ಸಂಬಳ ಪರಿಷ್ಕರಣೆ ಮಾಡಿದ್ರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ: ಸವದಿ

Public TV
1 Min Read
Laxman Savadi 4

ಬೀದರ್: ಸಾರಿಗೆ ನೌಕರರ ಒಂದು ಬೇಡಿಕೆ ಮಾತ್ರ ಬಾಕಿ ಇದೆ. ಅದು ಸಂಬಳ ಪರಿಷ್ಕರಣೆ. ಇದನ್ನ ಈಡೇರಿಸಿದರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಬೀದರ್‍ನ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ಮೇಲೆ ನಮ್ಮ ಸಾರಿಗೆ ಇಲಾಖೆಗೆ 3 ಸಾವಿರದ ಇನ್ನೂರು ಕೋಟಿ ನಷ್ಟವಾಗಿದೆ. ಈಗ ಬರುವ ಆದಾಯದಲ್ಲಿ ಸಂಬಳಕ್ಕೆ ಮತ್ತು ಇಂಧನಕ್ಕೂ ಕೊರತೆಯಾಗುತ್ತಿದೆ. ಈ ಹಣದ ಕೊರತೆ ನೀಗಿಸಲು ಸರ್ಕಾರದಿಂದ 1962 ಕೋಟಿ ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ ಎಂದರು.

BDR 3

ಬೇರೆ ಬೇರೆ ರಾಜ್ಯದಲ್ಲಿ ಇಲಾಖೆಯ ನೌಕರರಿಗೆ ಕೊರೊನಾ ನೆಪವೊಡ್ಡಿ ಶೇ.20 ರಿಂದ 30 ರಷ್ಟು ಸಂಬಳ ಕಟ್ ಮಾಡಿದ್ದಾರೆ. ಆದರೆ ನಾವು ಮಾಡಿಲ್ಲ. ಸಾರಿಗೆ ನೌಕರರು 9 ಬೇಡಿಕೆ ಇಟ್ಟಿದ್ದರು. ಅದರಲ್ಲೀಗ 8 ಬೇಡಿಕೆ ಈಡೇರಿಸಿದ್ದೇವೆ. ಒಂದು ಬೇಡಿಕೆ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.

BDR 2

ಬಸ್ ಮುಷ್ಕರ ಮಾಡೋದ್ರಿಂದ ಎಲ್ಲರಿಗೂ ತೊಂದರೆಯಾಗುತ್ತೆ. ಹಾಗಾಗಿ ಹಠಮಾರಿತನದಿಂದ ಹೊರಗೆ ಬರಬೇಕು. ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳೋಣ. ಪ್ರತಿಭಟನೆಯನ್ನು ನಿಲ್ಲಿಸಬೇಕು. ಮೇ 4 ರ ನಂತರದ ಸಂಬಳದ ಬಗ್ಗೆ ಚೆರ್ಚೆ ಮಾಡಿ ಸಂಬಳ ಹೆಚ್ಚು ಮಾಡೋಣ. ನನಗೆ ವಿಶ್ವಾಸವಿದೆ ನಾಳೆ ಸಾರಿಗೆ ಮುಷ್ಕರಕ್ಕೆ ಇಳಿಯಲ್ಲ, ಒಂದು ವೇಳೆ ಪರ್ಯಾಯ ವ್ಯವಸ್ಥೆ ಮಾಡಿದ್ರೆ ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಹೇಳಿದರು.

BDR 1

Share This Article
Leave a Comment

Leave a Reply

Your email address will not be published. Required fields are marked *