Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಪಾದನೆ ನಿಂತು ಹೋಗಿದೆ, ಜೀವನ ಕಷ್ಟವಾಗಿದೆ: ರಘು ದೀಕ್ಷಿತ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸಂಪಾದನೆ ನಿಂತು ಹೋಗಿದೆ, ಜೀವನ ಕಷ್ಟವಾಗಿದೆ: ರಘು ದೀಕ್ಷಿತ್

Cinema

ಸಂಪಾದನೆ ನಿಂತು ಹೋಗಿದೆ, ಜೀವನ ಕಷ್ಟವಾಗಿದೆ: ರಘು ದೀಕ್ಷಿತ್

Public TV
Last updated: October 13, 2020 7:15 am
Public TV
Share
5 Min Read
raghu dixit 6
SHARE

ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಹಾಗೂ ಲಾಕ್ಡೌನ್ನಿಂದ ಎದುರಿಸಿದ ಸಮಸ್ಯೆಗಳ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ನೋಡೋಣ ಬನ್ನಿ.

1.ಹಾಯ್ ಸರ್ ಹೇಗಿದ್ದೀರಾ..! ಲಾಕ್ ಡೌನ್ ಸಮಯವನ್ನ ಹೇಗೆ ಕಳೆದ್ರಿ.?
ತುಂಬಾ ಚೆನ್ನಾಗಿದ್ದೀನಿ..ಲಾಕ್ ಡೌನ್ ಸಮಯದಲ್ಲಿ ಫುಲ್ ಬ್ಯುಸಿ ಇದ್ದೆ. ಒಂದಿಷ್ಟು ಸಾಂಗ್ ಕಂಪೋಸ್ ಮಾಡ್ದೆ. ಹೊಸ ಹೊಸ ಐಡಿಯಾ ಹೊಳೆಯಿತು ಅದನೆಲ್ಲ ಇಂಪ್ರೂವೈಸ್ ಮಾಡ್ತಾ ಇದ್ದೆ. ಜೊತೆಗೆ ಆನ್ಲೈನ್ ಪಿಯಾನೋ ಕ್ಲಾಸ್ಗೆ ಸೇರಿಕೊಂಡಿದ್ದೇನೆ. ಫ್ರೀ ಆಗಿರೋಕಂತು ಟೈಂ ಸಿಗಲಿಲ್ಲ ಫುಲ್ ಬ್ಯುಸಿ ಆಗಿದ್ದೆ ನಾನು.

raghu dixit 4

2.ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದೆ. ಈ ಹಾಡಿನ ವಿಶೇಷತೆ ಬಗ್ಗೆ ಹೇಳಿ.
ಲಾಕ್ಡೌನ್ ಸಮಯದಲ್ಲಿ ಲವ್ ಕಾನ್ಸೆಪ್ಟ್ ಇಟ್ಟುಕೊಂಡು ಏಳು ಹಾಡುಗಳನ್ನು ಬರೆದಿದ್ದೇನೆ..ಅದರಲ್ಲಿ ಒಂದು ಈ ಸುನಾಮಿ ವಿಡಿಯೋ ಸಾಂಗ್..ಲವ್ ಅಂದ್ರೆ ಬರೀ ಹುಡುಗ- ಹುಡುಗಿ ಪ್ರೀತಿ ಮಾತ್ರ ಅಲ್ಲ ಸಾಕು ಪ್ರಾಣಿಗಳ ಮೇಲೆ, ನೇಚರ್, ಟ್ರಾವೆಲ್ ಇವುಗಳನ್ನು ಪ್ರೀತಿಸುವುದು ಕೂಡ ಪ್ರೀತಿನೆ. ಈ ಕಾನ್ಸೆಪ್ಟ್ ಇಟ್ಟುಕೊಂಡು ಸುನಾಮಿ ಅನ್ನೋ ಆಲ್ಬಂ ಸಾಂಗ್ ಮಾಡಿದ್ದೀನಿ. ಅದರಲ್ಲಿ ಮೊದಲನೇ ಆಲ್ಬಂ ಸಾಂಗ್ ಸುನಾಮಿಯನ್ನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದೇನೆ, ಜನವರಿಯಲ್ಲಿ ನನ್ನ ಸಾಕು ನಾಯಿ ತುಂಟಿ ಮನೆಬಿಟ್ಟು ಹೋಯ್ತು ಮತ್ತೆ ಬರಲೇ ಇಲ್ಲ. ಅದ್ರ ಮೇಲಿರೋ ಪ್ರೀತಿ ಇಟ್ಟುಕೊಂಡು ಈ ಹಾಡು ಬರೆದೆಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಾನ್ಸೆಪ್ಟ್ ಮೆಚ್ಚಿಕೊಂಡಿದ್ದಾರೆ. ಉಳಿದ ಆರು ಹಾಡುಗಳನ್ನು ಒಂದೊಂದಾಗಿಯೇ ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಮಾಡುತ್ತೇನೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಸುನಾಮಿ ಆಲ್ಬಂ ಸಾಂಗ್ ಬಿಡುಗಡೆಯಾಗುತ್ತಿದೆ.

raghu dixit 3

3.ಸುನಾಮಿ ವಿಡಿಯೋ ಎಲ್ಲರಿಗೂ ಕನೆಕ್ಟ್ ಆಗುತ್ತೆ ಈ ಕಾನ್ಸೆಪ್ಟ್ ಹೊಳೆದದ್ದು ಹೇಗೆ. ?
ಇದರ ಎಲ್ಲ ಕ್ರೆಡಿಟ್ ನಟಿ ಸಂಯುಕ್ತ ಹೊರನಾಡ್ಗೆ ಹೋಗಬೇಕು. ಆಕೆ ಪ್ರಾಣಿ ಪ್ರೇಮಿ. ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ಗಳನ್ನ ನೋಡ್ತಿದ್ದೆ. ಅವರಿಗೆ ಈ ವಿಡಿಯೋನಲ್ಲಿ ಹಾಡ್ತೀರಾ ಅಂದಾಗ ಒಪ್ಪಿಕೊಂಡ್ರು.ಸುನಾಮಿ ವಿಡಿಯೋಗಾಗಿ ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಅವರು ಹಾಡಿದ್ದಾರೆ. ಜೊತೆಗೆ ವಿಡಿಯೋ ಆ ರೀತಿ ಬರೋದಕ್ಕೆ ಮೂಲ ಕಾರಣ ಅವರೇ. ಸೆಲೆಬ್ರೆಟಿಗಳು, ಸ್ನೇಹಿತರು, ಫ್ಯಾನ್ಸ್ ಕಾಂಟ್ಯಾಕ್ಟ್ ಮಾಡಿ ಸಾಕು ಪ್ರಾಣಿಗಳ ಜೊತೆ ಇರೋ ಪೋಟೋ ಕಲೆಕ್ಟ್ ಮಾಡಿ ಹಾಡಿಗೆ ತಕ್ಕ ಹಾಗೆ ಅದನ್ನು ಎಡಿಟ್ ಮಾಡಿಸಿದ್ದಾರೆ. ಅವರಿಗೆ ಸಿನಿಮಾ ಬಗ್ಗೆ ಗೊತ್ತಿರೋದ್ರಿಂದ ಇಡೀ ಕಾನ್ಸೆಪ್ಟ್ ಅವರೇ ಸಿದ್ದ ಮಾಡಿದ್ರು.ನಾನು ಸಾಹಿತ್ಯ ಮತ್ತು ಸಂಗೀತ ಕೆಲಸ ಮಾಡಿದೆ. ಈಗ ಈ ಹಾಡಿಗೆ ಸಿಕ್ತಿರೋ ಮೆಚ್ಚುಗೆ ಕಂಡು ತುಂಬಾ ಖುಷಿಯಾಗ್ತಿದೆ. ನಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ಪ್ರೀತಿ ಸಿಕ್ಕಿದೆ ಎಂಬ ತೃಪ್ತಿ ಇದೆ.

raghu dixit 5

4.ಕೋವಿಡ್-19 ನಿಂದ ಸಿನಿಮಾಗಳು ನಿಂತು ಹೋಗಿದೆ ಆರ್ಥಿಕಸಮಸ್ಯೆ ಎದುರಾಯಿತಾ..?
ಇದೊಂದು ವೈರಸ್ ಎಲ್ಲಿಂದ ಬಂತೋ ಬೇಗ ತೊಲಗಿದರೆ ಸಾಕಾಗಿದೆ. ನನಗೆ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಾಯಿತು. ನಾನು ನನ್ನ ಮೋಟರ್ ಸೈಕಲ್ ಮಾರಬೇಕಾದ ಅನಿವಾರ್ಯತೆ ಎದುರಾಯಿತು. ನಾವು ಈ ಮಾತು ಹೇಳಿದ್ರೆ ಯಾರೂ ನಂಬೋದಿಲ್ಲ, ನಿಜವಾಗಿಯೂ ಇದು ಸತ್ಯ. ಬೇರೆ ದಾರಿಯಿಲ್ಲದೆ ಮೋಟರ್ ಸೈಕಲ್ ಮಾರಿದೆ. ಇದೆಲ್ಲ ಬೇಗ ಸುಧಾರಿಸಿ ಎಲ್ಲ ಮೊದಲಿನ ಸ್ಥಿತಿಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

raghu dixit 2

5.ಸಂಗೀತ ನಿರ್ದೇಶಕನಾಗಿ ಹಾಡುಗಾರನಾಗಿ ಇಷ್ಟು ವರ್ಷದ ಪಯಣದ ಬಗ್ಗೆ ಹೇಳಿ.
ತುಂಬಾ ಅದೃಷ್ಟ ಮಾಡಿದ್ದೇನೆ. ನಾನು ಶಾಸ್ತ್ರೋಕ್ತವಾಗಿ ಸಂಗೀತವನ್ನು ಕಲಿತು ಬಂದವನಲ್ಲ. ಈಗ ಕಲಿಯುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಹಾಡುಗಳನ್ನ ಮೆಚ್ಚಿ ಆಶೀರ್ವದಿಸಿ ಇಲ್ಲಿವರೆಗೂ ಜನ ನನ್ನನ್ನು ಕರೆದುಕೊಂಡು ಬಂದಿದ್ದಾರೆ ಈ ಪ್ರೀತಿ ಅಭಿಮಾನಕ್ಕೆ ನಾನು ಎಂದಿಗೂ ಆಭಾರಿ. ಎಲ್ಲಾ ಆ ಭಗವಂತನ ಕೃಪೆ. ಎಷ್ಟೇ ಏಳು ಬೀಳುಗಳನ್ನ ಕಂಡರೂ ನನ್ನ ಅಭಿಮಾನಿಗಳು ಯಾವತ್ತೂ ನನ್ನ ಕೈ ಬಿಡಲಿಲ್ಲ. ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ ಅಂದ್ರೆ ಒಮ್ಮೊಮ್ಮೆ ನಂಬೋಕೆ ಅಸಾಧ್ಯ ಅನ್ನಿಸುತ್ತೆ.

