್ಮೆಯ ನಾಯಕ ಹಾಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು ಆದರ್ಶ ನನಗೆ ಸಂಪೂರ್ಣ ವಿಶ್ವಾಸವಿದೆ ನಾನು ಎತ್ತಿದ ಪ್ರಶ್ನೆಗಳಿಗೆ ನ್ಯಾಯ ಸಿಕ್ಕೆ ಸಿಗುತ್ತದೆ. ನಾನು ತೆಗೆದುಕೊಂಡ ಹೋರಾಟ ಯಶಸ್ವಿಯಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *