-ಯುವಕನ ಎದೆಗೆ ಇರಿದು ಬರ್ಬರ ಕೊಲೆ
ಹಾಸನ: ಯುವಕನ ಎದೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಘಟನೆ ಹಾಸನದ ಚನ್ನರಾಯಪಟ್ಟಣದ ಗದ್ದೆಹಳ್ಳದ ಬಳಿ ನಡೆದಿದೆ.
30 ವರ್ಷದ ಸಂಪತ್ ಕೊಲೆಯಾದ ದುರ್ದೈವಿ. ಬೆಂಗಳೂರು ಹಾಸನ ಹೆದ್ದಾರಿ ಪಕ್ಕದಲ್ಲೇ ಕೊಲೆ ನಡೆದಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹರೀಶ್ ಮತ್ತು ಸಂಪತ್ ನಡುವೆ ಕ್ಷುಲ್ಲಕ ಕಾರಣಕ್ಕ ಜಗಳ ನಡೆದಿದೆ. ಸಂಪತ್ನ ಎದೆಗೆ ಹರಿತವಾದ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಿ ಹರೀಶ್ ಪರಾರಿಯಾಗಿದ್ದಾನೆ. ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಿನ್ನೆಯಷ್ಟೆ ಹಣದ ವಿಷಯವಾಗಿ ಗಲಾಟೆಯಾಗಿ 25 ವರ್ಷದ ಯುವಕನ ಕೊಲೆ ನಡೆದಿತ್ತು.
ಇಂದು ಮತ್ತೊಂದು ಕೊಲೆ ನಡೆದಿದ್ದು ವರಮಹಾಲಕ್ಷ್ಮಿ ಹಬ್ಬದ ಖುಷಿಯಲ್ಲಿದ್ದ ಚನ್ನರಾಯಪಟ್ಟಣ ಜನತೆಯನ್ನು ಬೆಚ್ಚಿ ಬೀಳಿಸಿದೆ. ಕೊಲೆ ಮಾಡುತ್ತಿರುವವರು, ಕೊಲೆಯಾಗುತ್ತಿರುವವರು 30 ವರ್ಷದ ಒಳಗಿನ ಯುವಕರಾಗಿರುವುದು ಕೂಡ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೊಲೆಯ ಪ್ರಕರಣಗಳು ಮುಂದೆ ಮತ್ತಷ್ಟು ಅವಾಂತರಕ್ಕೆ ಕಾರಣವಾಗುವ ಸಂಶಯ ಮೂಡುತ್ತಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಮುಂದೆ ಇಂತಹ ಪ್ರಕರಣ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಗಳ ಬಿಡಿಸಲು ಬಂದ ಸ್ನೇಹಿತನೇ ಕೊಲೆಯಾದ