Raghu

6.ಲಾಕ್ಡೌನ್ ಅವಧಿಯಲ್ಲಿ ಹೊಸ ಹಾಡುಗಳನ್ನ ಕಂಪೋಸ್ ಮಾಡಿದ್ರಿ ಅಂತ ಹೇಳಿದ್ರಿ.
ಹೌದು, ಲಾಕ್ಡೌನ್ ಸಮಯವನ್ನು ಸಂಪೂರ್ಣ ಮ್ಯೂಸಿಕ್ಗಾಗಿ ಮೀಸಲಿಟ್ಟಿದ್ದೆ. ಹತ್ತು ಹಾಡುಗಳನ್ನು ನಾಲ್ಕು ಭಾಷೆಯಲ್ಲಿ ಕಂಪೋಸ್ ಮಾಡಿದ್ದೇನೆ. ನಾನೇ ಲಿರಿಕ್ಸ್ ಬರೆದು ಮ್ಯೂಸಿಕ್ ಕಂಪೋಸ್ ಮಾಡಿದ್ದೇನೆ. ಇನ್ನೊಂದಿಷ್ಟು ಕೆಲಸಗಳು ಬಾಕಿ ಇದೆ. ಅದಾದ ನಂತರ ಅವುಗಳನ್ನು ಬಿಡುಗಡೆ ಮಾಡುತ್ತೇನೆ.ಈ ಹಾಡುಗಳು ಕನ್ನಡ, ಹಿಂದಿ, ತೆಲುಗು. ತಮಿಳು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗ್ತಿದೆ. ಸುನಾಮಿ ಆಲ್ಬಂ ಕೂಡ ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದ್ರ ಜೊತೆಗೆ ಏಳು ಹಾಡುಗಳಿರುವ ಸುನಾಮಿ ಎಂಬ ಆಲ್ಬಂ ಸಾಂಗ್ ಮಾಡಿದ್ದೇನೆ. ಅದನ್ನು ಒಂದೊಂದಾಗಿ ನನ್ನ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡುತ್ತೇನೆ. ಈಗಾಗಲೇ ಒಂದು ಹಾಡನ್ನು ಬಿಡುಗಡೆ ಮಾಡಿದ್ದೇನೆ. ತುಂಬಾ ಮೆಚ್ಚುಗೆ ಪಡೆದುಕೊಂಡಿದೆ.

raghu dixit 7

7.ಯಾವ, ಯಾವ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡ್ತಿದ್ದೀರಾ.?
ಸೂರಜ್ ಅಭಿನಯದ ನಿನ್ನ ಸನಿಹಕೆ, ಗರುಡ, ಆರ್ಕೆಸ್ಟ್ರಾ ಸಿನಿಮಾಗಳಿಗೆ ಬ್ಯಾಗ್ರೌಂಡ್ ಸ್ಕೋರ್ ಕೆಲಸ ನಡೆಯುತ್ತಿದೆ. ಇದ್ರ ಜೊತೆಗೆ ನನ್ನ ಬ್ಯಾಂಡ್ನಲ್ಲಿ ಹತ್ತು ಸಾಂಗ್ ರೆಡಿಯಾಗಿದೆ, ಅವುಗಳ ಕೆಲಸ ಕೂಡ ನಡೆಯುತ್ತಿದೆ.

8.ಕೊರೊನಾಯಿಂದ ಸ್ಟೇಜ್ ಪರ್ಫಾಮೆನ್ಸ್ ನಿಂತು ಹೋಗಿದೆ ಎಷ್ಟು ಮಿಸ್ ಮಾಡಿಕೊಂಡ್ರಿ.?
ಅಯ್ಯೋ ತುಂಬಾ ಕಷ್ಟ ಆಯ್ತು. ನನಗೆ ಲೈವ್ ಬ್ಯಾಂಡ್ ಪರ್ಫಾಮೆನ್ಸ್ ಇಲ್ಲದೆ ಮೈ ಪರಚಿಕೊಳ್ಳುವ ಹಾಗಾಗಿತ್ತು. ತುಂಬಾ ಮಿಸ್ ಮಾಡಿಕೊಂಡೆ. ಜೊತೆಗೆ ಸಂಪಾದನೆ ನಿಂತು ಹೋಗಿದೆ. ನಮಗೆ ತಿಂಗಳ ಸಂಬಳಇಲ್ಲ, ಕೆಲಸ ಇದ್ರೆ ಮಾತ್ರ ಸಂಬಳ ಹೀಗಾಗಿ ತುಂಬಾ ಕಷ್ಟ ಆಗಿದೆ. ನಾನು ನನ್ನ ಮೋಟರ್ ಬೈಕ್ ಇಎಂಐ ಕಟ್ಟೋಕೆ ಆಗದೇ ಮಾರಿ ಬಿಟ್ಟೆ. ನನ್ನ ಟೀಂನವರ ಜೀವನ ತುಂಬಾ ಕಷ್ಟ ಆಗಿದೆ. ಹೇಗೋ ಜೀವನ ಸಾಗಿಸಿಕೊಂಡು ಹೋಗ್ತಿದ್ದಾರೆ.ಆರಂಭದಲ್ಲಿ ನಾವೇ ಸಂಕಷ್ಟದಲ್ಲಿರುವವರಿಗೆ ಫಂಡ್ ರೈಸ್ ಮಾಡ್ತಾ ಇದ್ವಿ ಆದ್ರೀಗ ನಮ್ಮ ಪರಿಸ್ಥಿತಿ ಕೂಡ ಫಂಡ್ ರೈಸ್ ಮಾಡಿಕೊಟ್ಟರೆ ಬದುಕೋ ಹಂತಕ್ಕೆ ಬಂದಿದೆ. ನಮ್ಮ ಜೀವನ ನಿಂತಿರೋದೇ ಲೈವ್ ಕನ್ಸರ್ಟ್ ಮೇಲೆ. ಏಳು ತಿಂಗಳಿನಿಂದ ಯಾವುದೇ ಲೈವ್ ಬ್ಯಾಂಡ್ ನಡೆದಿಲ್ಲ.ಸಂಪಾದನೆ ನಿಂತು ಹೋಗಿದೆ.

9.ನಿಮಗೆ ತುಂಬಾ ಇಷ್ಟ ಆಗುವ ಹಾಗೂ ತುಂಬಾ ಕಾಡುವ ಹಾಡು ಯಾವುದು.?
ಖಂಡಿತ ಇದೆ. ನನ್ನದೇ ಹಿಂದಿ ಹಾಡು ಒಂದಿದೆ ಅಂಬರ್ ಅಂತ ಆ ಹಾಡು ನನಗೆ ತುಂಬಾ ಇಷ್ಟ. ಅದು ಬಿಟ್ರೆ ಕನ್ನಡಲ್ಲಿ ಶಿಶುನಾಳ ಶರೀಫರ ಮೋಹದ ಹೆಂಡತಿ ಸಾಂಗ್ ಬಹಳ ಇಷ್ಟ. ಈ ಎರಡೂ ಹಾಡುಗಳನ್ನು ನಾನು ಯಾವಾಗಲು ಗುನುಗುತ್ತಿರುತ್ತೇನೆ.

Raghu

10.ಸಿನಿಮಾದಲ್ಲಿ ನಟಿಸೋ ಆಸಕ್ತಿ ಇದೆಯಾ..?
ಈಗಾಗಲೇ ಮೂರು ಸಿನಿಮಾಗಳನ್ನ ಒಪ್ಪಿಕೊಂಡಿದ್ದೇನೆ. ವಿನಯ್ ಶಾಸ್ತ್ರಿ ನಿರ್ದೇಶನದ ಓಬೀರಾಯನ ಕಥೆ ಚಿತ್ರದಲ್ಲಿ ಸ್ನೇಹಿತನ ಪಾತ್ರ ಮಾಡುತ್ತಿದ್ದೇನೆ. ಆರ್ ಜೆ ಪ್ರದೀಪ್ ಅವರ ವೆಬ್ ಸಿರೀಸ್ ಒಂದರಲ್ಲಿ ಮುಖ್ಯ ಪಾತ್ರ ಹಾಗೂ ಸಂಗೀತ ನಿರ್ದೇಶನ ಎರಡೂ ನಾನೇ ನಿರ್ವಹಿಸುತ್ತಿದ್ದೇನೆ.ಇದಲ್ಲದೇ ಇನ್ನೊಂದು ಸಿನಿಮಾ ಮಾತುಕತೆಯಾಗಿದ್ದು ಅದರಲ್ಲಿ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದೇನೆ. ಅದ್ರ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ. ಮೂರೂ ಸಿನಿಮಾಗಳ ಶೂಟಿಂಗ್ ಇನ್ನು ಆರಂಭವಾಗಿಲ್ಲ.

11.ತುಂಬಾ ಸಣ್ಣ ಆಗಿದ್ದೀರಾಡಯೆಟ್ ಮಾಡ್ತಾ ಇದಿರಾ..?
ಹೌದು, ಸಣ್ಣ ಆಗಿದ್ದೀನಿ. ಮೊದಲೆಲ್ಲ ಫಿಟ್ನೆಸ್ ಬಗ್ಗೆ ಅಷ್ಟು ಗಮನ ಕೊಡ್ತಾ ಇರ್ಲಿಲ್ಲ. ಇತ್ತೀಚೆಗೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ ಆಗಿದೆ. ಪ್ರತಿದಿನ ಪ್ರಾಣಯಾಮ, ಯೋಗ ಮಾಡುತ್ತಿದ್ದೇನೆ. ಫುಡ್ ಡಯೆಟ್ ಕೂಡ ಮಾಡ್ತಾ ಇದ್ದೀನಿ. ಇದೆಲ್ಲದರಿಂದ ಆರೋಗ್ಯ ಸ್ವಲ್ಪ ಸುಧಾರಿಸಿದೆ. ನಮ್ಮ ಆರೋಗ್ಯ ನಾವೇ ನೋಡಿಕೊಳ್ಳಬೇಕಲ್ವಾ ಹಾಗಾಗಿ ಫಿಟ್ನೆಸ್ ಕಡೆ ಗಮನ ನೀಡುತ್ತಿದ್ದೇನೆ.

TAGGED:Corona VirusmusicPublic TVRaghu Dixitsandalwoodಕೊರೊನಾ ವೈರಸ್ಪಬ್ಲಿಕ್ ಟಿವಿರಘು ದೀಕ್ಷಿತ್ಸಂಗೀತಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories
arvind reddy threat
ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ; ಆರೋಪಿ ಬಂಧನ
Bengaluru City Cinema Latest Main Post Sandalwood
again Bigg Boss Rajat controversy photo shoot in villain look while smoking a cigarette Mysuru
ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ
Cinema Crime Karnataka Latest Mysuru Top Stories TV Shows

You Might Also Like

crime news bhadravati police shoot rowdy sheeter leg
Crime

ಜೈಲಿನಿಂದ ಬಿಡುಗಡೆಯಾದ ಮರುದಿನವೇ ಡಕಾಯಿತಿಗೆ ಹೊಂಚು – ರೌಡಿಶೀಟರ್ ಕಾಲಿಗೆ ಗುಂಡು

Public TV
By Public TV
1 minute ago
Gruhalakshmi Scheme 1
Bengaluru City

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ – ಕ್ರಮವಹಿಸಲು ಸಿಎಸ್‌ಗೆ ಸಿಎಂ ಆದೇಶ

Public TV
By Public TV
44 minutes ago
IG Vartika katiyar
Bellary

ಫೈಲ್‌ಗಳನ್ನು ಹೊಸ ಅಧಿಕಾರಿಗಳಿಗೆ ಕೊಡ್ಬೇಡಿ – ವರ್ಗಾವಣೆಯಾದ್ರೂ ಅಧಿಕಾರಿಗಳಿಗೆ ವರ್ತಿಕಾ ಕರೆ

Public TV
By Public TV
1 hour ago
Harley Davidson bike trump
Automobile

India-US Trade Deal | ಭಾರತದಲ್ಲಿ ಹಾರ್ಲೆ- ಡೇವಿಡ್ಸನ್‌ ಬೈಕ್ ಬೆಲೆ ಭಾರೀ ಇಳಿಕೆ!

Public TV
By Public TV
2 hours ago
Kanakapura 40 Wild Elephant Spotted
Districts

ಕನಕಪುರದ ಕಾಡಂಚಿನ ಗ್ರಾಮದಲ್ಲಿ 40 ಕಾಡಾನೆಗಳ ಹಿಂಡು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

Public TV
By Public TV
3 hours ago
Daughter in law commits suicide by hanging herself at home Basava kalyana Bidar
Bidar

ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯಿಂದ ಕಿರುಕುಳ – ಮನೆಯಲ್ಲೇ ನೇಣು ಬಿಗಿದು ಸೊಸೆ ಆತ್ಮಹತ್ಯೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?